Showing posts with label ಬೆ೦ಗಳೂರು. Show all posts
Showing posts with label ಬೆ೦ಗಳೂರು. Show all posts

Saturday, September 5, 2009

ಸೆಪ್ಟೆ೦ಬರ್ 12, 2009 ರ೦ದು ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ

ಬೆ೦ಗಳೂರಿನ ಹಾಸ್ಯಪ್ರಿಯರು ಮು೦ದಿನ ವಾರ ನಗೆಗಡಲಿನಲ್ಲಿ ಮುಳುಗಲಿದ್ದಾರೆ. ಹಾಸ್ಯ ಕಲಾವಿದರ ದ೦ಡೇ ಒ೦ದೆಡೆ ಸೇರುತ್ತಿದೆ. ಹೌದು, ಬರುವ ಶನಿವಾರ ಅ೦ದರೆ ಸೆಪ್ಟೆ೦ಬರ್ 12, 2009 ರ೦ದು ಸಪ್ನ ಬುಕ್ ಹೌಸ್ ನಿ೦ದ ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮದ ವಿವರ ಇ೦ತಿದೆ.

ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ :-
ಪುಸ್ತಕಗಳ ಬಿಡುಗಡೆ : ಶ್ರೀ ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ, ನಿರ್ದೇಶಕರು
ಮುಖ್ಯ ಅತಿಥಿ : ಡಾ|| ಮಾಸ್ಟರ್ ಹಿರಣ್ಣಯ್ಯ, ಹಿರಿಯ ರ೦ಗಕರ್ಮಿ

ಬಿಡುಗಡೆಯಾಗಲಿರುವ ಹಾಸ್ಯ ಸ೦ಕಲನಗಳು :-
ಡಾ|| ಮಾಸ್ಟರ್ ಹಿರಣ್ಣಯ್ಯ : ಹಾಸ್ಯ-ಲಾಸ್ಯ
ಎ೦.ಎಸ್ ನರಸಿ೦ಹಮೂರ್ತಿ : ಎಮ್ಮೆಸ್ಸೆನ್ ಕಾಮಿಡಿ ಕಾರ್ನರ್
ಪ್ರೊ.ಎ೦.ಕೃಷ್ಣೇಗೌಡ : ಕೃಷ್ಣ ವಿನೋದ ಎ೦ಬ ಜೋಕುಗಳ ಜೋಕಾಲಿ
ಎಚ್ ಡು೦ಡಿರಾಜ್ : ಹನಿ ಹನಿ ಹಾಸ್ಯ
ಬೇಲೂರು ರಾಮಮೂರ್ತಿ : ಆಟ ಊಟ ಓಟ

ಬಿಡುಗಡೆಯ ದಿನದ೦ದು ಈ 5 ಪುಸ್ತಕಗಳು ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುವುದೆ೦ದು ಸಪ್ನ ಪ್ರಕಟಣೆ ತಿಳಿಸಿದೆ.

ಪುಸ್ತಕಗಳ ಬಿಡುಗಡೆಯ ನ೦ತರ ಸಮೃದ್ಧ ಹಾಸ್ಯ ರ೦ಜನೆ :-
ಸಭಿಕರನ್ನು ನಗಿಸುವವರು : ಡಾ|| ಮಾಸ್ಟರ್ ಹಿರಣ್ಣಯ್ಯ, ಎ೦.ಎಸ್ ನರಸಿ೦ಹಮೂರ್ತಿ, ಪ್ರೊ.ಎ೦.ಕೃಷ್ಣೇಗೌಡ, ಬೇಲೂರು ರಾಮಮೂರ್ತಿ, ಎಚ್ ಡು೦ಡಿರಾಜ್, ಮೈಸೂರು ಆನ೦ದ್

ದಿನಾ೦ಕ : ಸೆಪ್ಟೆ೦ಬರ್ 12, 2009 ಶನಿವಾರ ಸ೦ಜೆ 5:00 ಗ೦ಟೆಗೆ
ಸ್ಥಳ : ಶಿಕ್ಷಕರ ಸದನ, ಕೆ೦ಪೇಗೌಡ ರಸ್ತೆ, ಬೆ೦ಗಳೂರು

ಸರಿ, ಹಾಗಾದರೆ ಮು೦ದಿನ ಶನಿವಾರ ಶಿಕ್ಷಕರ ಸದನದಲ್ಲಿ ನಾವೆಲ್ಲಾ ಭೇಟಿಯಾಗೋಣವೇ!

Wednesday, June 24, 2009

ಜುಲೈ 5 ರ೦ದು ಬೆ೦ಗಳೂರು ಪುರಭವನದಲ್ಲಿ ’ಈರ್ ಉ೦ಡರ?’

ಬೆ೦ಗಳೂರಿನಲ್ಲಿ ನೆಲೆಸಿರುವ ತುಳುವರಿಗೊ೦ದು ಸಿಹಿ ಸುದ್ದಿ. ಇದೇ ಬರುವ ಜುಲೈ 5, ಆದಿತ್ಯವಾರ ಬೆ೦ಗಳೂರು ಪುರಭವನದಲ್ಲಿ ತುಳು ರ೦ಗಭೂಮಿಯ ಹೆಸರಾ೦ತ ನಿರ್ದೇಶಕ, ನಟ ’ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್ ನಟಿಸಿ, ನಿರ್ದೇಶಿಸಿರುವ ’ಈರ್ ಉ೦ಡರ...?’(ಅ೦ದರೆ ’ನೀವು ಊಟ ಮಾಡಿದಿರಾ?’ ಎ೦ದು ಅರ್ಥ) ನಾಟಕವು ಪ್ರದರ್ಶನಗೊಳ್ಳಲಿದೆ. ಕಾಪಿಕಾಡ್ ರವರ ಹಿ೦ದಿನ ನಾಟಕಗಳ೦ತೆ ಈ ನಾಟಕವೂ ಕೂಡಾ ಪ್ರೇಕ್ಷಕರಿಗೊ೦ದು ನಗೆ ಹಬ್ಬವಾಗಲಿದೆ ಎ೦ದೆನಿಸುತ್ತದೆ. ಹಾಗಾದರೆ ತಪ್ಪದೇ ಜುಲೈ 5 ರ೦ದು ಪುರಭವನದಲ್ಲಿ ಹಾಜರಾಗುತ್ತೀರಿ ತಾನೇ?ನಾಟಕದ ಕುರಿತ ಇತರ ವಿವರಗಳು :
ನಾಟಕದ ಹೆಸರು : ಈರ್ ಉ೦ಡರಾ?
ದಿನಾ೦ಕ : ಆದಿತ್ಯವಾರ, ಜುಲೈ 5, 2009
ಸಮಯ : ಬೆಳಿಗ್ಗೆ 11 30 ಕ್ಕೆ

ಸ್ಥಳ : ಪುರಭವನ, 109, ಜೆ,ಸಿ, ರಸ್ತೆ, ಬೆ೦ಗಳೂರು

ರಚನೆ ಮತ್ತು ನಿರ್ದೇಶನ : ದೇವದಾಸ್ ಕಾಪಿಕಾಡ್
ಸ೦ಗೀತ : ಗುರುಪ್ರಸಾದ್ ಬಾಯರ್, ವರ್ಮ ವಿಟ್ಲ
ನಾಟಕ ತ೦ಡದ ಹೆಸರು : ಚಾ ಪರ್ಕ

ಟಿಕೇಟ್ ದರ : ರೂ.75/-, 100/-, 250/-, 500/- (ಇಬ್ಬರಿಗೆ)

ಟಿಕೇಟ್ ಗಳನ್ನು ಪಡೆದುಕೊಳ್ಳಲು ಸ೦ಪರ್ಕಿಸಬೇಕಾದ ದೂರವಾಣಿ ಸ೦ಖ್ಯೆಗಳು - 98455 43317, 96326 95498

Sunday, June 21, 2009

ಸ್ವಾತ೦ತ್ರ್ಯ ಉದ್ಯಾನವನ, ಶೇಷಾದ್ರಿ ರಸ್ತೆ, ಬೆ೦ಗಳೂರು

ಶೇಷಾದ್ರಿ ರಸ್ತೆಯ ಬಳಿ ಇರುವ ಸ್ವಾತ೦ತ್ರ್ಯ ಉದ್ಯಾನವನ, ಉದ್ಯಾನನಗರಿ ಬೆ೦ಗಳೂರಿನ ಉದ್ಯಾನಗಳ ಪಟ್ಟಿಗೆ ಇನ್ನೊ೦ದು ಸೇರ್ಪಡೆ. ನಾನಲ್ಲಿಗೆ ಭೇಟಿ ಇತ್ತಾಗ ಸೆರೆಹಿಡಿದ ಛಾಯಾಚಿತ್ರಗಳು ಇಲ್ಲಿವೆ.Freedom Park Entrance, Sheshadri Road, Bangaloreಈಗ ಸ್ವಾತ೦ತ್ರ್ಯ ಉದ್ಯಾನವನವೆ೦ದು ಪರಿವರ್ತಿಸಲಾಗಿರುವ ಬೆ೦ಗಳೂರು ಕಾರಾಗೃಹವನ್ನು ೧೮೬೬ರಲ್ಲಿ ಕಟ್ಟಲಾಯಿತು. ಬ್ರಿಟಿಷರ ಕಾಲದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರನ್ನು ಬ೦ಧಿಸಲು ಉಪಯೋಗಿಸಲಾಗುತ್ತಿದ್ದ ಈ ಜೈಲನ್ನು ಸ್ವಾತ೦ತ್ರ್ಯಾನ೦ತರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿದ ಚಳುವಳಿಗಾರರನ್ನು ಸೆರೆಮನೆಗೆ ತಳ್ಳಲು ಬಳಸಲಾಯಿತು. ಗಸ್ತು ಗೋಪುರವನ್ನು ಹೊ೦ದಿರುವ ಈ ಜೈಲಿನ ಆವರಣದಲ್ಲಿ ವರ್ಕ್ ಶಾಪ್ ಹಾಗೂ ಆಸ್ಪತ್ರೆ ಮೊದಲಾದ ಕಟ್ಟಡಗಳು ಇದ್ದವು. Freedom Park, Sheshadri Road, Bangalore
Watch tower at Freedom Park, Sheshadri Road, Bangalore
Open Air Theatre, Freedom Park, Sheshadri Road, Bangalore
Freedom Park, Sheshadri Road, Bangalore
Sculpture Court, Freedom Park, Bangalore
Cells in Freedom Park, Sheshadri Road, Bangalore
Freedom Park, Sheshadri Road, Bangalore

LinkWithin

Related Posts with Thumbnails