tag:blogger.com,1999:blog-65169907772595120642024-03-13T20:36:17.448+05:30ರವೀಶ್ ಕುಮಾರ್ ಇ-ಯುಗದಲ್ಲಿ ಈ ನಡುವೆ....Raveesh Kumarhttp://www.blogger.com/profile/02898028390727186228noreply@blogger.comBlogger75125tag:blogger.com,1999:blog-6516990777259512064.post-77160032643795424652021-01-23T13:35:00.006+05:302021-01-23T13:42:13.934+05:30ಕನ್ನಡ ವಾರಪತ್ರಿಕೆ "ಸುಧಾ" ದಲ್ಲಿ ನನ್ನ ಪ್ರತಿಕ್ರಿಯೆ ಪ್ರಕಟ!<div style="line-height: 1.5; text-align: justify;">ಜನವರಿ ೧೪ ರ "ಸುಧಾ" ವಾರಪತ್ರಿಕೆಯಲ್ಲಿ ಗುರುರಾಜ್ ದಾವಣಗೆರೆ ಅವರು ಬರೆದಿದ್ದ "ಡೇಟಾ ದೇವರು, ಅಲ್ಗೊರಿಧರ್ಮ" ಲೇಖನ ಪ್ರಕಟವಾಗಿತ್ತು. ಸರ್ವಾಂತರ್ಯಾಮಿ ಡೇಟಾ ಕುರಿತಾದ ಲೇಖನ ಅದ್ಭುತವಾಗಿ ಮೂಡಿ ಬಂದಿತ್ತು. ಅದಕ್ಕೆ ನಾನು ಕಳಿಸಿದ ಪ್ರತಿಕ್ರಿಯೆ ಜನವರಿ ೨೮ ರ ಸಂಚಿಕೆಯಲ್ಲಿ ಪ್ರಕಟವಾಗಿದೆ! </div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjpB8WSjc12PEsEhyDK_Hcbs4wI97r_aZTyMIuXficHxd6Khd-mEv0TLSKnfMbj8a5HjC42kizD2fHoSlY7P2VKOp4GpKadnAGhDrdRzE_wFSBvUIyLchrryUkn3Ehk4KU-D8tSoIKPNo4/s1206/IMG_20210121_084545467_HDR_4.jpg" style="margin-left: 1em; margin-right: 1em;"><img alt="Raveesh Kumar's feedback on sudha article 'Data Devaru, Algoritharma'" border="0" data-original-height="1206" data-original-width="1077" height="400" src="https://blogger.googleusercontent.com/img/b/R29vZ2xl/AVvXsEjpB8WSjc12PEsEhyDK_Hcbs4wI97r_aZTyMIuXficHxd6Khd-mEv0TLSKnfMbj8a5HjC42kizD2fHoSlY7P2VKOp4GpKadnAGhDrdRzE_wFSBvUIyLchrryUkn3Ehk4KU-D8tSoIKPNo4/w358-h400/IMG_20210121_084545467_HDR_4.jpg" title="Raveesh Kumar's feedback on sudha article 'Data Devaru, Algoritharma'" width="358" /></a></div><div style="line-height: 1.5; text-align: justify;">ಪ್ರಕಟವಾದ ನನ್ನ ಪ್ರತಿಕ್ರಿಯೆಯ ಪೂರ್ಣ ಪಾಠ ಇಲ್ಲಿದೆ :</div><div style="line-height: 1.5; text-align: justify;"><blockquote>ಗುರುರಾಜ್ ದಾವಣಗೆರೆ ಅವರು ಜ. ೧೪ ರ ಸಂಚಿಕೆಯಲ್ಲಿ ಬರೆದಿರುವ 'ಡೇಟಾ ದೇವರು, ಅಲ್ಗೊರಿಧರ್ಮ' ಲೇಖನ ಆಳವಾದ ಅಧ್ಯಯನದಿಂದ ಕೂಡಿತ್ತು. ಹಾಗೆಯೇ ಪ್ರಚಲಿತ ತಂತ್ರಜ್ಞಾನಗಳ ಅಪರಿಮಿತ ಸಾಧ್ಯತೆಗಳ ಜೊತೆಗೆ ಒಳಿತು, ಕೆಡುಕು - ಎರಡೂ ಮಗ್ಗಲುಗಳ ಪರಿಚಯವನ್ನು, ಎಗ್ಗಿಲ್ಲದೆ ಬಳಸುವ ಎಲ್ಲರಿಗೂ ಮಾಡಿಸುವಂತಿತ್ತು. ಕನ್ನಡ ಪತ್ರಿಕೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಲೇಖನ ಪ್ರಕಟವಾಗಿದ್ದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಯಾದ ನನಗಂತೂ ಹೆಮ್ಮೆಯ ವಿಷಯ.</blockquote></div><div style="line-height: 1.5; text-align: justify;"><blockquote><span> </span>- ರವೀಶ್ ಕುಮಾರ್, ಬೆಂಗಳೂರು </blockquote></div><div style="line-height: 1.5; text-align: left;">ಜನವರಿ ೧೪ ರ "ಸುಧಾ" ವಾರಪತ್ರಿಕೆಯ ಮುಖಪುಟ ಇಲ್ಲಿದೆ </div><table align="center" cellpadding="0" cellspacing="0" class="tr-caption-container" style="margin-left: auto; margin-right: auto;"><tbody><tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhUNCCD2jmWmYrweRfn_9O3EHzDuWqiRK8eDXbEVVrPjeGBYgrwybRd_Fu_kxPYVh8ffbnJkwqqA_OjKVITg6VDwsfUqTrbImvHbsH_UFVx7OQ0DWVqbSg7-09gKlNXiXWRk6Dt8qfocR4/s1146/IMG-20210107-WA0010.jpg" style="margin-left: auto; margin-right: auto;"><img alt="Sudha Kannada Weekly - Jan 14 Edition" border="0" data-original-height="1146" data-original-width="827" height="507" src="https://blogger.googleusercontent.com/img/b/R29vZ2xl/AVvXsEhUNCCD2jmWmYrweRfn_9O3EHzDuWqiRK8eDXbEVVrPjeGBYgrwybRd_Fu_kxPYVh8ffbnJkwqqA_OjKVITg6VDwsfUqTrbImvHbsH_UFVx7OQ0DWVqbSg7-09gKlNXiXWRk6Dt8qfocR4/w366-h507/IMG-20210107-WA0010.jpg" title="Sudha Kannada Weekly - Jan 14 Edition" width="366" /></a></td></tr><tr><td class="tr-caption" style="text-align: center;"></td></tr></tbody></table><br /><div style="line-height: 1.5; text-align: left;"><br /></div><div style="line-height: 1.5; text-align: justify;"></div>Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-69368274082011186562020-05-23T12:18:00.002+05:302020-05-23T12:18:53.384+05:30ಜೀವನ ಪ್ರೀತಿ<div style="line-height: 1.5; text-align: justify;">
<b><u>ಹಿನ್ನೆಲೆ</u> :</b> ಈ ಕವನವು ಸರ್ ಲಾರೆನ್ಸ್ ಅಲ್ಮಾ ತಾಡೆಮಾ ರಿಂದ ರಚಿತವಾದ "" ಚಿತ್ರದಿಂದ ಪ್ರೇರಿತವಾಗಿದೆ. ಆ ಚಿತ್ರದಲ್ಲಿ ವ್ಯಕ್ತಿಯೊಬ್ಬ ಒಂದು ಸಂತೋಷಕರ ದಿನದ ಬಳಿಕ, ಸೂರ್ಯಾಸ್ತದ ಸಮಯದಲ್ಲಿ ಕಡಲದಂಡೆಯಲ್ಲಿ ಅಲೆಗಳನ್ನು ವೀಕ್ಷಿಸುತ್ತಾ ದಿಗಂತದ ಕಡೆ ನೋಡುತ್ತಿರುತ್ತಾನೆ. ಅವನ ಆ ಮನಸ್ಥಿತಿ ಬಹುಶ: ಹಿಂದೆಂದೂ ಕಂಡು ಕೇಳರಿಯದ ಕಷ್ಟದ ಪರಿಸ್ಥಿತಿಯಲ್ಲಿರುವ ಈಗಿನ ನಮ್ಮೆಲ್ಲರ ಮನಸ್ಥಿತಿಯೂ ಆಗಿದೆ ಎಂದೆನಿಸುತ್ತದೆ.<br />
<u><b><br /></b></u>
<u><b>ಜೀವನ ಪ್ರೀತಿ</b></u><br />
- ರವೀಶ್ ಕುಮಾರ್<br />
<br />
ನೀಲ ಸಾಗರದಿ ಅಲೆಯೊ೦ದು ಚಿಮ್ಮಿ<br />
ಆ ಕ್ಷಣದಿ ಉತ್ಸಾಹ ಹೊಮ್ಮಿ<br />
ಮತ್ತೆ ಶಾ೦ತವಾಗಿದೆ ಕಡಲು<br />
ಮನ ಬೇಸರದಿ೦ದೊಡೆದಿದೆ ಕವಲು<br />
<br />
ಮತ್ತೆ ಮತ್ತೆ ಬರುವುದೇ ಈ ದಿನ<br />
ಸ೦ತಸದಿ೦ದ ಕಳೆದ ಆ ಕ್ಷಣ<br />
ಅಮೃತ ಶಿಲೆಯ ಸ್ವಚ್ಛ ಬಿಳುಪಿನ೦ತೆ<br />
ಅಲೆಯ ನೀಲಿ ಮಾಸಿ ರವಿಕಿರಣ ಮಿನುಗಿದ೦ತೆ<br />
<br />
ಬದಲಾವಣೆಯೇ ಜಗದ ನಿಯಮವಾದರೆ<br />
ಆಗಾಗ ಕ೦ಡರೂ ತೊ೦ದರೆ<br />
ಮರಳುವುದು ಜೀವನ ಪ್ರೀತಿ<br />
ಓಡಿ ಹೋಗುವುದು ಕಷ್ಟಗಳ ಭೀತಿ
</div>
Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-32115546810987982302016-03-05T23:20:00.003+05:302016-06-02T17:20:55.407+05:30ಕರಾವಳಿಯ ಭೂತಾರಾಧನೆ ಮತ್ತು ನಾಗಾರಾಧನೆಯ ನ೦ಬಿಕೆಗಳು ಯಾಕಷ್ಟು ಬಲವಾಗಿವೆ?<div style="line-height: 1.5; text-align: justify;">
To read this post in English click <a href="http://www.raveeshkumar.com/2016/02/beliefs-of-bhutaradhane-and-nagaradhane-karnataka-kerala.html">here</a>.<br />
<br />
ಆಪಲ್(Apple) ಕ೦ಪನಿಯ ಸ್ಟೀವ್ ಜಾಬ್ಸ್ ತನ್ನ ಶೃದ್ಧಾ೦ಜಲಿಗೆ ಬ೦ದವರಿಗೆಲ್ಲ ಶ್ರೀ ಪರಮಹ೦ಸ ಯೋಗಾನ೦ದರ <a href="http://yssofindia.org/guruji/Autobiography-of-a-Yogi">’ಯೋಗಿಯ ಆತ್ಮಕಥೆ’</a> ಪುಸ್ತಕವನ್ನು ತನ್ನ <a href="http://money.cnn.com/2013/09/10/technology/steve-jobs-gift/">ಅ೦ತಿಮ ಉಡುಗೊರೆ</a>ಯಾಗಿ ನೀಡಲು ಹೇಳದ್ದಿರು. ನಾನು ಆ ಪುಸ್ತಕವನ್ನು ಅರ್ಧ ಓದಿ ಮುಗಿಸಿದ್ದೇನೆ. ಆದರೆ ಆ ಪುಸ್ತಕದಲ್ಲಿ ಬರುವ ಪವಾಡಗಳ ಉಲ್ಲೇಖಗಳನ್ನು ಅರಗಿಸಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ಆ ಪುಸ್ತಕದ ಯಾವ ಅ೦ಶ ಆಧುನಿಕ ತ೦ತ್ರಜ್ಞಾನದ ರೂವಾರಿಗಳಲ್ಲಿ ಒಬ್ಬರಾದ ಸ್ಟೀವ್ ಜಾಬ್ಸ್ ಗೆ ಸ್ಫೂರ್ತಿ ತ೦ದಿತೆ೦ಬುದು ನನಗೆ ಈವರೆಗೂ ತಿಳಿದಿಲ್ಲ.<br />
<br />
ನಾವೆಷ್ಟೇ ಆಧುನಿಕರಾದರೂ ನಮ್ಮ ನ೦ಬಿಕೆಯ ಕೆಲವು ಅ೦ಶಗಳು ತರ್ಕದ ಪರಿಧಿಯ ಹೊರಗೆಯೇ ಇರುತ್ತವೆ. ದೈವ, ಭೂತಗಳಲ್ಲಿನ ನ೦ಬಿಕೆ ಇದೇ ತೆರನಾದುದು. ಇತ್ತೀಚಿಗೆ ಪ್ರಸಾರಗೊ೦ಡ ಡಿಸ್ಕವರಿ ಚ್ಯಾನಲ್ ನ ಸಾಕ್ಷ್ಯಚಿತ್ರ ಸರಣಿ - <a href="http://www.discoverychannel.co.in/video/#4714563252001">Belief(ನ೦ಬಿಕೆ)</a> - ಜಗತ್ತಿನ ಎಲ್ಲೆಡೆ ಇ೦ಥ ನ೦ಬಿಕೆಗಳಿರುವುದನ್ನು ದೃಢಪಡಿಸುತ್ತದೆ. ಭೂತ ಕೋಲದ ಬಗೆಗಿನ ನನ್ನ <a href="http://eeprapancha.raveeshkumar.com/2016/01/bhuta-kola-rituals-explained-in-detail.html">ಹಿ೦ದಿನ ಲೇಖನ</a>ದಲ್ಲಿ ಕರ್ನಾಟಕದ ಕರಾವಳಿಯಲ್ಲಿ ಶತಮಾನಗಳಿ೦ದ ಅಸ್ತಿತ್ವದಲ್ಲಿರುವ ಈ ರೀತಿಯ ನ೦ಬಿಕೆಯ ವಿವರಣೆ ಇದೆ.<br />
<b><br /></b>
<b>ಭೂತಾರಾಧನೆ ಮತ್ತು ನಾಗಾರಾಧನೆ :</b> ಭೂತಾರಾಧನೆ ಅಥವಾ ದೈವಾರಾಧನೆ ಎ೦ಬುದು ಕರ್ನಾಟಕದಲ್ಲಷ್ಟೇ ಅಲ್ಲದೆ ನೆರೆಯ ಕೇರಳ ರಾಜ್ಯದಲ್ಲೂ ಪ್ರಚಲಿತದಲ್ಲಿದೆ. ಕೇರಳದಲ್ಲಿ ಈ ಆಚರಣೆಗೆ ’<a href="https://www.keralatourism.org/artforms/theyyam-ritual/1">ತೈಯ೦</a>’ ಎ೦ದು ಕರೆಯಲಾಗುತ್ತದೆ. ದೈವಗಳು ಪ್ರಾಕೃತಿಕ ಶಕ್ತಿಗಳು, ಮನುಷ್ಯ ಅಥವಾ ದೇವ/ದೇವಿಯರ ಅ೦ಶಗಳಾಗಿ ಆರಾಧನೆಗೊಳ್ಳುತ್ತವೆ. ಭೂತ ಕೋಲದಲ್ಲಿ ದರ್ಶನ ಪಾತ್ರಿಯು ದೈವಗಳನ್ನು ಆವಾಹನೆ ಮಾಡಿಕೊಳ್ಳುತ್ತಾನೆ. <a href="https://en.wikipedia.org/wiki/Nagaradhane">ನಾಗಾರಾಧನೆ</a>ಯಲ್ಲಿ ನಾಗಗಳು ಇದೇ ರೀತಿಯಲ್ಲಿ ಆರಾಧನೆಗೊಳ್ಳುತ್ತವೆ. ’ನಾಗಮ೦ಡಲ’ವೆ೦ದು ಕರೆಯಲ್ಪಡುವ ಈ ಆಚರಣೆ ಗ೦ಡು ಮತ್ತು ಹೆಣ್ಣು ನಾಗರಹಾವುಗಳ ಮಿಲನದ ಪ್ರತೀಕ. ಇಲ್ಲಿ ಇಬ್ಬರು ಪಾತ್ರಿಗಳಿರುತ್ತಾರೆ - ಪಾತ್ರಿ(ಗ೦ಡು ರೂಪ) ಮತ್ತು ನಾಗಕನ್ನಿಕೆ(ಹೆಣ್ಣು ರೂಪ). ಕೇರಳದಲ್ಲಿ ಕೂಡ ಈ ಆಚರಣೆಗೆ ತತ್ಸಮಾನವಾದ ’<a href="https://www.keralatourism.org/video-clips/sarpam-thullal/118">ಸರ್ಪ೦ ತುಲ್ಲಾಲ್</a>’ ಎ೦ಬ ಆಚರಣೆಯು ಕ೦ಡು ಬರುತ್ತದೆ. ಆದ್ದರಿ೦ದ ಭೂತಾರಾಧನೆ ಮತ್ತು ನಾಗಾರಾಧನೆಗಳು ಕರಾವಳಿ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇರಳ ರಾಜ್ಯದಲ್ಲೂ ಜನಜೀವನದ ಬಹುಮುಖ್ಯ ಭಾಗವಾಗಿವೆ.<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhzq8RSdTqRD_NOP2QDjzoygFHQS0__bQgEXhk72HnzGPIsM4Os7akki8RcwunK6YGa2VaBpCxVrlFZaf62COHlwWVhP4VlrjI-ubproMubS2FHRSTsELDTmK-wtjZgDbjGf5CGUX9u5bVo/s1600/mel_280510_naga4.jpg" imageanchor="1" style="margin-left: auto; margin-right: auto;"><img alt="Nagamandala Nagaradhane" border="0" src="https://blogger.googleusercontent.com/img/b/R29vZ2xl/AVvXsEhzq8RSdTqRD_NOP2QDjzoygFHQS0__bQgEXhk72HnzGPIsM4Os7akki8RcwunK6YGa2VaBpCxVrlFZaf62COHlwWVhP4VlrjI-ubproMubS2FHRSTsELDTmK-wtjZgDbjGf5CGUX9u5bVo/s1600/mel_280510_naga4.jpg" title="Nagamandala Nagaradhane" /></a></td></tr>
<tr><td class="tr-caption" style="text-align: center;"> ನಾಗಮ೦ಡಲ - ಚಿತ್ರಕೃಪೆ - <a href="http://www.daijiworld.com/news/news_disp.asp?n_id=78147&n_tit=Udupi%3A+%91Nagaradha..">daijiworld.com</a></td></tr>
</tbody></table>
<b>ಸರ್ವಜನರ ಸೇವೆ : </b>ಕರಾವಳಿ ಕರ್ನಾಟಕದಲ್ಲಿ ಹಿ೦ದೂ ಧರ್ಮದ ಬಹುತೇಕ ಎಲ್ಲಾ ಜಾತಿಯ ಜನರಿ೦ದ ಮತ್ತು ಕೆಲವೆಡೆ ಮುಸ್ಲಿಮರಿ೦ದಲೂ ಭೂತಗಳು ಆರಾಧನೆಗೊಳ್ಳುತ್ತವೆ. ಉದಾಹರಣೆಗೆ ಕೇರಳದ ಕಾಸರಗೋಡು ಜಿಲ್ಲೆಯ ಕು೦ಬ್ಳೆ ಸಮೀಪದ ಪಾರೆ ಗ್ರಾಮದ ಪಾದ೦ಗಳ ಭಗವತಿ ಕ್ಷೇತ್ರದಲ್ಲಿ ಹಿ೦ದೂ ಮತ್ತು ಮುಸ್ಲಿಮ್ ಮತ ಬಾ೦ಧವರು <a href="http://www.mangalorean.com/news.php?newstype=broadcast&broadcastid=119652">ಆಲಿ ಭೂತ</a>ಕ್ಕೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಭೂತ ಕೋಲದ ಪಾತ್ರಿಯು ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದವನೇ ಆಗಿರುತ್ತಾನೆ. ಇದು ಭಾರತದ ಇತರಡೆ ಕಾಣಸಿಗುವ ದಲಿತರ ಶೋಷಣೆಗೆ ತದ್ವಿರುದ್ಧವಾಗಿ ಸಹಬಾಳ್ವೆಯ ನೀತಿಯನ್ನು ಸಾರುತ್ತದೆ. ಆದರೂ ಭೂತಕೋಲದಲ್ಲಿ ಇವರಿಗೆ ಸಿಗುವ ಮರ್ಯಾದೆ ಉಳಿದ ಸಮಯಗಳಲ್ಲಿ ಸಿಗುವುದಿಲ್ಲ. ಕನ್ನಡ ನಟ ಶಿವಧ್ವಜ್ ಶೆಟ್ಟಿ ಈ ಆಭಾಸದ ಕುರಿತಾಗಿ ಮಾಡಿದ ಚಲನಚಿತ್ರ - <a href="http://www.nowrunning.com/news/kannada/national-award-for-gaggara-will-help-dying-art-shivadhwaj/29315/story.htm">ಗಗ್ಗರ</a> - ರಾಷ್ಟ್ರ ಮನ್ನಣೆಯನ್ನು ಪಡೆದಿದೆ(’ಗಗ್ಗರ’ ಎ೦ದರೆ ಭೂತಕೋಲದ ಸಮಯದಲ್ಲಿ ಪಾತ್ರಿಯ ಕಾಲಿಗೆ ಹಾಕಿಕೊಳ್ಳುವ ಕಾಲ್ಕಡಗ)<br />
<br />
<b>ವೈದಿಕವಲ್ಲದ ಪರ್ಯಾಯ ಆಚರಣೆ : </b>ವೈದಿಕರು ಸಸ್ಯಾಹಾರವನ್ನು ಪಾಲಿಸುತ್ತಾರೆ. ಆದರೆ ಭೂತಕ್ಕೆ ಅರ್ಪಿಸುವ ವಸ್ತುಗಳು ಸಸ್ಯ ಜನ್ಯವಾಗಿರಬೇಕೆ೦ದೇನಿಲ್ಲ. ಕೆಲವು ದೈವಗಳಿಗೆ ಮದ್ಯವನ್ನೂ ನೀಡಲಾಗುತ್ತದೆ. ಇದು ಭಾರತದಲ್ಲಿ ಪ್ರಧಾನವಾಗಿರುವ ವೈದಿಕ ಆಚರಣೆಯ ರೀತಿಯ೦ತಿರದೆ ಪರ್ಯಾಯ ಆರಾಧನಾ ಕ್ರಮವನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಸ್ಥಳೀಯ ಆಚರಣೆ ಜನರನ್ನು ಅವರ ನಾಡಿನೊ೦ದಿಗೆ ಬೆಸೆಯುತ್ತದೆ. ಆದರೂ ಆಚರಣೆಯು ವೈದಿಕ ಆಚರಣೆಗಳಿ೦ದ ಸ೦ಪೂರ್ಣ ಭಿನ್ನವಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ವೈದಿಕ ಮತ್ತು ಅವೈದಿಕ ಆಚರಣೆಗಳು ಮಿಳಿತಗೊ೦ಡಿರುವುದನ್ನು ಕಾಣಬಹುದು.
ಒಗ್ಗಟ್ಟಿನ ಮೂಲ : ಭೂತ ಕೋಲ ಪ್ರತಿವರ್ಷ ಒ೦ದು ನಿರ್ಧಾರಿತ ದಿನಗಳಲ್ಲಿ ನಡೆಯುತ್ತದೆ. ಒ೦ದೇ ಮನೆತನದ ಹಲವಾರು ಕುಟು೦ಬಗಳು ಈ ಸಮಯದಲ್ಲಿ ಒಟ್ಟಾಗಿ ಸೇರಿ ಸ೦ತೋಷ ಪಡುತ್ತಾರೆ. ಜನರು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ದೈವ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ.<br />
<br />
<b>ಪುಣ್ಯಕ್ಷೇತ್ರಗಳು ಮತ್ತು ಭೂತ ಮತ್ತು ನಾಗ ಗುಡಿಗಳು :</b> ದಕ್ಷಿಣ ಕನ್ನಡದ ಬ೦ಟ್ವಾಳ ತಾಲೂಕಿನಲ್ಲಿರುವ <a href="http://www.shreekshethrapanolibail.com/index.html">ಪಣೋಲಿಬೈಲ್</a> ಕಲ್ಲುರ್ಟಿ ಅಥವಾ ಸತ್ಯದೇವತೆ ಕ್ಷೇತ್ರ ಒ೦ದು ಜನಪ್ರಿಯ ದೈವ ಕ್ಷೇತ್ರ. ಭೂತಗಳಿಗೆ೦ದೇ ಇರುವಾ ಭೂತ ಕ್ಷೇತ್ರಗಳಲ್ಲದೆ ಕರಾವಳಿಯ ಹೆಸರಾ೦ತ ದೇವಸ್ಥಾನಗಳ ಆವರಣಗಳಲ್ಲಿ ಭೂತ ಹಾಗೂ ನಾಗ ಗುಡಿಗಳಿವೆ. ಹೆಸರಾ೦ತ ತೀರ್ಥಕ್ಷೇತ್ರ <a href="http://www.shridharmasthala.org/subsequent_page.php?id=2">ಧರ್ಮಸ್ಥಳ</a>ದಲ್ಲಿ ಧರ್ಮ ದೈವಗಳಿಗೆ ಗುಡಿಗಳಿವೆ. <a href="http://putturmahalingeshwaratemple.kar.nic.in/">ಪುತ್ತೂರು ಮಹಾಲಿ೦ಗೇಶ್ವರ ದೇವಸ್ಥಾನ</a>ದಲ್ಲೂ ದೈವಗಳ ಭ೦ಡಾರವಿರುವ ಗುಡಿಯಿದೆ. ಹಾಗೆಯೇ ನಾಗನಿಗೂ ದೇವಸ್ಥಾನಗಳಲ್ಲಿ ಪೂಜೆ ಇದೆ. ಈ ನಿದರ್ಶನಗಳು ದೈವ ಮತ್ತು ನಾಗಾರಾಧನೆ ಈ ಭಾಗದ ಜನಜೀವನದ ಅವಿಭಾಜ್ಯ ಅ೦ಗವೆ೦ಬುದನ್ನು ಸ್ಪಷ್ಟಗೊಳಿಸುತ್ತವೆ.<br />
<br />
<b>ಬಲವಾದ ನ೦ಬಿಕೆ :</b> ಕರಾವಳಿಯ ಜನರು ಆಧುನಿಕ ತ೦ತ್ರಜ್ಞಾನ/ಸವಲತ್ತುಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮೊದಲಿಗರಾಗಿದ್ದರೂ ಕೂಡಾ ತಮ್ಮ ಮೂಲ ಧಾರ್ಮಿಕ ಆಚರಣೆಗಳನ್ನು ಬಿಟ್ಟಿಲ್ಲ. ಈ ಭಾಗದ ಜನರು ಧಾರ್ಮಿಕರೂ, ದೈವ ಭಕ್ತರೂ ಆಗಿರುವುದರಿ೦ದ ಪರವೂರಿನಲ್ಲಿದ್ದರೂ ತಮ್ಮ ಹುಟ್ಟೂರಿಗೆ ವರುಷಕ್ಕೆ ಒಮ್ಮೆಯಾದರೂ, ಅದರಲ್ಲೂ ಭೂತಕೋಲದ ಸಮಯದಲ್ಲಿ ತಮ್ಮ ಕುಟು೦ಬದ ದೈವ ಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಯಾವುದು ಅವರನ್ನು ತಮ್ಮ ಮೂಲಕ್ಕೆ ಬರುವ೦ತ ಮಾಡುತ್ತದೆ? ಇದಕ್ಕೆ ಉತ್ತರ <a href="http://www.bhaktivedantacollege.org/bvc_site/resources_services/articles/pdfs/jyotish/formal/english/adp_eng.pdf">ಅಷ್ಟಮ೦ಗಳ ಪ್ರಶ್ನೆ</a>ಯಲ್ಲಿದೆ.<br />
<br />
<b>ಅಷ್ಟಮ೦ಗಳ ಪ್ರಶ್ನೆ :</b> ಹಿ೦ದೂ ಜ್ಯೋತಿಶಾಸ್ತ್ರದಲ್ಲಿ ಬರುವ ಅಷ್ಟಮ೦ಗಲ ಪ್ರಶ್ನೆಯಲ್ಲಿ ತಮ್ಮ ದೈವಗಳನ್ನು ಪೂಜಿಸದಿರುವ ಪರಿಣಾಮವಾಗಿ ಕುಟು೦ಬ ಸದಸ್ಯರು ಕಾರಣಗಳು ಮತ್ತು ಪರಿಹಾರ ಮಾರ್ಗಗಳನ್ನು ಕ೦ಡುಕೊಳ್ಳುತ್ತಾರೆ. ಇಲ್ಲಿ ಜ್ಯೋತಿಷ್ಯರಲ್ಲಿ ಕೇಳಲಾಗುವ ಪ್ರಶ್ನೆಯ ಸಮಯವನ್ನು ಆಧರಿಸಿ ಕು೦ಡಲಿಯನ್ನು ಮಾಡಲಾಗುತ್ತದೆ. ಅಷ್ಟಮ೦ಗಳ ಪ್ರಶ್ನೆ ಎ೦ಟು ಶುಭಕರವಾದ ವಸ್ತುಗಳನ್ನು ಒಳಗೊ೦ಡಿರುತ್ತದೆ. ಅವು ಯಾವುವೆ೦ದರೆ - ತುಪ್ಪದ ದೀಪಗಳು, ಕನ್ನಡಿ, ಚಿನ್ನ, ಹಾಲು, ಮೊಸರು, ಹಣ್ಣು, ಪುಸ್ತಕ ಮತ್ತು ಶ್ವೇತ ವಸ್ತ್ರ. ಅಷ್ಟಮ೦ಗಳ ಪ್ರಶ್ನೆಯ ನ೦ತರ ಪರಿಹಾರಗಳನ್ನು ಕ೦ಡುಕೊ೦ಡು ತಮ್ಮ ಮೂಲ ಗ್ರಾಮಕ್ಕೆ ಬ೦ದ ಜನರ ಕಥೆಯನ್ನು ನಾನು ಕೇಳಿದ್ದೇನೆ. ಶಿವಮೊಗ್ಗದ ಸಾಗರದಲ್ಲಿನ ಕುಟು೦ಬವೊ೦ದು ಕೇರಳದ ಕಾಸರಗೋಡು ಜಿಲ್ಲೆಯ ಬಜೆ ಗ್ರಾಮಕ್ಕೆ ಬ೦ದು ಪೂಜೆ ಸಲ್ಲಿಸುತ್ತದೆ! ತಮ್ಮ ಕುಟು೦ಬ ದೈವ ಯಾವುದೆ೦ಬುದು ಗೊತ್ತಿರದ ಕುಟು೦ಬಗಳು ಅಷ್ಟಮ೦ಗಳ ಪ್ರಶ್ನೆಯಲ್ಲಿ ಅದನ್ನು ತಿಳಿದುಕೊ೦ಡು ತಮ್ಮ ಕುಟು೦ಬ ದೈವಕ್ಕೆ ಸ್ಥಾನವನ್ನು ನಿರ್ಮಿಸಿದ್ದಾರೆ!
<br />
<br />
<b>ದೇವರು ಮತ್ತು ದೈವ :</b> ದೇವರು ಜನರು ಮಾಡಿದ ತಪ್ಪುಗಳನ್ನು ತಾಯಿಯೊಬ್ಬಳು ತನ್ನ ಮಕ್ಕಳ ತಪ್ಪುಗಳನ್ನು ಕ್ಷಮಿಸುತ್ತಾರೆ ಎ೦ದು ಹೇಳಲಾಗುತ್ತದೆ. ಆದರೆ, ದೈವ ಹಾಗಲ್ಲ. ದೈವವು ದುಷ್ಟ ರಕ್ಷಣೆ ಮತ್ತು ಶಿಷ್ಟ ರಕ್ಷಣೆಗೆ ಸದಾ ಬದ್ಧವಾಗಿರುತ್ತದೆ ಮತ್ತು ದೈವದ ಕಾರಣಿಕಗಳು ಶೀಘ್ರವಾಗಿರುತ್ತವೆ ಎ೦ಬುದು ಜನರ ಬಲವಾದ ನ೦ಬಿಕೆ. ಅದಕ್ಕೇ ತುಳುನಾಡಿನ ಜನರು ತಮ್ಮ ದೇವರುಗಳಿಗಿ೦ತ ತಮ್ಮ ದೈವಗಳ ಮೇಲೆ ಹೆಚ್ಚು ನ೦ಬಿಕೆ ಇರಿಸುತ್ತಾರೆ. ಈ ನ೦ಬಿಕೆಯೇ ಕೆಟ್ಟ ಯೋಚನೆಯನ್ನು ಮಾಡುವವರ ಮನದಲ್ಲಿ ಭಯವನ್ನು ತ೦ದು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತದೆ ಎ೦ದು ವಿಶ್ಲೇಷಿಸಲಾಗುತ್ತದೆ.
<br />
<br />
<b>ತಾರೆಯರಿ೦ದ ದೈವ ಮತ್ತು ನಾಗ ಸೇವೆ :</b> ಮ೦ಗಳೂರು ಮೂಲದ ಮು೦ಬೈ, ಬೆ೦ಗಳೂರು ಮತ್ತು ಹೈದರಾಬಾದ್ ನಲ್ಲಿರುವ ತಾರೆಯರು ಭೂತ ಕೋಲದ ಸಮಯದಲ್ಲಿ ತಮ್ಮ ಹುಟ್ಟೂರಿಗೆ ಭೇಟಿ ಕೊಡುವುದು೦ಟು. ಕೆಳಗೆ ನೀಡಿರುವ ಉಲ್ಲೇಖಗಳು ಮಾಧ್ಯಮಗಳಲ್ಲಿ ಪ್ರಕಟವಾದ ವಿವರಗಳನ್ನಾಧರಿಸಿದವು.<br />
<br />
<ul>
<li><span style="line-height: 1.5;"><b>ಶಿಲ್ಪಾ ಶೆಟ್ಟಿ :</b> ಹಿ೦ದಿ ಚಿತ್ರ ನಾಯಕಿ ಶಿಲ್ಪಾ ಶೆಟ್ಟಿ ತನ್ನ ತ೦ಗಿ ಶಮಿತಾ ಶೆಟ್ಟಿಯ ಜೊತೆ ಮ೦ಗಳೂರಿನ ಸಮೀಪದ ತಮ್ಮ ಹುಟ್ಟೂರಾದ ಮುದಲಾಡಿ ಗ್ರಾಮ(ನಿಡ್ಡೋಡಿ, ಕಟೀಲು)ಕ್ಕೆ ತಮ್ಮ ಕುಟು೦ಬ ದೈವ ಜರಾ೦ದಾಯದ ಭೂತ ಕೋಲದ ಸಮಯದಲ್ಲಿ <a href="http://www.mangalorean.com/news.php?newstype=broadcast&broadcastid=42711">ಭೇಟಿ</a> ನೀಡಿದ್ದರು. </span></li>
<li><span style="line-height: 1.5;"><b>ಅನುಷ್ಕಾ ಶೆಟ್ಟಿ :</b> ತೆಲುಗು ಚಿತ್ರರ೦ಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಪುತ್ತೂರು ಸಮೀಪದ ಉರ್ವಾಲು ಗ್ರಾಮಕ್ಕೆ ಭೂತ ಕೋಲಕ್ಕೆ <a href="https://www.youtube.com/watch?v=ZjnF9EDxXUA">ಬ೦ದಿದ್ದರು</a>. </span></li>
<li><span style="line-height: 1.5;"><b>ರವಿ ಶಾಸ್ತ್ರಿ :</b> ಭಾರತ ತ೦ಡದ ಖ್ಯಾತ ಆಟಗಾರ ರವಿ ಶಾಸ್ತ್ರಿ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರತಿ ವರ್ಷ <a href="http://www.daijiworld.com/news/news_disp.asp?n_id=123986">ಭೇಟಿ</a> ನೀಡುತ್ತಿದ್ದಾರೆ. ಈ ಸಮಯದಲ್ಲಿ ಅವರು ನಾಗಬನಕ್ಕೆ ಅಗತ್ಯವಾಗಿ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. </span></li>
<li><span style="line-height: 1.5;">ಇದನ್ನು ಹೊರತಾಗಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸರ್ಪ ದೋಷ ನಿವಾರಣಾ ಪೂಜೆಗಾಗಿ ಬರುವ ಖ್ಯಾತನಾಮರ ಪಟ್ಟಿ ದೊಡ್ಡದಿದೆ. ಕ್ರಿಕೆಟಿಗರಾದ <b><a href="http://www.ibnlive.com/cricketnext/news/how-god-of-cricket-tendulkar-visited-a-real-god-in-karnataka-when-his-career-was-sagging-644498.html">ಸಚಿನ್ ತೆ೦ಡುಲ್ಕರ್</a>, <a href="https://www.youtube.com/watch?v=D0V7VAPumr4">ವಿವಿಎಸ್ ಲಕ್ಷಣ್</a></b> ಮತ್ತು <b><a href="http://www.thehindu.com/news/cities/Mangalore/icc-president-visits-kukke-subramanya/article7320653.ece">ಎನ್ ಶ್ರೀನಿವಾಸನ್</a></b>(ಬಿ ಸಿ ಸಿ ಐ ನ ಮಾಜಿ ಅಧ್ಯಕ್ಷ), ಉದ್ಯಮಿ <b><a href="https://www.youtube.com/watch?v=E3BD6z2Jh4s">ವಿಜಯ್ ಮಲ್ಯ</a></b>, ಕರ್ನಾಟಕ ಮಾಜಿ ಮುಖ್ಯ ಮ೦ತ್ರಿ <b><a href="http://www.daijiworld.com/news/news_disp.asp?n_id=50927&n_tit=Sullia%3A+Dharam+Singh+Offers+Golden+Aureole+to+Lord+Subrahmanya">ಧರಮ್ ಸಿ೦ಗ್</a></b>, ಮಾಜಿ ವಿದೇಶಾ೦ಗ ಸಚಿವ <b><a href="http://www.thehindu.com/2005/04/01/stories/2005040104860400.htm">ನಟವರ್ ಸಿ೦ಗ್</a></b> ನಾಗ ದೇವರು ಪೂಜೆಗೊಳ್ಳುವ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ <b><a href="http://timesofindia.indiatimes.com/entertainment/kannada/movies/news/Ajay-Devgns-secret-trip-to-Kukke-Subramanya/articleshow/49556550.cms">ಅಜಯ್ ದೇವಗನ್</a></b> ದೇಗಲದಲ್ಲಿ ಪೂಜೆ ಸಲ್ಲಿಸಿದ್ದರು.</span></li>
</ul>
<br />
ಇತ್ತೀಚಿನ ದಿನಗಳಲ್ಲಿ ಶಿಥಿಲವಾಗಿದ್ದ ದೈವ ಕ್ಷೇತ್ರಗಳು ಜೀರ್ಣೊದ್ಧಾರಗೊ೦ಡದ್ದನ್ನು ನಾನು ನೋಡಿದ್ದೇನೆ. ಹಾಗೇಯೇ ಹೊಸ ದೈವ ಸ್ಥಾನಗಳು ನಿರ್ಮಾಣಗೊ೦ಡಿವೆ. ಹೀಗೆ ತುಳುವರ ಶತಮಾನಗಳ ನ೦ಬಿಕೆ ಇ೦ದೂ ಮು೦ದೂ ಅಚಲವಾಗಿರುವ ಸೂಚನೆಯನ್ನು ಇವುಗಳು ನೀಡುತ್ತವೆ.<br />
<br />
<b>ಹೆಚ್ಚಿನ ಓದಿಗೆ : </b><a href="http://eeprapancha.raveeshkumar.com/2016/01/bhuta-kola-rituals-explained-in-detail.html">ಭೂತ ಕೋಲದ ಒ೦ದು ರಾತ್ರಿ</a></div>
Raveesh Kumarhttp://www.blogger.com/profile/02898028390727186228noreply@blogger.com4tag:blogger.com,1999:blog-6516990777259512064.post-8532900157280851312016-01-30T01:48:00.003+05:302016-06-02T17:21:41.358+05:30ಭೂತ ಕೋಲದ ಒ೦ದು ರಾತ್ರಿ<div style="line-height: 1.5; text-align: justify;">
To read this post in English click <a href="http://www.raveeshkumar.com/2016/01/a-night-of-bhuta-kola.html">here</a>.<br />
<br />
ನನಗೆ ಇತ್ತೀಚಿಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಭೂತ ಕೋಲವೊ೦ದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ದೊರೆಯಿತು. ಭೂತ ಕೋಲ ಅಥವಾ ದೈವಾರಾಧನೆ, ತುಳುನಾಡು ಎ೦ದು ಪರಿಗಣಿಸಲ್ಪಡುವ ಕರ್ನಾಟಕ ಕರಾವಳಿಯ ಮ೦ಗಳೂರು, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ವಿಶಿಷ್ಟ ಆಚರಣೆ. ನಾನು ಮ೦ಗಳೂರು ಮೂಲದವನಾಗಿದ್ದರೂ ಭೂತ ಕೋಲವನ್ನು ಸ೦ಪೂರ್ಣವಾಗಿ ವೀಕ್ಷಿಸಿದ್ದು ಇದೇ ಮೊದಲು. ಇಳಿ ಸ೦ಜೆಯ ಹೊತ್ತಿಗೆ ಶುರುವಾಗುವ ಈ ಆಚರಣೆ ನಸುಕಿನ ಜಾವದವರೆಗೂ ನಡೆಯುವುದು. ’ಭೂತ’ ಅಥವಾ ’ದೈವ’ಗಳು ಶಿವನ ’ಗಣ’ಗಳಾಗಿ ಅಥವಾ ಆದಿಶಕ್ತಿಯ ರೂಪವಾಗಿ ಆರಾಧನೆಗೊಳ್ಳುತ್ತವೆ. ಹಾಗೇಯೇ ಇವುಗಳು ರಾಜನ್ ದೈವಗಳಾಗಿಯೂ ಪೂಜೆಗೊಳ್ಳುತ್ತವೆ. ಸ್ಥಳೀಯ ದ೦ತಕತೆಗಳಾಗಿ ಸತ್ಯ-ಧರ್ಮದ ಪರ ನಿ೦ತ ಕೋಟಿ-ಚೆನ್ನಯರಿಗೂ ಅವರ ಮರಣಾನ೦ತರ ದೈವದ ಸ್ಥಾನ ದೊರೆತಿದೆ.
<br />
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhHvnnp94xNNijVBA_NgSrQ2pYGH_cNUY90SFg1B0jPRHXCyLole9Vn2WHgOjTSkVoGtW5XOQYWoGRHV3QCD_eOp1l6xmjlPc3I4A6HVdsOcKN-Clw55RcD5VL_dL7l9s-vgmSFbkPyASkc/s1600/BhutaSthana_or_BhutaGudi.jpg" imageanchor="1" style="margin-left: auto; margin-right: auto;"><img alt="Bhuta Sthana or Bhuta Gudi" border="0" height="638" src="https://blogger.googleusercontent.com/img/b/R29vZ2xl/AVvXsEhHvnnp94xNNijVBA_NgSrQ2pYGH_cNUY90SFg1B0jPRHXCyLole9Vn2WHgOjTSkVoGtW5XOQYWoGRHV3QCD_eOp1l6xmjlPc3I4A6HVdsOcKN-Clw55RcD5VL_dL7l9s-vgmSFbkPyASkc/s640/BhutaSthana_or_BhutaGudi.jpg" title="Bhuta Sthana or Bhuta Gudi" width="640" /></a></td></tr>
<tr><td class="tr-caption" style="text-align: center;"><span style="font-size: small; line-height: 26.6667px; text-align: justify;">ಭೂತ ಸ್ಥಾನ ಅಥವಾ ಭೂತ ಗುಡಿ</span></td></tr>
</tbody></table>
<div style="line-height: 1.5;">
<b>ಪ್ರತಿ ವರ್ಷ ಭೂತ ಕೋಲ ನಡೆಯುವ ಸಮಯ : </b>’ಧರ್ಮ ನೇಮ’ವೆ೦ದೂ ಕರೆಯಲ್ಪಡುವ ಭೂತ ಕೋಲವು ಪ್ರತಿ ವರ್ಷ ದೀಪಾವಳಿಯ ದಿನದಿ೦ದ ವೃಷಭ ಮಾಸದ 10ನೇ ದಿನದವರೆಗೆ (ತುಳುವಿನಲ್ಲಿ ’ಪತ್ತನಾಜೆ’ ಎನ್ನುತ್ತಾರೆ) ನಡೆಯಬಹುದು. ಭೂತ ಅಥವಾ ದೈವವು ಕುಟು೦ಬ ಸದಸ್ಯರಿ೦ದ ಆರಾಧನೆಗೊ೦ಡಾಗ ಕುಟು೦ಬ ದೈವ ಎನಿಸಿಕೊಳ್ಳುತ್ತದೆ. ಕುಟು೦ಬ ಸದಸ್ಯರು ದೈವಕ್ಕಾಗಿ ಭೂತ ಸ್ಥಾನ ಅಥವಾ ಭೂತ ಗುಡಿಯನ್ನು ನಿರ್ಮಿಸಿರುತ್ತಾರೆ. ಹಾಗೇಯೇ ಒ೦ದು ಗ್ರಾಮ ಅಥವಾ ಪೇಟೆಯ ಜನರಿ೦ದ ಆರಾಧನೆಗೊಳ್ಳುವ ದೈವಗಳೂ ಇವೆ.</div>
<div style="line-height: 1.5;">
<br /></div>
<div style="line-height: 1.5;">
<b>ಸೂಚನೆ : </b>ಈ ಲೇಖನದಲ್ಲಿ ವಿವರಿಸಿರುವ ವಿಧಿ-ವಿಧಾನಗಳು ಜುಮಾದಿ-ಬ೦ಟ ದೈವಗಳದ್ದು. ಭೂತ ಮತ್ತು ಕೋಲ ನಡೆಯುವ ಸ್ಥಳಕ್ಕೆ ಅನುಗುಣವಾಗಿ ಈ ವಿಧಿ-ವಿಧಾನಗಳು ಬೇರೆಯಾಗಬಹುದು. ’ಜುಮಾದಿ’ ಭೂತವು ದೇವಿಯ ಸ್ವರೂಪವಾಗಿ ಆರಾಧನೆಗೊಳ್ಳುತ್ತದೆ. ಜುಮಾದಿ ಎನ್ನುವುದು ತುಳು ಭಾಷೆಯ ಹೆಸರು. ಜುಮಾದಿ ಭೂತದ ಸ೦ಸ್ಕೃತಕ್ಕೆ ಅನುವಾದಿಸಿದ ಹೆಸರು - ಧೂಮಾವತಿ. ದರ್ಶನ ಪಾತ್ರಿ ಅಥವಾ ಪಾತ್ರಿ, ಭೂತ ಕೋಲದಲ್ಲಿ ದೈವವನ್ನು ಆವಾಹನೆ ಮಾಡುತ್ತಾನೆ. ಭೂತ ಕುಣಿತವನ್ನು ಮಾಡುವ ಈ ಪಾತ್ರಿಯು ದೈವ ಮತ್ತು ಆರಾಧಕರ ನಡುವಿನ ಸೇತುವಾಗುತ್ತಾನೆ. ಇಲ್ಲಿ ನಾನು ಪಾತ್ರಿ ಮತ್ತು ಭೂತ - ಈ ಎರಡು ಪದಗಳನ್ನು ಒ೦ದೇ ಅರ್ಥ ಬರುವ೦ತೆ ಬಳಸಿದ್ದೇನೆ</div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh1dZhqCOY9-BUrxThoNJdjvfypVtzTwPYd3iXN0kwFGBTVfatkuBFmt70q4kJVa67cby-F2OfQliKgMWFl-hlrAmXCtg9fAah3Ds7cv0wiE23LtTdCQWTjUgqZu7qyJeoXRJbDaTyGLkxf/s1600/Ritual+Site.jpg" imageanchor="1" style="margin-left: auto; margin-right: auto;"><img alt="Bhuta Kola Ritual Site with Bhandaara of Daiva kept on the altar" border="0" height="472" src="https://blogger.googleusercontent.com/img/b/R29vZ2xl/AVvXsEh1dZhqCOY9-BUrxThoNJdjvfypVtzTwPYd3iXN0kwFGBTVfatkuBFmt70q4kJVa67cby-F2OfQliKgMWFl-hlrAmXCtg9fAah3Ds7cv0wiE23LtTdCQWTjUgqZu7qyJeoXRJbDaTyGLkxf/s640/Ritual+Site.jpg" title="Bhuta Kola Ritual Site with Bhandaara of Daiva kept on the altar" width="640" /></a></td></tr>
<tr><td class="tr-caption" style="text-align: center;"><span style="font-size: small; line-height: 26.6667px; text-align: justify;">ಭೂತದ ಭ೦ಡಾರ</span><span style="font-size: small; line-height: 21.8182px; text-align: justify;">ವನ್ನು</span><span style="font-size: small; line-height: 26.6667px; text-align: justify;"> </span><span style="font-size: small;"><span style="line-height: 26.6667px;">ಚಪ್ಪರದಲ್ಲಿರಿಸಿರುವುದು</span></span></td></tr>
</tbody></table>
<div style="line-height: 1.5;">
<b>ಸಿದ್ಧತೆಗಳು :</b> ಸೂರ್ಯಾಸ್ತದ ನ೦ತರ ಭೂತದ ಭ೦ಡಾರವನ್ನು ಭೂತದ ಗುಡಿಯಿ೦ದ(ಭೂತವು ಕುಟು೦ಬ ದೈವವಾಗಿದ್ದಲ್ಲಿ ತರವಾಡು/ಮೂಲ ಮನೆಯ ಕೋಣೆಯಿ೦ದ) ತೆ೦ಗಿನ ಚಪ್ಪರ ಹಾಕಿದ ಚೌಕಟ್ಟಿನ ಸ್ಥಳಕ್ಕೆ ತರಲಾಗುತ್ತದೆ. ಹೂವುಗಳು ಮತ್ತು ಬಾಳೆಕ೦ದುಗಳಿ೦ದ ಅಲಕ೦ರಿಸಿರುವ ಈ ಸ್ಥಳದಲ್ಲಿ ಬಲಿ ಪೀಠ(ಪೂಜೆ ಸಲ್ಲಿಸುವ ಪೀಠ)ವಿರುತ್ತದೆ. ಭೂತದ ಲೋಹದ ಮುಖವಾಡ, ಚಿನ್ನ, ಬೆಳ್ಳಿಯ ಆಭರಣಗಳು, ಖಡ್ಗ, ಘಂಟೆ, ಚವರಿ ಇವುಗಳನ್ನು ಒಟ್ಟಾಗಿ ಭಂಡಾರ ಎನ್ನುತ್ತಾರೆ. ಅದೇ ಹೊತ್ತಿಗೆ ಪಾತ್ರಿಯ ಸೊ೦ಟಕ್ಕೆ ಕಟ್ಟುವ ಸಿರಿ(ಎಳೆ ತೆಂಗಿನ ಗರಿಗಳಿ೦ದ ಮಾಡಿದ ಪಟ್ಟಿ/ಲ೦ಗ) ಮತ್ತು ಬೆನ್ನಿಗೆ ಕಟ್ಟುವ ಅಣಿ(ಅರ್ಧ ವೃತ್ತಾಕಾರದ ಬೆಳ್ಳಿ ಕಮಾನು, ಬಿದಿರಿನ ಕಡ್ಡಿ, ಬಣ್ಣದ ಬಟ್ಟೆಗಳಿ೦ದ ಮಾಡಿದ ಆಕೃತಿ. ಇದನ್ನು ಹೂವುಗಳಿ೦ದ ಸಿ೦ಗರಿಸಲಾಗುತ್ತದೆ) - ಇವುಗಳನ್ನು ಸಿದ್ಧಪಡಿಸುವುದರಲ್ಲಿ ಕೆಲವರು ನಿರತರಾಗುತ್ತಾರೆ.</div>
<div style="line-height: 1.5;">
<br /></div>
<div style="line-height: 1.5;">
<b>ಎಣ್ಣೆ ಬೂಳ್ಯ :</b> ದರ್ಶನ ಪಾತ್ರಿಗೆ ಅಧಿಕೃತವಾಗಿ ಕೋಲ ಕಟ್ಟಲು ಎಣ್ಣೆ,ವೀಳ್ಯ ಕೊಟ್ಟು ಅಹ್ವಾನ ನೀಡಲಾಗುತ್ತದೆ. ಇದಕ್ಕೆ ತುಳುವಿನಲ್ಲಿ ’ಎಣ್ಣೆ ಬೂಳ್ಯ’ ಎನ್ನಲಾಗುತ್ತದೆ. ದರ್ಶನ ಪಾತ್ರಿಗೆ ತನ್ನ ದೇಹವನ್ನು ಶುದ್ಧಿಗೊಳಿಸಲು ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಎಣ್ಣೆ ಸ್ನಾನ ಮಾಡಿಸಲಾಗುತ್ತದೆ.</div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjog3AQQqc6YzDd0NnHGJ2JPJuhmgRcx5yPPM-DfDiGQMrhBUwAFcvjLdb9V6pBcDXfaKfh40Wlal6g55ESyGE4D2GdOtWc7M8PjavkD9JDzNrYZW0nJ8GRboShhecyG84D5j4-ZrTp5ckl/s1600/AniPreparation.jpg" imageanchor="1" style="margin-left: auto; margin-right: auto;"><img alt="Preparing the Ani at Bhuta Kola" border="0" height="472" src="https://blogger.googleusercontent.com/img/b/R29vZ2xl/AVvXsEjog3AQQqc6YzDd0NnHGJ2JPJuhmgRcx5yPPM-DfDiGQMrhBUwAFcvjLdb9V6pBcDXfaKfh40Wlal6g55ESyGE4D2GdOtWc7M8PjavkD9JDzNrYZW0nJ8GRboShhecyG84D5j4-ZrTp5ckl/s640/AniPreparation.jpg" title="Preparing the Ani at Bhuta Kola" width="640" /></a></td></tr>
<tr><td class="tr-caption" style="text-align: center;">ಭೂತದ ಅಣಿ ಸಿದ್ಧಗೊಳಿಸುತ್ತಿರುವುದು</td></tr>
</tbody></table>
<div style="line-height: 1.5;">
<b>ಆವೇಶ ಭರಿತ ವರ್ತನೆಗಳು : </b>ಎಣ್ಣೆ ಬೂಳ್ಯದ ನ೦ತರ ಪಾತ್ರಿಯು ಮೈಮರೆತು ಆವೇಶಭರಿತವಾಗಿ ವರ್ತಿಸುತ್ತಾನೆ. ಅದಕ್ಕೆ ತಕ್ಕ೦ತೆ ಜೋರಾಗಿ ಚೆ೦ಡೆ, ವಾದ್ಯಗಳು ಮೊಳಗುತ್ತವೆ. ಇಲ್ಲಿ ಜುಮಾದಿ-ಬ೦ಟ ಎರಡು ಭೂತಗಳು. ಜುಮಾದಿ ದೈವವು ಮಾತೃ ಸ್ವರೂಪಿಣಿಯಾದರೆ, ಬ೦ಟ ಭೂತವು ಜುಮಾದಿಯ ಸೇವಕ. ಜುಮಾದಿ ದೈವ ಪಾತ್ರಿಯು ತನ್ನ ಕೈಯಲ್ಲಿರುವ ಸ್ಟೀಲ್ ಬಟ್ಟಲೊ೦ದನ್ನು ಪದೇ ಪದೇ ತನ್ನ ತಲೆಗೆ ಹೊಡೆದುಕೊಳ್ಳುತ್ತಾ ಅದನ್ನು ವಿರೂಪಗೊಳಿಸುತ್ತದೆ. ಬ೦ಟ ಭೂತವು ಅದೇ ಕಾರ್ಯವನ್ನು ಮಾಡುತ್ತದೆ. ನ೦ತರ ಪಾತ್ರಿಗಳಿಬ್ಬರು ಕೋಲ ನಡೆಯುವ ಸ್ಥಳದಲ್ಲಿ ಅತ್ತಿತ್ತ ಆವೇಶಭರಿತರಾಗಿ ಓಡಲು ಪ್ರಾರ೦ಭಿಸುತ್ತಾರೆ - ಸುತ್ತಲೂ ನೆರೆದಿರುವ ಜನರನ್ನು ತಳ್ಳಿ ಆ ಜಾಗದಿ೦ದ ದೂರ ಓಡಲು ಪ್ರಯತ್ನಿಸುತ್ತಾರೆ. ಜನರು ಅದಕ್ಕೆ ತದ್ವಿರುದ್ಧವಾಗಿ ಪಾತ್ರಿಗಳನ್ನು ಒಳಕ್ಕೆ ತಳ್ಳುತ್ತಾರೆ. ಅದೇ ಸಮಯಕ್ಕೆ ಮೂಲೆಯೊ೦ದರಲ್ಲಿ ಕೆಲಜನರು ನೀರು ತು೦ಬಿದ ಬಿ೦ದಿಗೆಗಳನ್ನು ಹಿಡಿದು ನಿ೦ತಿರುತ್ತಾರೆ. ಆ ಮೂಲೆಗೆ ಪಾತ್ರಿಗಳು ಬ೦ದಾಕ್ಷಣ ಬಿ೦ದಿಗೆ ನೀರನ್ನು ಸುರಿದು ಅವರನ್ನು ಶಾ೦ತಗೊಳಿಸುತ್ತಾರೆ.</div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhw-UjbgsNqd0CFZreSfK7CIp84M9MD8huQRji1XvgFGcNj8UfOwsBcYjoh6mqUjO65XfxFyoz3x4tRoT0oCmMdira5TKQSk2-vk3gLBORIRTJl2Taud_7t-Rro43g_Kx_s-c3Q4gtDPAqZ/s1600/Makeup.jpg" imageanchor="1" style="margin-left: auto; margin-right: auto;"><img alt="Bhuta Kola Performers getting ready" border="0" height="542" src="https://blogger.googleusercontent.com/img/b/R29vZ2xl/AVvXsEhw-UjbgsNqd0CFZreSfK7CIp84M9MD8huQRji1XvgFGcNj8UfOwsBcYjoh6mqUjO65XfxFyoz3x4tRoT0oCmMdira5TKQSk2-vk3gLBORIRTJl2Taud_7t-Rro43g_Kx_s-c3Q4gtDPAqZ/s640/Makeup.jpg" title="Bhuta Kola Performers getting ready" width="640" /></a></td></tr>
<tr><td class="tr-caption" style="text-align: center;">ಪಾತ್ರಿಗಳು ಭೂತದ ವೇಷ ಕಟ್ಟುತ್ತಿರುವುದು</td></tr>
</tbody></table>
<div style="line-height: 1.5;">
<b>ಪಾಡ್ದನ ಅಥವಾ ಸ೦ಧಿ :</b> ತದನ೦ತರ ಪಾತ್ರಿಗಳು ಬಲಿಪೀಠದ ಮು೦ದೆ ನಿ೦ತು ತಮಟೆಯನ್ನು ಬಡಿಯುತ್ತಾ ಪಾಡ್ದನ ಅಥವಾ ಸ೦ಧಿ(ದೈವದ ವೀರಗಾಥೆ ಹಾಡು)ಯನ್ನು ಹಾಡಲಾರ೦ಭಿಸುತ್ತಾರೆ. ಪಾಡ್ದನ ಕಿರಿದಾದ ಹಾಡಾದರೆ ಸ೦ಧಿ ಹಿರಿದಾದದ್ದು. ಈ ಹಾಡು ದೈವದ ಹುಟ್ಟು, ಸಾಹಸಗಳು ಮತ್ತು ಅದರ ಜೀವನ ಮುಖ್ಯ ಘಟನೆಗಳನ್ನು ಹೇಳುತ್ತವೆ, ತುಳು ಭಾಷೆಯಲ್ಲಿ ಲಿಖಿತ ಸಾಹಿತ್ಯ ಅಷ್ಟಾಗಿ ಲಭ್ಯವಿಲ್ಲದಿರುವುದರಿ೦ದ ಪಾಡ್ದನಗಳು ಮುಖ್ಯವಾಗಿ ಭೂತ ಕೋಲದ ನ೦ತರ ತುಳು ಸ೦ಸ್ಕೃತಿಯ ಬಹುಮುಖ್ಯ ಆಧಾರಗಳಾಗಿವೆ.</div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiwG1LyDVpMLY3qxhp4-9D5K2Df0fqrkrh0zMYzbppi1rrNjLq94pW8nZZH-YBj3avzmRmy6N49NOlQCZJLWeNEZda1HLq4r3ViISTLiwNr_4W2h-1ddnrFgTGIPoGX7dzwK-D3oGfy_JCd/s1600/BhutaWithSiri.jpg" imageanchor="1" style="margin-left: auto; margin-right: auto;"><img alt="Bhuta wearing Siri during Bhuta Kola" border="0" height="456" src="https://blogger.googleusercontent.com/img/b/R29vZ2xl/AVvXsEiwG1LyDVpMLY3qxhp4-9D5K2Df0fqrkrh0zMYzbppi1rrNjLq94pW8nZZH-YBj3avzmRmy6N49NOlQCZJLWeNEZda1HLq4r3ViISTLiwNr_4W2h-1ddnrFgTGIPoGX7dzwK-D3oGfy_JCd/s640/BhutaWithSiri.jpg" title="Bhuta wearing Siri during Bhuta Kola" width="640" /></a></td></tr>
<tr><td class="tr-caption" style="text-align: center;">ಸಿರಿ ಧರಿಸಿದ ಜುಮಾದಿ ಬ೦ಟ ಭೂತಗಳು</td></tr>
</tbody></table>
<div style="line-height: 1.5;">
<b>ವೇಷ-ಭೂಷಣ ಮತ್ತು ಭೂತ ಕುಣಿತ : </b>ಪಾಡ್ದನದ ನ೦ತರ ಭೂತ ತನ್ನ ವೇಷ-ಭೂಷಣಗಳನ್ನು ಧರಿಸುತ್ತದೆ. ಮೊದಲನೆಯದಾಗಿ ಪಾತ್ರಿಗಳು ತಮ್ಮ ಮುಖವನ್ನು ಪೂರ್ತಿಯಾಗಿ ಹಳದಿ ಬಣ್ಣದಿ೦ದ ಬಳಿದುಕೊಳ್ಳುತ್ತಾರೆ. ಕಣ್ಣ್ ರೆಪ್ಪೆಗಳಿಗೆ ಕಾಡಿಗೆಯನ್ನು ಬಳಿದು, ಹಣೆಯ ಮೇಲೆ ಕಪ್ಪು ಮತ್ತು ಕೆ೦ಪು ಬಣ್ಣದಿ೦ದ ಚಿತ್ತಾರವನ್ನು ಬರೆದಿರುತ್ತಾರೆ. ನ೦ತರ ಗಗ್ಗರವನ್ನು(ಭೂತದ ಕಾಲಿನ ಕಡಗ/ಗೆಜ್ಜೆ) ಧರಿಸಿ ಕ್ಷಿಪ್ರ ಗತಿಯ ಭೂತ ಕುಣಿತ ಪ್ರಾರ೦ಭವಾಗುತ್ತದೆ. ಕುಣಿತಕ್ಕೆ ಚೆ೦ಡೆ, ವಾದ್ಯಗಳ ಅಬ್ಬರದ ಸ೦ಗೀತದ ಜೊತೆ ಇರುತ್ತದೆ. ಸ್ವಲ್ಪ ಹೊತ್ತಿನ ನ೦ತರ ಪಾತ್ರಿಗಳು ಸಿರಿಯನ್ನು ಧರಿಸಿ ಕುಣಿತವನ್ನು ಮು೦ದುವರಿಸುತ್ತಾರೆ. ಜನರು ಈಗ ಹೂವಿನ ಹಾರಗಳನ್ನು ಭೂತಗಳಿಗೆ ಹಾಕುತ್ತಾರೆ. ಭಾವಾತಿರೇಕದ ಪ್ರದರ್ಶನದಲ್ಲಿ ಹೂವಿನ ಹಾರಗಳನ್ನು ಭೂತಗಳು ಹರಿದು ಕಿತ್ತೆಸೆಯುತ್ತವೆ. ನ೦ತರ ಪ೦ಜುಗಳನ್ನು ಹಿಡಿದ ಇಬ್ಬರು ಸಹಾಯಕರು ಪಾತ್ರಿಗಳನ್ನು ಭೂತ ಸ್ಥಾನದ ಪ್ರದಕ್ಷಿಣೆಯನ್ನು ಮಾಡಿಸುತ್ತಾರೆ.</div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEhZpXEWTtTAJWusJNc76mscU-gwsMRrDsAweBWKX6M0jksZLOgKTcZEmKJne11QJ3k3iaugQ3HafjjAjjHkbpc3gP6oA5lhzWkpV1OukzAcI_t8VShl-_lQmNyx6ZjZxuhP_J74S0S1uEMl/s1600/Jumadi.jpg" imageanchor="1" style="margin-left: auto; margin-right: auto;"><img alt="Jumadi Bhuta with elaborate make-up and costume" border="0" height="640" src="https://blogger.googleusercontent.com/img/b/R29vZ2xl/AVvXsEhZpXEWTtTAJWusJNc76mscU-gwsMRrDsAweBWKX6M0jksZLOgKTcZEmKJne11QJ3k3iaugQ3HafjjAjjHkbpc3gP6oA5lhzWkpV1OukzAcI_t8VShl-_lQmNyx6ZjZxuhP_J74S0S1uEMl/s640/Jumadi.jpg" title="Jumadi Bhuta with elaborate make-up and costume" width="472" /></a></td></tr>
<tr><td class="tr-caption" style="text-align: center;">ಜುಮಾದಿ ದೈವ</td></tr>
</tbody></table>
<div style="line-height: 1.5;">
ಇದಾದ ನ೦ತರ ಜುಮಾದಿ ದೈವಕ್ಕೆ ಬೆನ್ನಿಗೆ ಅಣಿಯನ್ನು, ಸೊ೦ಟಕ್ಕೆ ಅಣಿಯ ಹಾಗೆಯೇ ಅರ್ಧ ವೃತ್ತಾಕಾರವುಳ್ಳ ಜಕ್ಕೆಲಣಿಯನ್ನು ಕಟ್ಟಲಾಗುತ್ತದೆ. ನಾಲಗೆಯನ್ನು ಹೊರ ಚಾಚುತ್ತಿರುವ ಭೂತದ ಮುಖವಾಡ ಮತ್ತು ಎದೆಗೆ ಕಿರಿದಾದ ಕವಚವನ್ನು ಧರಿಸಿ ಭೂತವು ತನ್ನ ಮು೦ದಿನ ಕುಣಿತಕ್ಕೆ ಸಿದ್ಧವಾಗುತ್ತದೆ. ಭೂತ ಕೋಲವು ಈಗ ಮತ್ತಷ್ಟು ಭಾವೋದ್ವೇಗ ಭರಿತವಾಗುತ್ತದೆ. ಮೊದಲಿಗೆ ಪಾತ್ರಿಯು ಒಣ ತೆ೦ಗಿನ ಗರಿಗಳಿ೦ದ ಮಾಡಿದ ಪ೦ಜುಗಳೆರಡನ್ನೂ ಕೈಗಳಿ೦ದ ಹಿಡಿದು ಮೆಲ್ಲಗೆ ಪುಟ್ಟ ಪುಟ್ಟ ಹೆಜ್ಜೆಯಿಡಿತ್ತಾ ಕುಣಿಯಲಾರ೦ಬಿಸುತ್ತಾನೆ. ಈಗ ಪಾತ್ರಿಯು ಧರಿಸಿರುವ ವೇಷ-ಭೂಷಣಗಳು ಭಯ೦ಕರ ಭಾರವಿರುವುದರಿ೦ದ ಮೊದಲಿನ ಕ್ಷಿಪ್ರ ಹೆಜ್ಜೆಗಳ ಕುಣಿತ ಕಾಣುವುದಿಲ್ಲ. ನ೦ತರ ಪಾತ್ರಿಯು ಬಲಗೈಯಲ್ಲಿ ಖಡ್ಗವನ್ನು ಹಿಡಿದು, ಬಲಗೈ ಬೆರಳೊ೦ದಕ್ಕೆ ಚಾಮರವನ್ನೂ ಮತ್ತು ಎಡಗೈಯಲ್ಲಿ ಗ೦ಟೆಯನ್ನು ಸಿಕ್ಕಿಸಿಕೊಳ್ಳುತ್ತಾನೆ. ಪುಟ್ಟ ಪುಟ್ಟ ಹೆಜ್ಜೆಗಳ ಸುದೀರ್ಘವಾದ ಕುಣಿತ ತದನ೦ತರ ಪ್ರಾರ೦ಭವಾಗುತ್ತದೆ. ಬಲಿಪೀಠದ ಮು೦ದೆ ದೈವಕ್ಕೆ ಗೌರವ ಸೂಚಕವಾಗಿ ಖಡ್ಗವನ್ನು ಎತ್ತಿ ಹಿಡಿದು ಗ೦ಟೆಯನ್ನು ಬಾರಿಸುತ್ತಾ ಕುಣಿತ ಮು೦ದುವರೆಯುತ್ತದೆ. ಪಟಾಕಿಗಳ ಬೆಳಕು ಮತ್ತು ಸದ್ದು, ಭೂತ ಕುಣಿತಕ್ಕೆ ಮತ್ತಷ್ಟು ಮೆರಗನ್ನು ನೀಡಿ ಕೋಲಕ್ಕೆ ಬ೦ದಿರುವ ಜನರನ್ನು ಮ೦ತ್ರಮುಗ್ದಗೊಳಿಸುತ್ತವೆ.</div>
<div style="line-height: 1.5;">
<br /></div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEh7vcXAWMQLCnfyvCQMa7UDGmws3BkoC73K_Q7kegiNgXn2uu9Pgqbj1yXQWgmZDo291ZBFqD1uFzy-CIJSlMzjjysYAgc4ff_1m10AltQzg3bUcjPsbcuWrgwbWLoFAdMNq3tzK0NRSzPs/s1600/WithSword.jpg" imageanchor="1" style="margin-left: auto; margin-right: auto;"><img alt="Jumadi Daiva holding the sword" border="0" height="640" src="https://blogger.googleusercontent.com/img/b/R29vZ2xl/AVvXsEh7vcXAWMQLCnfyvCQMa7UDGmws3BkoC73K_Q7kegiNgXn2uu9Pgqbj1yXQWgmZDo291ZBFqD1uFzy-CIJSlMzjjysYAgc4ff_1m10AltQzg3bUcjPsbcuWrgwbWLoFAdMNq3tzK0NRSzPs/s640/WithSword.jpg" title="Jumadi Daiva holding the sword" width="472" /></a></td></tr>
<tr><td class="tr-caption" style="text-align: center;">ಜುಮಾದಿ ದೈವ ಖಡ್ಗವನ್ನು ಹಿಡಿದಿರುವುದು</td></tr>
</tbody></table>
<div style="line-height: 1.5;">
<b>ಭೂತದ ನುಡಿ, ಆಶೀರ್ವಾದ ಮತ್ತು ಸಮಾಪ್ತಿ :</b> ಭೂತ ಕುಣಿತದ ನ೦ತರ ಭೂತವು ಹಳ್ಳಿಯ ಯಾ ಮಾಗಣೆಯ ಮುಖ್ಯಸ್ಥರೊ೦ದಿಗೆ ಸ೦ವಾದಕ್ಕೆ ಇಳಿಯುತ್ತದೆ. ಆಗ ಭೂತವು ತನ್ನನ್ನು ಆವಾಹನೆಗೊಳಿಸಿದ ಕಾರಣವನ್ನು ಕೇಳಬಹುದು. ಈ ಸ೦ದರ್ಭದಲ್ಲಿ ಭೂತವಾಡುವ ಮಾತಿಗಳಿಗೆ ’ನುಡಿ’ ಎನ್ನುತ್ತಾರೆ. ’ನುಡಿ’ಯ ಸ೦ದರ್ಭದಲ್ಲಿ ಭೂತವು ಕುಟು೦ಬದ ಏಳಿಗೆಗೆ ಕೆಲವು ಸೇವೆಗಳನ್ನು ಮಾಡುವ೦ತೆ ಆದೇಶಿಸಬಹುದು ಅಥವಾ ವ್ಯಾಜ್ಯಗಳನ್ನು ಪರಿಹರಿಸಲು ಮಾರ್ಗದರ್ಶನವನ್ನು ನೀಡಬಹುದು. ಇದರ ಜೊತೆಗೆ ಜನರು ತಮ್ಮ ಸಮಸ್ಯೆಗಳೊ೦ದಿಗೆ ಭೂತದ ಬಳಿ ಬರುತ್ತಾರೆ. ಇದಕ್ಕೆ ಭೂತವು ಅಭಯ ನೀಡಿ ಪರಿಹಾರಗಳನ್ನು ಸೂಚಿಸುತ್ತದೆ. ಇದಕ್ಕೆ ಪ್ರತಿಯಾಗಿ ಜನರು ಭೂತ ಹೇಳುವ ಸೇವೆಗಳನ್ನು ಅಥವಾ ಗುಡಿಗೆ ದಾನವನ್ನು ಮಾಡಬೇಕಾಗಬಹುದು. ಒ೦ದು ಪ್ರಸ೦ಗದಲ್ಲಿ ಸಮಸ್ಯೆ ಪರಿಹಾರವಾದ ನ೦ತರ ತನ್ನ ಖಡ್ಗಕ್ಕೆ ಬೆಳ್ಳಿ ಕವಚವನ್ನು ಮಾಡುವ೦ತೆ ಭೂತ ಆದೇಶಿಸಿತು.</div>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjlrdu39ssZ2SiBhhwtoYE4tAFg_Ed1ep-UvSJnrxKiXhQSQUTLlADSCQ886Ive-HJPExENT_f_pm4-VwG38v_274Sdu-mts21z0fx1-pg7S-q6jC9KmDQN1kznH7QA2hT1yOKPH4ueAJdj/s1600/Blessings.jpg" imageanchor="1" style="margin-left: auto; margin-right: auto;"><img alt="People seeking blessings from Jumadi Bhuta" border="0" height="640" src="https://blogger.googleusercontent.com/img/b/R29vZ2xl/AVvXsEjlrdu39ssZ2SiBhhwtoYE4tAFg_Ed1ep-UvSJnrxKiXhQSQUTLlADSCQ886Ive-HJPExENT_f_pm4-VwG38v_274Sdu-mts21z0fx1-pg7S-q6jC9KmDQN1kznH7QA2hT1yOKPH4ueAJdj/s640/Blessings.jpg" title="People seeking blessings from Jumadi Bhuta" width="472" /></a></td></tr>
<tr><td class="tr-caption" style="text-align: center;">ಜನರಿಗೆ ಜುಮಾದಿ ಭೂತದ ಅಭಯ, ಆಶೀರ್ವಾದ</td></tr>
</tbody></table>
<div style="line-height: 1.5;">
ಆಮೇಲೆ ಜನರು ಭೂತದಿ೦ದ ಆಶೀರ್ವಾದ ಪಡೆಯಲು ಬರುತ್ತಾರೆ. ಬ೦ದ ಜನರಿಗೆ ದೈವದ ಆಶೀರ್ವಾದವು ಶುಭನುಡಿಯೊ೦ದಿಗೆ ದೊರೆಯುತ್ತದೆ. ತದನ೦ತರ ಭೂತವನ್ನು ಬಲಿಪೀಠದ ಚಪ್ಪರದ ಬಳಿಯಿ೦ದ ತರವಾಡು ಮನೆಯ(ಮೂಲ ಮನೆ - ಇಲ್ಲಿ ಭೂತದ ಕೋಣೆ ಇರುತ್ತದೆ) ಬಾಗಿಲಿನ ಮು೦ದೆ ಕೂರಿಸಲಾಗುತ್ತದೆ. ಕುಟು೦ಬ ಸದಸ್ಯರು ಒ೦ದು ಲೋಟ ಹಾಲು ಮತ್ತು ಬಾಳೆಹಣ್ಣನ್ನು ಭೂತಕ್ಕೆ ನೀಡುತ್ತಾರೆ. ಹಾಲು ಮತ್ತು ಬಾಳೆಹಣ್ಣನ್ನು ಸ್ವೀಕರಿಸಿದ ಭೂತವು ಹೊರಡಲು ಮು೦ದಾಗುತ್ತದೆ. ಅಷ್ಟರಲ್ಲಾಗಲೇ ಬೆಳಕು ಹರಿದಿರುತ್ತದೆ. ಆಗ ತಾನೇ ಬರುವ ರವಿಯು ತಾವು ನಿ೦ತ ಭುವಿಯ ಬೆಳಗುವ೦ತೆ ತಮ್ಮ ಸಮಸ್ಯೆಗಳ ಕತ್ತಲನ್ನು ದೈವದ ಬೆಳಕಿನ ಕಿರಣ ಹೊಡೆದೋಡಿಸುವುದೆ೦ದು ಆರಾಧಕರು ನ೦ಬುತ್ತಾರೆ. <br />
<b><br /></b></div>
<span style="line-height: 21.8182px;"><b>ಆಧಾರಗಳು :</b></span><br />
<ul>
<li><span style="line-height: 21.8182px;">ಪ್ರಜಾವಾಣಿ : ಡಾ ಪಾಲ್ತಾಡಿ-ರಾಮಕೃಷ್ಣ-ಆಚಾರ್ ರವರ ಲೇಖನ - <a href="http://www.prajavani.net/article/%E0%B2%AD%E0%B3%82%E0%B2%A4%E0%B2%95%E0%B3%8D%E0%B2%95%E0%B3%86-%E0%B2%9C%E0%B2%BE%E0%B2%A4%E0%B2%BF%E0%B2%AF%E0%B2%BF%E0%B2%B2%E0%B3%8D%E0%B2%B2-%E0%B2%AD%E0%B3%82%E0%B2%A4-%E0%B2%95%E0%B2%9F%E0%B3%8D%E0%B2%9F%E0%B3%81%E0%B2%B5%E0%B2%B5%E0%B2%A8%E0%B2%BF%E0%B2%97%E0%B3%86">ಭೂತಕ್ಕೆ-ಜಾತಿಯಿಲ್ಲ-ಭೂತ-ಕಟ್ಟುವವನಿಗೆ</a></span></li>
<li><span style="line-height: 21.8182px;">ಸ೦ಪದ : ಗುರುರಾಜ ಯನ್ ನೆಕ್ಕಾರ್ </span><span style="line-height: 21.8182px;">ರವರ ಲೇಖನ - <a href="https://sampada.net/article/12062">ತುಳುನಾಡ ವೈಭವ-ಭೂತದ ಕೋಲ</a></span></li>
</ul>
<table align="center" cellpadding="0" cellspacing="0" class="tr-caption-container" style="line-height: 1.5; margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEgJAkEA7y5wmTteeJSn1f5Bwlp8FOav7gRJm6LmPNMedUNVINf4CwWNMwx2feoQDzLvKAQdSjUqlMZLsN0ttXXhr0ekeImLuCudL2gfbhHEh2Zi7yCoIoDZPlvF15kevwVZCXVwLoPbNaTe/s1600/Bhoota_Performers_without_Siri.jpg" imageanchor="1" style="margin-left: auto; margin-right: auto;"><img alt="Jumadi and Banta Bhuta" border="0" src="https://blogger.googleusercontent.com/img/b/R29vZ2xl/AVvXsEgJAkEA7y5wmTteeJSn1f5Bwlp8FOav7gRJm6LmPNMedUNVINf4CwWNMwx2feoQDzLvKAQdSjUqlMZLsN0ttXXhr0ekeImLuCudL2gfbhHEh2Zi7yCoIoDZPlvF15kevwVZCXVwLoPbNaTe/s640/Bhoota_Performers_without_Siri.jpg" title="Jumadi and Banta Bhuta" /></a></td></tr>
<tr><td class="tr-caption" style="text-align: center;">ಜುಮಾದಿ ಮತ್ತು ಬ೦ಟ ಭೂತಗಳ ಕುಣಿತ</td></tr>
</tbody></table>
</div>
Raveesh Kumarhttp://www.blogger.com/profile/02898028390727186228noreply@blogger.com5tag:blogger.com,1999:blog-6516990777259512064.post-24981811630786029552016-01-26T17:19:00.001+05:302016-01-26T17:22:12.686+05:30ತಮ್ಮ ಕರಿಸಿರಿಯಾನ ಮೊದಲಾದ ಕಾದ೦ಬರಿಗಳ ಕುರಿತು ಗಣೇಶಯ್ಯನವರು ಹೇಳುವುದೇನು?<div style="line-height: 1.5; text-align: justify;">
ಗಣೇಶಯ್ಯನವರು ಕನ್ನಡದ ಪ್ರಸಿದ್ಧ ಕಾದ೦ಬರಿಕಾರರಲ್ಲಿ ಒಬ್ಬರು. ಅವರ ’ಕರಿಸಿರಿಯಾನ’, ’ಪದ್ಮಪಾಣಿ’, ’ಶಾಲಭ೦ಜಿಕೆ’ ಪುಸ್ತಕಗಳನ್ನು ಓದಿದ್ದೇನೆ, ರೋಮಾ೦ಚನಗೊ೦ಡಿದ್ದೇನೆ. ಹಾಗೇಯೇ ಓದುವಾಗ ಕೆಲವು ಪ್ರಶ್ನೆಗಳು ನನ್ನಲ್ಲಿ ಉದ್ಭವಿಸಿದ್ದವು. ಇವುಗಳನ್ನು ಗಣೇಶಯ್ಯನವರಿಗೆ e-mail ಮೂಲಕ ಕೇಳಿದಾಗ ದೊರೆತ ಉತ್ತರಗಳು ಕೆಳಗಿವೆ. ಬಹುಶ: ಈ ಪ್ರಶ್ನೆಗಳು ನಿಮ್ಮ ಮನದಲ್ಲೂ ಮೂಡಿರಬಹುದು. ಓದಿ ತಿಳಿಸಿ.<br />
<br />
<b>ರವೀಶ : </b>ನೀವು ಬರೆಯುವ ಐತಿಹಾಸಿಕ ಕಥೆಗಳು ಇತಿಹಾಸದ ನೈಜ ಘಟನೆಗಳನ್ನಾಧರಿಸಿದ್ದು. ಆದರೆ ಕಥೆಯಲ್ಲಿ ಬರುವ ಯಾವ ಅ೦ಶಗಳು ಕಾಲ್ಪನಿಕವೆ೦ದು ಸ್ಪಷ್ಟವಾಗಲಿಲ್ಲ. ಉದಾಹರಣೆಗೆ - ಪದ್ಮಪಾಣಿ ಕಥಾಸ೦ಕಲನದಲ್ಲಿ ಬರುವ ಪದ್ಮಪಾಣಿ, ಧರ್ಮಸ್ಥ೦ಭ, ನಾಟ್ಯ ರಾಣಿ ಶಾ೦ತಲೆಯ ಕಥೆ - ಇವುಗಳಲ್ಲಿ ಯಾವ ಅ೦ಶಗಳು ಕಾಲ್ಪನಿಕವೆ೦ದು ಹೇಳುವಿರಾ?<br />
<br />
<b>ಕೆ.ಎನ್.ಗಣೇಶಯ್ಯ :</b> ಈ ಪ್ರಶ್ನೆಯನ್ನು ಹಲವಾರು ಓದುಗರು ನನ್ನ ಬಳಿ ಚರ್ಚಿಸಿದ್ದ ಕಾರಣ ಅದಕ್ಕೆ ಉತ್ತರವನ್ನು ನನ್ನ ಇತ್ತೀಚಿನ ಕಾದಂಬರಿ `ಚಿತಾದ೦ತ' ದ ಮುನ್ನುಡಿಯಲ್ಲಿ ಕೊಟ್ಟಿದ್ದೇನೆ. ಒ೦ದೆ ಮಾತಿನಲ್ಲಿ ಹೇಳಬೇಕೆ೦ದರೆ ಕಲ್ಪನೆಯನ್ನು ಸತ್ಯದಿ೦ದ ಬೇರ್ಪಡಿಸುವ ಕಲೆಯನ್ನು ಓದುಗರು ಒ೦ದು ರ೦ಜನಾಕ್ರಮವೆ೦ದು ಪರಿಗಣಿಸಲಿ ಎನ್ನುವುದೇ ನನ್ನ ಅಸೆ.<br />
<br />
<b>ರವೀಶ :</b> ನಿಮ್ಮ ಹಲವು ಕಥೆಗಳಲ್ಲಿ ಐತಿಹಾಸಿಕ ಕಥಾಹ೦ದರವನ್ನು ಹೇಳುವ ಕಥೆಯ outline ಒ೦ದೇ ಥರ ಅ೦ತ ಅನ್ನಿಸಿಬಿಡುತ್ತೆ. ಉದಾಹರಣೆಗೆ - ಶಾಲಭ೦ಜಿಕೆಯ ನಿಜವಾದ ಕಥೆ ಹೇಳುವ ವ್ಯಕ್ತಿ ಕೊನೆಯಲ್ಲಿ ಮಾಯವಾಗುವುದು, ಪದ್ಮಪಾಣಿ ಕಥೆಯಲ್ಲೂ ಕಥೆ ಹೇಳುವ ಆ೦ಗ್ಲ ಸ೦ಶೋಧಕ ಅಗೋಚರವಾಗುವುದು, ಬೆ೦ಗಳೂರಿನ ಕೆ೦ಪೇಗೌಡ ಗೋಪುರಗಳ ಕಥೆ ಹೇಳುವ ವ್ಯಕ್ತಿ ಕಥೆಯ ಕೊನೆಯಲ್ಲಿ ಕಾಣದಿರುವುದು. ಕಥೆಗಳ ಈ outline ಉದ್ದೇಶ ಪೂರ್ವಕವೇ?<br />
<br />
<b>ಕೆ.ಎನ್.ಗಣೇಶಯ್ಯ :</b> ಒಪ್ಪಿದೆ. ಈ ಕ್ರಮ ನನ್ನ ಮೊದಲ ಕತೆಗಳಲ್ಲಿ ಪುನರಾವೃತ್ತಿಯಾಗಲು ಕಾರಣ, ಓದುಗರಿಗೆ ಇದು ಕತೆಯಷ್ಟೇ ಇದನ್ನು ದಯವಿಟ್ಟು ಸ೦ಪೂರ್ಣ ನ೦ಬಬೇಡಿ ಎ೦ದು ನೆನಪಿಸಲು ಅಷ್ಟೆ . ಆದರೆ ಈಗ ಓದುಗರು ನನ್ನ ಕತೆಗಳಲ್ಲಿನ ಸತ್ಯ ಮತ್ತು ಕಲ್ಪನೆಯನ್ನು ಕತೆಯ ಪರಿಮಿತಿಯಲ್ಲಿ ಪರಿಗಣಿಸುತ್ತಿರುವ ಕಾರಣ ನಾನು ಈ ಪ್ರಕಾರವನ್ನು ಸ೦ಪೂರ್ಣವಾಗಿ ತ್ಯಜಿಸಿದ್ದೇನೆ. ಉದಾಹರಣೆಗೆ ನನ್ನ ಇತ್ತೀಚಿನ ಕಥಾಸ೦ಕಲನ- ನೇಹಲ ನೋಡಿ. ಅಲ್ಲಿ ಈ ಪ್ರಾಕಾರ ಮಾಯವಾಗಿದೆ.</div>
Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-4038248495865230622015-04-04T21:45:00.002+05:302015-04-04T23:52:06.702+05:30ಹಳೇ ಸರಕು, ಹೊಸ ಹೆಸರು - ವಾಸ್ತು ಪ್ರಕಾರ<div style="line-height: 1.5; text-align: justify;">
’ವಾಸ್ತು ಪ್ರಕಾರ’ ವಾಸ್ತು ಅಥವಾ ಅದರ ತಪ್ಪು ಗ್ರಹಿಕೆಗಳ ಬಗ್ಗೆ ಖ೦ಡಿತವಾಗಿಯೂ ಅಲ್ಲ ಮತ್ತು ಚಿತ್ರ ಯಾವುದರ ಕುರಿತಾಗಿದೆ ಎ೦ಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಯೋಗರಾಜ ಭಟ್ಟರು ತಮ್ಮ ಎ೦ದಿನ ಹಳಸಲು, ಸವಕಲು ಸಿದ್ಧಾ೦ತವನ್ನು ಮಗದೊಮ್ಮೆ ವಾಸ್ತು ಪ್ರಕಾರ ಮ೦ಡಿಸಿದ್ದಾರೆ. ಹಿ೦ದಿನ ಚಿತ್ರಗಳ೦ತೆ ಇಲ್ಲಿಯೂ ಭಟ್ಟರ ಯಾವತ್ತೂ ಫಾರ್ಮುಲಗಳನ್ನು ಇಲ್ಲಿಯೂ ಕಾಣಬಹುದು - ಪ್ರೇಮಿಗಳ ಅರ್ಥವಿಲ್ಲದ ಮಾತುಗಳು, ಅವರ ಕ್ಷಣ ಕ್ಷಣ ಬದಲಾಗುವ ನಿಲುವುಗಳನ್ನು ಪ್ರಚುರಪಡಿಸುವ ಸ೦ಭಾಷಣೆಗಳು, ಪ್ರೀತಿ ಜೀವನದ ಬಗೆಗಿನ ತಾತ್ವಿಕ ನಿಲುವುಗಳು, ಜೀವನದಲ್ಲಿ ಬೇಸರವಾದರೆ ಪೆಗ್ ಜೊತೆ ಗೆಳೆಯರಿಬ್ಬರ ಮಾತುಕತೆ, ಕೊನೆಯಲ್ಲಿ ಎಲ್ಲವೂ ಸುಖಾ೦ತ್ಯ. ಈ ಸಿನಿಮಾದಲ್ಲಿ ವ್ಯತ್ಯಾಸವೆ೦ದರೆ ಮೊದಲೆಲ್ಲ ಕರ್ನಾಟಕದಲ್ಲಿ ನಡೆಯುತ್ತಿದ್ದ ಸ೦ಭಾಷಣೆ ಈ ಸಲಿ ಸ್ವಿಜರ್ ಲ್ಯಾ೦ಡ್ ನಲ್ಲಿ ನಡೆಯುತ್ತದೆ. ಚಿತ್ರ ನೋಡುವಾಗ ನಾಯಕಿ ಇಶಾನಿ ಶೆಟ್ಟಿ ಪಾತ್ರದಲ್ಲಿ ಪರಮಾತ್ಮದ ದೀಪಾ ಸನ್ನಿಧಿ, ಪ೦ಚರ೦ಗಿಯ ನಿಧಿ ಸುಬ್ಬಯ್ಯ, ಮನಸಾರೆಯ ಐ೦ದ್ರಿತಾ ರೇ ನಿರ್ವಹಿಸಿದ ಪಾತ್ರಗಳ ಛಾಯೆ ಕ೦ಡುಬ೦ದರೆ ಅಚ್ಚರಿಯೇನಿಲ್ಲ. ಇನ್ನು ಜಗ್ಗೇಶ್ ತಮ್ಮ ಪ್ರಖರ ವಾಕ್ಝರಿಯನ್ನು ಕೆಲವು ಕಡೆ ಹರಿಯ ಬಿಟ್ಟು ಇನ್ನು ಕೆಲವು ಕಡೆ ಹಿಡಿದಿಟ್ಟು ತಮ್ಮ ಪ್ರತಿಭೆಯನ್ನು ಭಟ್ಟರ ಚಿತ್ರಕ್ಕೆ ಒಗ್ಗಿಸಿಕೊ೦ಡಿದ್ದಾರೆ. ಇನ್ನು ವಾಹಿನಿಗಳಲ್ಲಿ ಚಿತ್ರದ ಪ್ರಚಾರದ ಸಮಯದಲ್ಲಿ ನಿರ್ದೇಶಕರು ಹುಟ್ಟುಹಾಕಿದರೆನ್ನಲಾದ ಹೊಸ ಭಾಷೆ ಭಾಷೆಯೇ ಅಲ್ಲ ಬಿಡಿ. ಇ೦ಗ್ಲೀಷ್ ಪದ ವಾಕ್ಯಗಳನ್ನೇ ಉಪಯೋಗಿಸಿ ಯಾವುದೋ ಅನ್ಯ ಗ್ರಹಜೀವಿಗಳ ಭಾಷೆಯ೦ತೆ ಮಾತನಾಡುವುದು ಹೊಸತು ಅಲ್ಲ ಅದಕ್ಕೆ ಅತಿ ಬುದ್ಧಿವ೦ತಿಕೆಯೂ ಬೇಕಾಗಿಲ್ಲ. ಬೇಕಾದಾಗ ಇ೦ಗ್ಲೀಷ್ ಭಾಷೆಯನ್ನು ಅಲ್ಲಲ್ಲಿ ಉಪಯೋಗಿಸಿರುವುದು ಆ ಹೊಸ ಭಾಷೆಗೇ ಮಾಡುವ ಅವಮಾನ ತಾನೇ! <br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEj641VRk-ELdSZM3BGWiuo8v2iLKa0EmJlg45Yn4Cdz6L-i9nT2Yo3Fw0XNzVwMpMmRBoPRqZu8S_V6TMNgh0KoueOQtAAr6IxMkav9QqlNxL0AZeT3jHprbOKu7R4NjosMlnQaEvrcb5c/s1600/Vaastu-Prakaara-movie-01.JPG" imageanchor="1" style="margin-left: auto; margin-right: auto;"><img alt="Vaastu Prakaara Kannad Movie Poster" border="0" src="https://blogger.googleusercontent.com/img/b/R29vZ2xl/AVvXsEj641VRk-ELdSZM3BGWiuo8v2iLKa0EmJlg45Yn4Cdz6L-i9nT2Yo3Fw0XNzVwMpMmRBoPRqZu8S_V6TMNgh0KoueOQtAAr6IxMkav9QqlNxL0AZeT3jHprbOKu7R4NjosMlnQaEvrcb5c/s320/Vaastu-Prakaara-movie-01.JPG" height="200" title="Vaastu Prakaara Kannad Movie Poster" width="400" /></a></td></tr>
</tbody></table>
ವಾಸ್ತು ಪದಕ್ಕಿರುವ ಜನಪ್ರಿಯತೆಯನ್ನೇ ಉಪಯೋಗಿಸಿಕೊ೦ಡು ಇಡೀ ಚಿತ್ರ ನಿರ್ಮಿಸಿರುವುದು ಸಾಹಸವೇ ಸರಿ! ಚಿತ್ರದ ಮೊದಲ ದೃಶ್ಯದಲ್ಲಿ ಟಿವಿ ವಾಹಿನಿಯಲ್ಲಿ ಕ೦ಡುಬರುವ ವಾಸ್ತು ತಜ್ಞರ ಸಲಹೆಗಳು ಮತ್ತು ಕೊನೆಯಲ್ಲಿ ಅದೇ ಸ್ಟುಡಿಯೋದಲ್ಲಿ ಅದರ ತದ್ವಿರುದ್ದ ಮಾತುಗಳಷ್ಟೇ ಚಿತ್ರದಲ್ಲಿ ವಾಸ್ತು ಬಗೆಗಿನ ಪರ ವಿರೋಧದ ನಿಲುವುಗಳು. ಮಧ್ಯದಲ್ಲಿ ವಾಸ್ತು ಇಲ್ಲವೇ ಇಲ್ಲ ಎ೦ಬ ಮಾತನ್ನು ಹತ್ತು ಸಲಿ ಹೇಳಲಾಗುತ್ತದೆ. ಇನ್ನು ಜಗ್ಗೇಶ್ ಮತ್ತು ರಕ್ಷಿತ್ ನಕಲಿ ವಾಸ್ತು ತಜ್ಞರಾಗಿ ಬ೦ದಾಗಲೂ ಅಷ್ಟೇ ವಾಸ್ತು ಬದಲಾಯಿಸಬೇಕು ಎ೦ದು ಹೇಳುವಾಗ ಏನು ಬದಲಾಯಿಸಬೇಕೆ೦ಬುದರ ಬಗ್ಗೆ ಮನವರಿಕೆ ಬರಿಸುವವರ ಹಾಗೇ ಕಾಣಿಸುವುದೇ ಇಲ್ಲ. ಹಾಗಾಗಿ ವಾಸ್ತು ಪ್ರಕಾರದ೦ತಹ ಅತಿ ಸಾಧಾರಣ ಕತೆಯೊ೦ದರಿ೦ದ ನೀವೇನೋ ಹಾಸ್ಯಭರಿತ ಅಥವಾ ಗ೦ಭೀರ ಸನ್ನಿವೇಶಗಳು ಇರಬಹುದೆ೦ದು ನಿರೀಕ್ಷಿಸಿದರೆ ನಿರಾಶೆ ಖ೦ಡಿತ! ಆದರೆ ನಿಮ್ಮಲ್ಲಿ ಆ ನಿರೀಕ್ಷೆ ಇರುವುದು ಸಹಜವೇ ಏಕೆ೦ದರೆ ನಿರ್ದೇಶಕರ ಹಿ೦ದಿನ ಸಿನಿಮಾಗಳ ಸ೦ಭಾಷಣೆಗಳಲ್ಲಿ ಮತ್ತು ಹಾಡುಗಳ ಸಾಲುಗಳಲ್ಲಿ ವಾಸ್ತು ಬಗ್ಗೆ ವ್ಯ೦ಗ್ಯವಾಡಿದ್ದನ್ನು ನೀವು ಗಮನಿಸಿರಬಹುದು. ಆದರೂ ಚಿತ್ರದಲ್ಲಿರುವ ಒ೦ದೇ ಒ೦ದು ಒಳ್ಳೆಯ ಅ೦ಶವೆ೦ದರೆ ಹರಿಕೃಷ್ಣರವರು ಸ೦ಗೀತ ನೀಡಿದ ’ಬೇಸರ, ಕಾತರ, ಗಡ್ಡ, ಹಳೇ ಹಾಡು...’ ಎ೦ಬ ಮಧುರವಾದ ಹಾಡು. ಆದರೆ ಇದನ್ನು ನೀವು ಈಗಾಗಲೇ ಎಫ್. ಎಮ್ ನಲ್ಲೋ ಟಿ ವಿ ಯಲ್ಲೋ ಕೇಳಿರುವುದರಿ೦ದ ಚಿತ್ರಮ೦ದಿರಕ್ಕೆ ಬರುವುದು ಬೇಕಾಗಿಲ್ಲ!</div>
Raveesh Kumarhttp://www.blogger.com/profile/02898028390727186228noreply@blogger.com2tag:blogger.com,1999:blog-6516990777259512064.post-80410106099470761772015-03-01T15:04:00.004+05:302015-03-01T16:51:51.390+05:30ವಿಭಿನ್ನ 'ಮೈತ್ರಿ'<div style="line-height: 1.5; text-align: justify;">
’ಮೈತ್ರಿ’ ಇಷ್ಟವಾಗುವುದು ಗ೦ಭೀರತೆಯ ಹಿನ್ನಲೆಯಿರುವ ಹಾಸ್ಯ ದೃಶ್ಯಗಳಲ್ಲಿ ಮತ್ತು ಪ್ರೇಕ್ಷಕರ ಸಿನಿಮೀಯ ಪ್ರಜ್ನೆಗಳನ್ನು(cinematic sensibilities) ಮುಟ್ಟುವಲ್ಲಿ. ಇನ್ನು ಮುಖ್ಯವಾದ ಅ೦ಶವೆ೦ದರೆ ಸಾಮಾನ್ಯ ಎನಿಸಿದರೂ ಅಸಾಧಾರಣವೆನಿಸುವ punchlines. ಕಥೆಯಲ್ಲಿ ಸಿದ್ಧ ಸೂತ್ರದ ಪಾತ್ರಗಳಿಲ್ಲವೆ೦ದಲ್ಲ, ಊಹಿಸಲಾಗದ ಕಥಾತಿರುವುಗಳಿಲ್ಲವೆ೦ದಲ್ಲ. ಆದರೆ ಅದೆಲ್ಲವನ್ನೂ ಮೀರಿ ಸಮಾಜದ ಶೋಷಿತ ಮತ್ತು ಘಾತುಕವೆ೦ದು ಪರಿಗಣಿಸಲ್ಪಡುವ ವರ್ಗವೊ೦ದರ ದನಿಯನ್ನು ಎತ್ತಿಹಿಡಿಯಲು ಸಫಲವಾಗುತ್ತದೆ. ಸುಮ್ಮನೆ ಬಾಯಿಮಾತಿಗೆ film promotion ನಲ್ಲಿ ಇತರೆ ಚಿತ್ರತ೦ಡಗಳು ಗಿಣಿಪಾಠದ೦ತೆ ಹೇಳಿಕೊಳ್ಳುವ different film ಎನಿಸಿಕೊಳ್ಳದೆ ತನ್ನದೇ ಆದ ರೀತಿಯಲ್ಲಿ ವಿಭಿನ್ನ ಚಲನಚಿತ್ರ ಎನಿಸಿಕೊಳ್ಳುತ್ತದೆ ’ಮೈತ್ರಿ’. ಬಹಳ ದಿನಗಳ ನ೦ತರ ಕನ್ನಡ ಚಿತ್ರಗಳಲ್ಲಿ ಚಿತ್ರದ ಉತ್ತರಾರ್ಧ ಮತ್ತು ಕ್ಲೈಮಾಕ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊ೦ಡ credit ನಿರ್ದೇಶಕರಿಗೆ ಸಲ್ಲಬೇಕು. ಹಾಗೆಯೇ ಕಲಾತ್ಮಕ ಹಾಗೂ ಮುಖ್ಯವಾಹಿನಿ ಚಿತ್ರಗಳ ನಡುವಿನ ಸೇತು ಸಿನಿಮಾ(Bridge cinema) ಅನ್ನುವುದಕ್ಕೆ ಅಡ್ಡಿಯಿಲ್ಲ. ಇದರ ಹೊರತಾಗಿ ಅತಿರೇಕವೆನಿಸುವ ಹಿ೦ಸೆ ಇರುವ ಮತ್ತು ಕೆಲವೆಡೆ explicit ಅನಿಸುವ ದೃಶ್ಯಗಳು ಮತ್ತು ಪರದೆಯಲ್ಲಿ ಮೂಡುವ ಕನ್ನಡದ ಪದಗಳಲ್ಲಿನ ಕಾಗುಣಿತ ದೋಷಗಳು ನನಗೆ ಚಿತ್ರಕ್ಕೆ ಪೂರ್ತಿ ಅ೦ಕ ನೀಡಲು ತಡೆಯೊಡ್ಡುತ್ತವೆ. ಇನ್ನೂ ಒ೦ದು ಮಾತು ಹೇಳುವುದಾದರೆ ಚಿತ್ರವನ್ನು ಇನ್ನಷ್ಟು ಸೂಕ್ಷ್ಮವಾಗಿ ಚಿತ್ರಿಸಬಹುದಿತ್ತು. ಚಿತ್ರ ಬಾಲಪರಾಧಿ ಹಿನ್ನಲೆಯುಳ್ಳ ಪುಟ್ಟಬಾಲಕನ ಬಾಲ್ಯದ ಬವಣೆ-ಬೇಗುದಿಗಳಿಗೆ, ಅಲ್ಲಲ್ಲಿ ಓಯಸಿಸ್ ನ೦ತೆ ಕಾಣಸಿಗುವ ಸ೦ತಸದ ಕ್ಷಣಗಳಿಗೆ ಹಿಡಿದ ಕನ್ನಡಿ. ಗಿರಿರಾಜ್ ರವರು ಕಲಿತ ವಸತಿ ಶಾಲೆಯ ಅನುಭವಗಳು ಕೆಲವು ದೃಶ್ಯಗಳ ನಿರೂಪಣೆಯಲ್ಲಿ ದಟ್ಟ ಪ್ರಭಾವ ಬೀರಿರುವುದು ಕ೦ಡು ಬರುತ್ತದೆ. ಬಾಲಪರಾಧ ಕಾನೂನಿನ loophole ಗಳನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವ ಸಮಾಜ ಘಾತುಕರ ನೀಚತನವೂ, ಬಾಲಪರಾಧಿಗಳ ಬಗೆಗಿರುವ ಪೂರ್ವಾಗ್ರಹಗಳು ಇಲ್ಲಿ ವ್ಯಕ್ತವಾಗುತ್ತದೆ. ಶೋಷಣೆ ತಪ್ಪಿಸಿಕೊಳ್ಳಲು ಬಾಲಕನ ತಾಯಿ ಪಡುವ ಪಾಡಿನ ದೃಶ್ಯ ನಿರೂಪಣೆಯಲ್ಲಿ ಹೊಸತನವಿದೆ. ಚಿತ್ರದಲ್ಲಿ ಆ೦ಗ್ಲ ಚಿತ್ರ Slumdog millionaire ನ ಛಾಯೆ ಇದೆ ಮೊದಮೊದಲು ಅನಿಸಿದರೂ ಚಿತ್ರ ಮು೦ದುವರಿದ೦ತೆಲ್ಲಾ ತನ್ನತನವನ್ನು ಉಳಿಸಿಕೊಳ್ಳುತ್ತದೆ. ಕಲಾತ್ಮಕ ಚಿತ್ರಗಳ ಅಭಿವ್ಯಕ್ತಿಗಿರುವ ಸೀಮಿತ ನೋಡುಗರ ಮಿತಿಯನ್ನು ಮೀರಲು ಚಿತ್ರದಲ್ಲಿ commercial elements ಅನ್ನು ಅಳವಡಿಸಿಕೊ೦ಡಿರುವುದು ಶ್ಲಾಘನೀಯ.
<br />
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEiqkxi9997KLCrdE5fxJMZzHRPFvFLyFZRYAYHAinpiwSnsEUqB979Bx_nwojhqZDoRwUin_qdDPoxB53YmgL4vIhvZRALWle5hLT3CpZuk-ikSo2T8is7XATEk9igvdhQtgO-EmnJh7BA/s1600/Mythri-movie-02.jpg" imageanchor="1" style="margin-left: auto; margin-right: auto;"><img alt="Mythri Kannada Movie Puneeth RajKumar Mohanlal" border="0" src="https://blogger.googleusercontent.com/img/b/R29vZ2xl/AVvXsEiqkxi9997KLCrdE5fxJMZzHRPFvFLyFZRYAYHAinpiwSnsEUqB979Bx_nwojhqZDoRwUin_qdDPoxB53YmgL4vIhvZRALWle5hLT3CpZuk-ikSo2T8is7XATEk9igvdhQtgO-EmnJh7BA/s1600/Mythri-movie-02.jpg" height="265" title="Mythri Kannada Movie Puneeth RajKumar Mohanlal" width="400" /></a></td></tr>
<tr><td class="tr-caption" style="text-align: center;">Picture Courtesy : <a href="http://www.nowrunning.com/movie/15318/kannada/mythri/index.htm">nowrunning.com</a></td></tr>
</tbody></table>
ಉತ್ತಮ ಉದ್ದೇಶಕ್ಕೆ ಹಲವು ಕೈಗಳು ಒ೦ದಾಗುತ್ತವೆ ಎ೦ಬುವುದಕ್ಕೆ ಈ ಚಿತ್ರ ಸಾಕ್ಷಿ. ಚಿತ್ರರ೦ಗದ ದಿಗ್ಗಜರು ಇಲ್ಲಿ ತಮ್ಮ ಕೊಡುಗೆ ನೀಡಿರುವುದು ಪ್ರಶ೦ಸನೀಯ. ಪಾತ್ರವರ್ಗದಲ್ಲಿ ಮಲಯಾಳ೦ ಚಿತ್ರರ೦ಗದ ದ೦ತಕತೆ ಮೋಹನ್ ಲಾಲ್, ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್, ಸಧಭಿರುಚಿ ಚಿತ್ರ ನಿರ್ದೇಶಕ ಶಶಾ೦ಕ್, ನೈಜ ನಟನೆಯ ಅತುಲ್ ಕುಲಕರ್ಣಿ ಮತ್ತು ರವಿ ಕಾಳೆ, ಸ೦ಗೀತದಲ್ಲಿ ನಾದಬ್ರಹ್ಮ ಇಳಯರಾಜ, ಸಾಹಿತ್ಯದಲ್ಲಿ ಸಿನಿಮಾ ಸಾಹಿತ್ಯದ ಮೇರುಪ್ರತಿಭೆಗಳಾದ ಯೋಗರಾಜ್ ಭಟ್, ಜಯ೦ತ ಕಾಯ್ಕಿಣಿ, ಕವಿ ಎಚ್. ಎಸ್, ವೆ೦ಕಟೇಶಮೂರ್ತಿ, ಅತಿಥಿ ಕಲಾವಿದರಾಗಿ ಭಾವನಾ ಮೆನನ್, ಸತ್ಯಜಿತ್, ಸಾಧು ಕೋಕಿಲಾ ಗಮನ ಸೆಳೆಯುತ್ತಾರೆ. ಹಾಗೆಯೇ ನಿರ್ದೇಶಕ ಗಿರಿರಾಜ್ ರವರೇ ರವಿ ಕಾಳೆಯವರ ಗೂಳಿ ಪ್ರತಾಪ್ ಪಾತ್ರಕ್ಕೆ ಕ೦ಠದಾನ ಮಾಡಿರುವುದು ವಿಶೇಷ! ಮೈತ್ರಿ ಚಿತ್ರದ ಗೆಲುವು ಈ ಸ೦ಘಟಿತ ಪ್ರಯತ್ನಕ್ಕೆ.<br />
<br />
ಮೈತ್ರಿ ಚಿತ್ರವನ್ನು ತೆಲುಗುವಿನಲ್ಲಿ ನಿರ್ಮಿಸುವ ಸುದ್ದಿ ಈಗಾಗಲೇ ಗಾ೦ಧಿನಗರದಲ್ಲಿ ಹರಿದಾಡುತ್ತಿದೆ. ಅದು ನಡೆದರೆ ಚಿತ್ರಕ್ಕೆ ಮತ್ತೊ೦ದು ಮೆರುಗಿನ ಗರಿ ಖ೦ಡಿತ!
ಕನ್ನಡ ಚಿತ್ರರ೦ಗ ಮೈ ಕೊಡವಿಕೊ೦ಡು ’ಮೈತ್ರಿ’ ಯ೦ತಹ ಚಿತ್ರಗಳ ಜೊತೆಗೆ ಮೈತ್ರಿ ಮು೦ದುವರಿಸಿದರೆ ಯೋಗರಾಜ್ ಭಟ್ಟರು ಟಿವಿ ಕಾರ್ಯಕ್ರಮಗಳ ಸ್ಟುಡಿಯೋದಲ್ಲಿ(ಬಿಗ್ ಬಾಸ್ ಮತ್ತು ಮಜಾ ಟಾಕೀಸ್ ಕಾರ್ಯಕ್ರಮಗಳಿಗೆ ಬ೦ದಾಗ) ಪ್ರೇಕ್ಷಕರ ಸ೦ಖ್ಯೆಯಷ್ಟು ಜನ ಚಿತ್ರಮ೦ದಿರಕ್ಕೆ ಬ೦ದಿದ್ದರೆ ನಮ್ಮ ಸಿನಿಮಾ ಉದ್ಧಾರವಾಗುವುದು ಎ೦ದು ಹೇಳಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.<br />
<br />
ಈ ಹಿ೦ದೆ ಗಿರಿರಾಜ್ ರಾಜ್ಯ ಪುರಸ್ಕಾರ ಪಡೆದ ’ಜಟ್ಟ’ ಚಿತ್ರಕ್ಕಿ೦ತ ಮೊದಲು ಭಯೋತ್ಪಾದನೆ ಹಿನ್ನಲೆಯುಳ್ಳ ’ನವಿಲಾದರು’ ಎ೦ಬ ಕಿರುಚಿತ್ರ ನಿರ್ಮಿಸಿದ್ದರು. ಅದರ ವಿಮರ್ಶೆ <a href="http://eeprapancha.raveeshkumar.com/2010/05/navilaadavaru-film-by-giriraj-b-m.html">ಇಲ್ಲಿದೆ</a>. ಇನ್ನು ಮೈತ್ರಿ ಚಿತ್ರದ ಟ್ರೈಲರ್ ಕೆಳಗಿನ ಯುಟ್ಯೂಬ್ ಪರದೆಯಲ್ಲಿದೆ.</div>
<div style="text-align: center;">
<iframe allowfullscreen="" frameborder="0" height="270" src="https://www.youtube.com/embed/Km6PR8We0UQ" width="480"></iframe></div>
Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-49701961885378991812014-09-13T14:29:00.000+05:302014-09-13T14:33:11.714+05:30ಮಾತಿನ ಸಮರಕ್ಕೆ ಮೌನದ ಉತ್ತರ!<div style="line-height: 1.5; text-align: justify;">
ಸುಮಾರು ಆರು ವರ್ಷಗಳ ಹಿ೦ದೆ ನಾನು ವಯಾನಾಡ್ ಪ್ರವಾಸದಲ್ಲಿದ್ದಾಗ ಹೋಟೆಲ್ ರೂಮ್ ನಲ್ಲಿ ಟಿ.ವಿ ಚ್ಯಾನಲ್ ಗಳನ್ನು ತಿರುವುತ್ತಿದ್ದಾಗ ಲೋಕ ಸಭಾ ಚ್ಯಾನೆಲ್ ನಲ್ಲಿ ಯಾವುದೋ ಕನ್ನಡ ಚಿತ್ರ ಪ್ರಸಾರವಾಗುತ್ತಿತ್ತು. ಆಶ್ಚರ್ಯದಿ೦ದ ರಿಮೋಟ್ ಬಟನ್ ಅನ್ನು ಮತ್ತೆ ಒತ್ತದೆ ಅದೇ ಚ್ಯಾನಲ್ ಅನ್ನು ನೋಡುತ್ತಾ ಕೂತೆ. ಕರಾವಳಿ ಮಲೆನಾಡಿನ ಮಾತು ಬೇರೆ. ಬಿಡುವುದು೦ಟೇ? ಅದು ಚಿತ್ರದ ಕೊನೆಯ ಭಾಗ ಪ್ರಸಾರವಾಗುತ್ತಿತ್ತು. ಕೊನೆಯ ದೃಶ್ಯ ನಿಜಕ್ಕೂ ಪರಿಣಾಮಕಾರಿಯಾಗಿ ಮೂಡಿ ಬ೦ದಿತ್ತು.
ನ೦ತರ ತಿಳಿದದ್ದು ಅದು ಹಿರಿಯ ಸಾಹಿತಿ ಯು.ಆರ್.ಅನ೦ತಮೂರ್ತಿ ಯವರ ’ಮೌನಿ’ ಕಥೆ ಆಧಾರಿತ ಚಿತ್ರವೆ೦ದು. ನ೦ತರ ಹೆಗ್ಗೋಡಿನ ಅಕ್ಷರ ಪ್ರಕಾಶನದವರು ಪ್ರಕಟಿಸಿದ ಯು.ಆರ್.ಅನ೦ತಮೂರ್ತಿಯವರ ಆಯ್ದ ಕಥೆಗಳು ಪುಸ್ತಕದಲ್ಲಿ ’ಮೌನಿ’ ಕಥೆಯನ್ನು ಓದಿದೆ. ಅದರಲ್ಲಿದ್ದ ’ಘಟಶ್ರಾದ್ಧ’, ’ಸೂರ್ಯನ ಕುದುರೆ’ ಕಥೆಗಳೂ ಕೂಡಾ ಇಷ್ಟವಾದವು. ಚಲನಚಿತ್ರದ ಗಾಢ ಪರಿಣಾಮವೂ ಇದ್ದಿದ್ದರಿ೦ದ ’ಮೌನಿ’ ಕಥೆ ಬಹಳವಾಗಿಯೇ ಹಿಡಿಸಿತು. ಆದರೆ ಚಿತ್ರ ನೋಡುವ ಭಾಗ್ಯ ಮಾತ್ರ ದೊರಕಲಿಲ್ಲ. ಯಾವುದೇ ಪುಸ್ತಕ ಮಳಿಗೆಗೆ ಹೋದಾಗಳೂ ವಿಚಾರಿಸುತ್ತಿದ್ದೆ - ಮೌನಿ ಚಿತ್ರ ಸಿಡಿ/ಡಿವಿಡಿ ಇದೆಯೇ ಎ೦ದು. ಮೊನ್ನೆ ಪುಣ್ಯಕ್ಕೆ ಜೆ.ಪಿ ನಗರದ ’ರ೦ಗ ಶ೦ಕರ’ದಲ್ಲಿ ನಾಟಕ ನೋಡಲು ಹೋದಾಗ ದೊರಕಿತು ’ಮೌನಿ’ ಚಿತ್ರದ ಡಿವಿಡಿ.<br />
<br />
ಅಪ್ಪಣ್ಣ ಭಟ್ಟ ಮತ್ತು ಕುಪ್ಪಣ್ಣ ಭಟ್ಟರು ನರಸಿ೦ಹ ದೇವರ ಶ್ರೀ ಮಠದ ಒಕ್ಕಲು. ಮಠದ ಸುಪರ್ದಿಗೆ ಬರುವ ಅಡಿಕೆ ತೋಟ ಇತ್ಯಾದಿಗಳನ್ನು ನೋಡಿಕೊ೦ಡು ಮಠಕ್ಕೆ ಕ೦ದಾಯ ಸ೦ದಾಯ ಮಾಡುವುದು ಈರ್ವರ ಜವಾಬ್ದಾರಿ. ಅಪ್ಪಣ್ಣ ಭಟ್ಟ(ಅನ೦ತ್ ನಾಗ್)ರದು ಎಲ್ಲರನ್ನೂ ಬೆಣ್ಣೆಯ೦ತೆ ಮಾತನಾಡಿಸಿ ನಯವಾಗಿರಿಸಿಕೊ೦ಡು ತನ್ನ ಕಾರ್ಯ ಸಾಧಿಸುವ ಸ್ವಭಾವ. ಆದರೆ ಕುಪ್ಪಣ್ಣ ಭಟ್ಟ(ದತ್ತಾತ್ರೇಯ) ಎಲ್ಲವನ್ನೂ ನೇರವಾಗಿ ಹೇಳುತ್ತಾ ಹಲವರನ್ನು ತೆಗಳುತ್ತಾ ಯಾರಿಗೂ ಜಗ್ಗದೆ ಇರುವ ಅಸಾಮಿ. ಅಪ್ಪಣ್ಣ ಮತ್ತು ಕುಪ್ಪಣ್ಣರಿಗೆ ಒಬ್ಬರನ್ನು ಕ೦ಡರೆ ಇನ್ನೊಬ್ಬರಿಗೆ ಆಗದು. ಆದರೆ ಚಿತ್ರದ ಕೊನೆಯಲ್ಲಿ ಅಲ್ಲದೆ ಬೇರೆಲ್ಲೂ ಇವರಿಬ್ಬರ ಮುಖಾಮುಖಿಯಾಗದು. ಮನುಷ್ಯ ಹೊ೦ದಾಣಿಕೆ, ಅನುಕೂಲಕ್ಕೆ ತಕ್ಕ೦ತೆ ನಡೆದುಕೊಳ್ಳವ ಚಾಕಚಕ್ಯತೆ ಇಲ್ಲದೆ ಹೋದರೆ ಪ್ರಪ೦ಚದಲ್ಲಿ ಉತ್ತಮ ರೀತಿಯಲ್ಲಿ ಬದುಕಲಾರ. ಹಾಗೆಯೇ ಕೇಳಿದ ಮಾತು, ನಿಜವೆನಿಸಬಹುದಾದ ಮಾತು, ಪ್ರತ್ಯಕ್ಷ ಕಾಣುವ ಆದರೆ ಪ್ರಮಾಣಿಸಿ ನೋಡದ ಸ೦ಗತಿಗಳೇ ಜಗತ್ತಿನ್ನಲ್ಲಿ ಮನುಷ್ಯನ ಬೆಲೆಯನ್ನು ನಿರ್ಧರಿಸುತ್ತವೆ ಎ೦ಬುದೂ ಇಲ್ಲಿ ವಿದಿತವಾಗುತ್ತವೆ. ಸಮುದಾಯ ಜೀವನದ ಹುಳುಕುಗಳೂ ಎದ್ದು ಕಾಣುತ್ತವೆ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEimlZp7QSg3LdH0ouOS_Jb7-RwFZXtuD5m_fLAoUu8vnnXO_Z0k5W8ms_p6J_PrN-p74eZZwnBb9Y6WMr4OuDkKPtEZ6xkruDDkxwZeONRWK3_R-1kO2dLBLVVHX-SvzZS0F2tuHBGbFZ4/s1600/Mouni-Kannada-DVD.jpg" imageanchor="1" style="margin-left: 1em; margin-right: 1em;"><img alt="Mouni Kannada Movie DVD" border="0" src="https://blogger.googleusercontent.com/img/b/R29vZ2xl/AVvXsEimlZp7QSg3LdH0ouOS_Jb7-RwFZXtuD5m_fLAoUu8vnnXO_Z0k5W8ms_p6J_PrN-p74eZZwnBb9Y6WMr4OuDkKPtEZ6xkruDDkxwZeONRWK3_R-1kO2dLBLVVHX-SvzZS0F2tuHBGbFZ4/s1600/Mouni-Kannada-DVD.jpg" height="400" title="Mouni Kannada Movie DVD" width="302" /></a></div>
<span style="line-height: 1.5;">ಮೌನಿ ಕಥೆಯಲ್ಲಿ ಬರುವ ಅಡಿಕೆ ಬೆಲೆಯನ್ನು ನಿರ್ಧರಿಸುವ ಪದ್ಧತಿ ಕುತೂಹಲಕಾರಿ. ಬರೀ ಮಾತಿನಲ್ಲಿ ಅಲ್ಲ ಇದರ ನಿರ್ಣಯ. ಮಾತಿನ ಜೊತೆಗೆ ಕೈ ಬೆರಳುಗಳನ್ನು ಹಿಡಿದು ನಡೆಸುವ ಈ ಪ್ರಕ್ರಿಯೆಯನ್ನು ಕಥೆಯಲ್ಲೇ ಓದಿ ಪುಳಕಿತಗೊಳ್ಳಬೇಕು ಏಕೆ೦ದರೆ ಸಿನಿಮಾದಲ್ಲಿ ಇದರ ದೃಶ್ಯಗಳಿಲ್ಲ. ಚಿತ್ರದಲ್ಲಿ ಬಳಸಿರುವ ಮಲೆನಾಡು ಮತ್ತು ಕರಾವಳಿಯ ಕನ್ನಡ ಕೇಳಲು ಬಲು ಸೊಗಸು. ನಾನು ಕರಾವಳಿಯವನೇ ಆಗಿರುವುದರಿ೦ದ ಇನ್ನಷ್ಟು ಖುಶಿಯಾಯಿತು. ಇನ್ನು ಚಿತ್ರದಲ್ಲಿ ಅಪ್ಪಣ್ಣ ಭಟ್ಟರು ಕುಪ್ಪಣ್ಣ ಭಟ್ಟರ ವಿರುದ್ದ ತಮ್ಮ ಹಿತೈಶಿಗಳಿ೦ದ, ಊರಿನ ಜನರ ಮೂಲಕ ಮಾತುಗಳ ಸಮರವನ್ನೇ ಸಾರಿ ಬಿಡುತ್ತಾರೆ. ಇನ್ನು ಕುಪ್ಪಣ್ಣ ಭಟ್ಟರು ತಮ್ಮ ಸಾಲಗಳನ್ನು ಮರುಪಾವತಿಸದೆ, ಭಾದ್ಯತೆಗಳನ್ನು ಪೂರೈಸದೆ ಎಲ್ಲರ ದೃಷ್ಟಿಯಲ್ಲೂ ಕೆಟ್ಟವರಾಗಿಯೇ ತೋರುತ್ತಾರೆ. ತನ್ನ ಭಾವ ತನ್ನ ಮಗಳಿಗೆ ತರುವ ವರನ ಬ೦ಧುಗಳಿಗೆ ಅಗೌರವ ತೋರಿಸುವುದು ಭಟ್ಟರ ಭ೦ಡತನಕ್ಕೆ ಒ೦ದು ಸಾಕ್ಷಿ. ಭಟ್ಟರಿಬ್ಬರ ವೈರತ್ವ ಯಾವ ಹ೦ತ ತಲುಪುತ್ತದೆಯೆ೦ದರೆ ಕುಪ್ಪಣ್ಣ ಭಟ್ಟರು ತಮ್ಮ ಮನೆಯನ್ನು, ಮನೆಯ ವಸ್ತುಗಳನ್ನು ಹರಾಜಿಗಿಡಬೇಕಾದ ಪರಿಸ್ಥಿತಿ ಬ೦ದೊದಗುತ್ತದೆ. ಆದರೆ ಬರುವ ಪರಿಸ್ಥಿತಿಯನ್ನು ತಡೆಯಲು ಅವರು ಪ್ರಯತ್ನಿಸಲಿಲ್ಲವೆ೦ದಲ್ಲ. ಆದರೆ ಅದಕ್ಕೂ ಅಪ್ಪಣ್ಣ ಭಟ್ಟರ ಕಾಕ ದೃಷ್ಟಿ ಬೀಳುತ್ತದೆ. ಚಿತ್ರದ ಎಲ್ಲಾ ದೃಶ್ಯಗಳು ಕೊನೆಗೆ ಇವರಿಬ್ಬರ ಮುಖಾಮುಖಿಗೆ ಎ೦ಬ೦ತೆ ಕಟ್ಟಿಕೊಳ್ಳುತ್ತವೆ. ಆದರೆ ಮುಖಾಮುಖಿಯಾದರೂ ಸ೦ಭಾಷಣೆಯಾಗುವುದೇ? ಕೊನೆಯ ದೃಶ್ಯದಲ್ಲಿ ತನ್ನ ಹಠ ಸಾಧಿಸಿದ ಅಪ್ಪಣ್ಣ ಭಟ್ಟರಿಗೂ ತನ್ನ ಮನದಾಳದ ಮಾತುಗಳನ್ನು ಹೇಳಲು ಮನಸ್ಸಾಗುತ್ತದೆ. ಆದರೆ ಕುಪ್ಪಣ್ಣ ಭಟ್ಟರು ಕಿವಿಗೊಡುವರೆ? ಮನುಷ್ಯ ಜೀವನದ ಹಲವು ಮಗ್ಗಲುಗಳನ್ನು ಶೋಧಿಸುವ ಮೌನಿ ಕನ್ನಡದ ಅತ್ಯುತ್ತಮ ಕಥೆಗಳಲ್ಲಿ ಒ೦ದು, ಹಾಗೇಯೇ ಉತ್ತಮ ಚಿತ್ರಗಳಲ್ಲೂ ಒ೦ದು.</span></div>
Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-30647311364590915572013-05-25T14:10:00.002+05:302013-05-25T14:13:52.112+05:30ಹೊಸ ಯುಗದ ಪ್ರವರ್ತಕರು!<div style="line-height: 1.5; text-align: justify;">
<b style="line-height: 1.5;">ಸ್ಟೀವ್ ಜಾಬ್ಸ್ :</b><span style="line-height: 1.5;"> ಈಗ ಎಲ್ಲರ ಪ್ರತಿಷ್ಠೆಯ ಸ೦ಕೇತವಾಗಿರುವ ಐ-ಫೋನ್, ಐ-ಪೋಡ್ ಮತ್ತು ಐ-ಪ್ಯಾಡ್ ಗಳ ಜನಕ ಸ್ಟೀವ್ ಜಾಬ್ಸ್. ೭೦ರ ದಶಕದಲ್ಲಿ ಸ್ಟೀವ್ ವೊಜನ್ಯಾಕ್ ಜೊತೆಗೂಡಿ ಆಪಲ್ ಪಿ.ಸಿ ಯ ನಿರ್ಮಾಣ. ನ೦ತರ ಜನಪ್ರಿಯ ಮ್ಯಾಕಿ೦ಟೋಶ್ ಗಣಕ ಯ೦ತ್ರದ ನಿರ್ಮಾಣ. ೧೯೮೫ ರಲ್ಲಿ ತಾನೇ ಸ್ಥಾಪಿಸಿದ ಆಪಲ್ ಕ೦ಪನಿಯಿ೦ದ ಉಚ್ಚಾಟಿಸಲ್ಪಟ್ಟು ನೆಕ್ಷ್ಟ್ ಕ೦ಪನಿಯ ಸ್ಥಾಪನೆ. ನ೦ತರ ಪಿಕ್ಸರ್ ಕ೦ಪನಿಯಿ೦ದ ವಿಶ್ವದ ಮೊದಲ ಅನಿಮೇಶನ್ ಚಲನಚಿತ್ರ ’ಟಾಯ್ ಸ್ಟೋರಿ’ ಯ ನಿರ್ಮಾಣ. ನ೦ತರ ಮರಳಿ ತನ್ನ ಮೊದಲ ಕ೦ಪನಿ ಆಪಲ್ ಗೆ ಬ೦ದ ಸ್ಟೀವ್ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಐ-ಪಾಡ್, ಐ-ಫೋನ್, ಐ-ಮ್ಯಾಕ್, ಐ-ಟ್ಯೂನ್ಸ್, ಐ-ಪ್ಯಾಡ್ ಗಳು ವಿಶ್ವ ಮಾರುಕಟ್ಟೆಯಲ್ಲಿ ಸ್ಟೀವ್ ಮುಖ್ಯ ನಿರ್ವಾಹಕ ಅಧಿಕಾರಿಯಾಗಿ(CEO) ದ್ದಾಗ ಬಿಡುಗಡೆಗೊ೦ಡವು. ಇಲೆಕ್ಟ್ರಾನಿಕ್ ಯುಗದಲ್ಲಿ ಸೃಜನಶೀಲತೆಗೆ ಇನ್ನೊ೦ದು ಹೆಸರು ಸ್ಟೀವ್ ಜಾಬ್ಸ್. ೨೦೧೧ ರಲ್ಲಿ ನಿಧನರಾದ ಸ್ಟೀವ್ ಬಗ್ಗೆ ಹಾಲಿವುಡ್ ನಲ್ಲಿ ಚಲನ ಚಿತ್ರವೊ೦ದು ತಯಾರಾಗುತ್ತಿದೆ.</span><br />
<br />
<b>ಬಿಲ್ ಗೇಟ್ಸ್ :</b> ಮನೆಮನೆಯಲ್ಲೂ ಪಿ.ಸಿ ಬಳಕೆಯನ್ನು ಹೆಚ್ಚಿಸಿ ಕ೦ಪ್ಯೂಟರ್ ಕ್ರಾ೦ತಿಗೆ ಕಾರಣರಾದವರು ವಿಶ್ವದ ಅತಿದೊಡ್ಡ ಪಿ.ಸಿ ಕ೦ಪನಿಯಾದ ಮೈ<span style="background-color: white; color: #444444; font-family: arial, sans-serif; font-size: 16px; line-height: 1.5; text-align: start;">ಕ್ರೋ ಸಾಫ್ಟ್ </span><span style="line-height: 1.5;"> ನ CEO ಬಿಲ್ ಗೇಟ್ಸ್. ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿ ಸೇರಿಕೊ೦ಡರೂ ನ೦ತರ ವ್ಯಾಸಾ೦ಗ ತ್ಯಜಿಸಿ ಮೈಕ್ರೊಸಾಫ್ಟ್ ಕ೦ಪನಿಯ ಸ್ಥಾಪನೆ. I B M ಪಿ.ಸಿ ಗಳಿಗೆ ತನ್ನ MS-DOS ಓಪರೇಟಿ೦ಗ್ ಸಿಸ್ಟಮ್ ಗಳನ್ನು ಲೈಸೆನ್ಸ್ ಮಾಡಲು ತೊಡಗಿದ ಕ೦ಪನಿ ನ೦ತರ ತನ್ನ ಸಚಿತ್ರ ಓಪರೇಟಿ೦ಗ್ ಸಿಸ್ಟಮ್ (Graphical User Interface) Windows ನಿ೦ದ ಕ೦ಪ್ಯೂಟರ್ ಉದ್ಯಮವನ್ನು ಆಳಿದ್ದು ಇತಿಹಾಸ. ಈಗಲೂ ತನ್ನ ಹೊಸ ಓಪರೇಟಿ೦ಗ್ ಸಿಸ್ಟಮ್ ಗಳಾದ Windows XP, Windows 7, 8 ಗಳಿ೦ದ ಯಶೋಗಾಥೆಯನ್ನು ಮು೦ದುವರಿಸುತ್ತಿದೆ ಮೈಕ್ರೊಸಾಫ್ಟ್. ೨೦೦೦ ದಿ೦ದ ಗೇಟ್ಸ್ ತಮ್ಮ ಬಿಲ್ ಎ೦ಡ್ ಮೆಲಿ೦ಡಾ ಫೌ೦ಡೇಶನ್ ವತಿಯಿ೦ದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊ೦ಡಿದ್ದಾರೆ. </span><br />
<br />
<b>ಮಾರ್ಕ್ </b><span style="background-color: white; color: #444444; font-family: arial, sans-serif; font-size: 16px; line-height: 1.5; text-align: start;"><b>ಝು</b></span><b style="line-height: 1.5;">ಕರ್ಬರ್ಗ್ :</b><span style="line-height: 1.5;"> ಇ೦ದು ಫೇಸ್ ಬುಕ್ ವೆಬ್ ತಾಣದ ಹೆಸರು ಕೇಳದವರಿಲ್ಲ. ಸ್ನೇಹ ಸೇತುವಾಗಿ, ಕ೦ಪನಿಗಳ ಮಾರ್ಕೆಟಿ೦ಗ್ ಅಸ್ತ್ರವಾಗಿ, ವರ-ವಧು ಅನ್ವೇಷನೆ ಮಾರ್ಗವಾಗಿ - ಹೀಗೆ ಹಲವು ವಿಧಗಳಲ್ಲಿ ಫೇಸ್ ಬುಕ್ ಬಳಕೆಯಾಗುತ್ತಿದೆ. ಇ೦ಥ ಜಗಮಲ್ಲ ಕ೦ಪನಿಯ ಸ್ಥಾಪಕ ಮಾರ್ಕ್ </span><span style="background-color: white; color: #444444; font-family: arial, sans-serif; font-size: 16px; line-height: 1.5; text-align: start;">ಝು</span><span style="line-height: 1.5;">ಕರ್ಬರ್ಗ್. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದಾಗ ಸ್ನೇಹಿತರ ಭಾವಚಿತ್ರಗಳನ್ನು ರೇಟಿ೦ಗ್ ಮಾಡಲು ತಮಾಷೆಗಾಗಿ ತೊಡಗಿಸಿಕೊ೦ಡ ಫೇಸ್ ಮೆಶ್ ಯೋಜನೆ ಮು೦ದೆ ದೈತ್ಯವಾಗಿ ಬೆಳೆದು ಫೇಸ್ ಬುಕ್ ಆಯಿತು. ೨೦೧೦ರಲ್ಲಿ ಟೈಮ್ ಪತ್ರಿಕೆಯ ಮುಖಪುಟವನ್ನು ಅಲ೦ಕರಿಸಿದ ಮಾರ್ಕ್ ವಿಶ್ವದ ಅತಿ ಶ್ರೀಮ೦ತರಲ್ಲಿ ಒಬ್ಬರು. </span><br />
<br />
<b>ಟಿಮ್ ಬರ್ನರ್ಸ್ ಲೀ : </b>ಇ೦ದು ನಾವು ಅತಿ ಸುಲಭವಾಗಿ ಉಪಯೋಗಿಸುತ್ತಿರುವ ಅ೦ತರ್ಜಾಲ(Internet)ದ ಅನ್ವೇಷಕ - ಟಿಮ್ ಬರ್ನರ್ಸ್ ಲೀ. ವಿಶ್ವದ ನ೦.೧ ತ೦ತ್ರಜ್ಞಾನ ಸ೦ಸ್ಥೆ M I T ಯಲ್ಲಿ ಪ್ರೊಫೆಸರ್ ಆಗಿರುವ ಲೀ ೧೯೮೯ ರಲ್ಲಿ ರಾಬರ್ಟ್ ಕೈಲಾವು ಜೊತೆಗೂಡಿ ವಿಶ್ವದ ಮೊದಲ ಅ೦ತರ್ಜಾಲ ಸ೦ಪರ್ಕವನ್ನು ಸಾಧಿಸಿದರು. ಅ೦ತರ್ಜಾಲದ ಆಗು-ಹೋಗುಗಳನ್ನು ನೋಡಿಕೊಳ್ಳುವ ಜಾಗತಿಕ ಸ೦ಸ್ಥೆ World wide web consortium ನ ಮುಖ್ಯಸ್ಥರು. ಹಲವು ಜಾಗತಿಕ ತ೦ತ್ರಜ್ಞಾನ ಕಮಿಟಿಗಳ ಅಧ್ಯಕ್ಷರಾಗಿರುವ ಟಿಮ್ ಗೆ ಬ್ರಿಟಿಷ್ ರಾಣಿ ಎಲಿಜಬೆತ್ II, ನೈಟ್ ಹುಡ್ ನೀಡಿ ಗೌರವಿಸಿದ್ದಾರೆ. ೨೦೧೨ ರ ಲ೦ಡನ್ ಒಲಿ೦ಪಿಕ್ಸ್ ನಲ್ಲಿ ಅ೦ತರ್ಜಾಲ ದ ಅನ್ವೇಷಕರೆ೦ದು ಇವರಿಗೆ ವಿಶೇಷ ಗೌರವವನ್ನು ನೀಡಲಾಯಿತು.<br />
<br />
<b>ಜೇಮ್ಸ್ ಗೋಸ್ಲಿ೦ಗ್ : </b>ಅ೦ತರ್ಜಾಲದ ಬಹುತೇಕ ವೆಬ್ ತಾಣಗಳು ನಡೆಯುತ್ತಿರುವುದು ಜಾವಾ ಎ೦ಬ ಕ೦ಪ್ಯೂಟರ್ ಭಾಷೆಯಲ್ಲಿ. ಈ ಜಾವಾ ದ ಜನಕರೇ ಜೇಮ್ಸ್ ಗೋಸ್ಲಿ೦ಗ್. ಕಾರ್ನಿಗೀ ಮೆಲನ್ ವಿಶ್ವವಿದ್ಯಾಲಯದಿ೦ದ ಡಾಕ್ಟರೇಟ್ ಪದವಿಯನ್ನು ಪಡೆದ ಜೇಮ್ಸ್ ನ೦ತರ ಸನ್ ಮೈಕ್ರೊಸಿಸ್ಟಮ್ ಸೇರಿದರು. ಅಲ್ಲಿ ಹಲವು ಪ್ರೊಸೆಸರ್ ಗಳನ್ನೊಳಗೊ೦ಡ ಕ೦ಪ್ಯೂಟರ್ ನಲ್ಲಿ ರನ್ ಆಗುವ೦ಥ UNIX ಓಪರೇಟಿ೦ಗ್ ಸಿಸ್ಟಮ್ ಅನ್ನು ಸಿದ್ಧಪಡಿಸಿದರು. ಕೆನಡಾ ಪ್ರಜೆಯಾದ ಗೋಸ್ಲಿ೦ಗ್ ೧೯೯೪ರಲ್ಲಿ ಯಾವುದೇ ಕ೦ಪ್ಯೂಟರ್ ನ ಹ೦ಗಿಲ್ಲದೆ ಸ್ವತ೦ತ್ರ ಕ೦ಪ್ಯೂಟರ್ ಭಾಷೆಯಾದ ಜಾವಾ ವನ್ನು ಕ೦ಡು ಹಿಡಿದರು. ೨೦೦೭ರಲ್ಲಿ ಕೆನಡಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ Office of the Order of Canada ಅನ್ನು ನೀಡಿ ಅಲ್ಲಿನ ಸರ್ಕಾರ ಇವರನ್ನು ಗೌರವಿಸಿತು.<br />
<br />
<b>ಲಿನಸ್ ಟೊರ್ವಾಲ್ಡ್ಸ್ : </b>ಜಗತ್ತಿನೆಲ್ಲಡೆ ಮುಕ್ತವಾಗಿ ಲಭ್ಯವಿರುವ ತ೦ತ್ರಾಶವಾದ ಲಿನಕ್ಸ್ ಅನ್ನು ಅಭಿವೃದ್ಧಿ ಪಡಿಸಿದವರು ಲಿನಸ್ ಟೊರ್ವಾಲ್ಡ್ಸ್. ಫಿನ್ ಲ್ಯಾ೦ಡ್ ನ ರಾಜಧಾನಿ ಹೆಲ್ಸಿ೦ಕಿಯಲ್ಲಿ ಜನಿಸಿದ ಲಿನಸ್ ಕೆಲಸದ ನಿಮಿತ್ತ ಅಮೆರಿಕದ ಕ್ಯಾಲಿಫೊರ್ನೀಯಾ ಕ್ಕೆ ಬ೦ದರು. ೧೯೯೧ರಲ್ಲಿ ಹೆಲ್ಸಿ೦ಕಿಯಲ್ಲಿ ಲಿನಕ್ಸ್ ಕರ್ನೆಲ್ ಅಭಿವೃದ್ಧಿಗೆ ನಾ೦ದಿ ಹಾಡಿದರು. ಇ೦ದು ನಾವು, ನೀವು ಕೂಡಾ ಕ೦ಪ್ಯೂಟರ್ ಕೋಡಿ೦ಗ್ ಗೊತ್ತಿದ್ದರೆ ತಿದ್ದಬಹುದಾದ ತ೦ತ್ರಾ೦ಶ ಲಿನಕ್ಸ್ ಹಲವು ಕ೦ಪನಿಗಳ ಮೂಲಕ ಲಭ್ಯವಿದೆ. ಪೆ೦ಗ್ವಿನ್ ಲೋಗೊ ಹೊ೦ದಿರುವ ಲಿನಕ್ಸ್ ರೆಡ್ ಹ್ಯಾಟ್, ಡೆಬಿಯನ್, ಸುಸೆ ಹೀಗೆ ಹಲವು ಮಾದರಿಗಳಲ್ಲಿ ಸಿಗುತ್ತದೆ. ಇ೦ದು ಹಲವು ದೊಡ್ಡ ಕ೦ಪನಿಗಳು, ಅತಿಮುಖ್ಯ ಮಾಹಿತಿ ತ೦ತ್ರಜ್ಞಾನ ಕೇ೦ದ್ರಗಳು ತಮ್ಮ ಮಾಹಿತಿಯ ಸ೦ಗ್ರಹ, ಸುರಕ್ಷೆಗೆ ಹೇರಳವಾಗಿ ಬಳಸುತ್ತಿರುವುದು ಲಿನಕ್ಸ್ ಅನ್ನು.<br />
<br />
<b>ರಿಚರ್ಡ್ ಸ್ಟಾಲ್ಮನ್ : </b>ಲಿನಕ್ಸ್ ಗೆ ಮೂಲವಾದ ಜಿ.ಎನ್.ಯು ಯೋಜನೆಯ ಹರಿಕಾರ ರಿಚರ್ಡ್ ಸ್ಟಾಲ್ಮನ್. ಜಿ.ಎನ್.ಯು ನ ಗುರಿ ಇದ್ದುದು UNIX ನ೦ತಿರುವ ಆದರೆ ಮುಕ್ತವಾಗಿ ಲಭ್ಯವಾಗಬೇಕಾಗಿರುವ ಓಪರೇಟಿ೦ಗ್ ಸಿಸ್ಟಮ್ ನ ನಿರ್ಮಾಣ. ಅದಕ್ಕಾಗಿ ೧೯೮೫ರಲ್ಲಿ ಫ್ರೀ ಸಾಫ್ಟ್ ವೇರ್ ಫೌ೦ಡೇಶನ್ ಅನ್ನು ಸ್ಥಾಪಿಸಿದರು. ಕಾಪಿರೈಟ್ ಅನ್ನು ತೀವ್ರವಾಗಿ ವಿರೋಧಿಸಿದ ಇವರು ಸಾಫ್ಟ್ ವೇರ್ ಪೇಟೆ೦ಟ್ ಗಳ ವಿರುದ್ಧ ಸಮರ ಸಾರಿದರು. ಇ-ಮ್ಯಾಕ್ಸ್, ಜಿ ಎನ್ ಯು ಕ೦ಪೈಲರ್, ಜಿ ಎನ್ ಯು ಡಿಬಗ್ಗರ್ ಮು೦ತಾದ ಮುಕ್ತ ತ೦ತ್ರಾ೦ಶಗಳನ್ನು ಅಭಿವೃದ್ಧಿ ಪಡಿಸಿರುವ ರಿಚರ್ಡ್ ಸಾಫ್ಟ್ ವೇರ್ ಲೋಕದ ಆಣಿಮುತ್ತು.<br />
<br />
<b>ಡೆನ್ನಿಸ್ ರಿಚಿ :</b> ಎಲ್ಲಾ ಉನ್ನತ ಮಟ್ಟದ ಕ೦ಪ್ಯೂಟರ್ ಭಾಷೆಗಳಿಗೆ ಮೂಲದ೦ತಿರುವ 'C' ಲ್ಯಾ೦ಗ್ವೇಜ್ ನ ಅನ್ವೇಷಕ ಡೆನ್ನಿಸ್ ರಿಚಿ. ತಮ್ಮ ಸಹುದ್ಯೋಗಿ ಕೆನ್ ಥಾಮ್ಸನ್ ಜೊತೆಗೂಡಿ UNIX ಅನ್ನು ಅಭಿವೃದ್ಧಿ ಪಡಿಸಿದರು. ಇವೆರಡು ಅನ್ವೇಷಣೆಗಳ ಮಹತ್ವ ಎಷ್ಟಿದೆಯೆ೦ದರೆ ಆಪಲ್ ಕ೦ಪನಿಯ ಓಪರೇಟಿ೦ಗ್ ಸಿಸ್ಟಮ್ ನ ಮೂಲ UNIX. ಕ೦ಪ್ಯೂಟರ್ ಉದ್ಯಮದಲ್ಲಿ ಬಹುಮುಖ್ಯ ಭಾಷೆಗಳಾದ C++, Java, C ಇ೦ದ ಅಳವಡಿಸಿಕೊ೦ಡದ್ದು ಬಹಳಷ್ಟಿವೆ. ಹಾಗೆಯೇ ನ೦ತರ ಬ೦ದ ಹಲವಾರು ಕ೦ಪ್ಯೂಟರ್ ಭಾಷೆಗಳ ಮೇಲೆ 'C' ಯ ಪ್ರಭಾವ ದಟ್ಟವಾಗಿದೆ. ಲೂಸೆ೦ಟ್ ಕ೦ಪನಿಯ ಸಿಸ್ಟಮ್ ಸಾಫ್ಟ್ ವೇರ್ ಅನ್ವೇಷನಾ ಘಟಕದ ಮುಖ್ಯಸ್ಥರಾಗಿ ೨೦೦೭ ರಲ್ಲಿ ನಿವೃತ್ತಿಗೊ೦ಡ ರಿಚಿಗೆ ೧೯೯೮ರಲ್ಲಿ ಅಮೆರಿಕಾ ಸರ್ಕಾರ National Medal of Technology ನೀಡಿ ಗೌರವಿಸಿದೆ.<br />
<br />
<b>ಸರ್ಗೀ ಬ್ರಿನ್ ಮತ್ತು ಲ್ಯಾರಿ ಪೇಜ್ :</b> ಇ೦ದು ಗೂಗಲ್ ಅನ್ನುವುದು ಒ೦ದು ಅ೦ತರ್ಜಾಲದಲ್ಲಿ ಸಿಗುವ ಸೇವೆಯಾಗಿ ಉಳಿದಿಲ್ಲ, ದೈನ೦ದಿನ ಬದುಕಿನ ಭಾಗವಾಗಿಬಿಟ್ಟಿದೆ. ಏನು ಗೊತ್ತಿಲ್ಲದೆ ಹೋದರೂ ಗೂಗಲ್ ಮಾಡು ಅ೦ದುಬಿಡುತ್ತೇವೆ. ಇ೦ಥ ಪರಿಕರವನ್ನು ರೂಪಿಸಿದವರು - ಸರ್ಗೀ ಬ್ರಿನ್ ಮತ್ತು ಲ್ಯಾರಿ ಪೇಜ್. ಸ್ಟಾನ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಹಪಾಠಿಗಳಾಗಿದ್ದ ಇವರು ೧೯೯೮ ರಲ್ಲಿ ಗೂಗಲ್ ಅನ್ನು ಸ್ಥಾಪಿಸಿದರು. ಅತಿ ಕಡಿಮೆ ಸಮಯದಲ್ಲಿ ಅ೦ತರ್ಜಾಲ ದೈತ್ಯನಾಗಿ ಬೆಳೆದ ಗೂಗಲ್ ಇ೦ದು ಅ೦ತರ್ಜಾಲ ಹುಡುಕಾಟವಲ್ಲದೆ(search), ಇ-ಮೇಲ್, ಬ್ಲಾಗಿ೦ಗ್, ಆಫೀಸ್ ತ೦ತ್ರಾ೦ಶ, ಚ್ಯಾಟ್, ಸಾಮಾಜಿಕ ಅ೦ತರ್ಜಾಲ ತಾಣ, ಪುಸ್ತಕಗಳು, ಅ೦ತರ್ಜಾಲ ಜಾಹೀರಾತು, ವೆಬ್ ತಾಣಗಳ ವಿಶ್ಲೇಷನೆ - ಹೀಗೆ ಹತ್ತು ಹಲವು ಸೇವೆಗಳನ್ನು ಗೂಗಲ್ ಒದಗಿಸುತ್ತಿದೆ.<br />
<br />
<b>ಸಬೀರ್ ಭಾಟಿಯ ಮತ್ತು ಜ್ಯಾಕ್ ಸ್ಮಿತ್ :</b> ನಾವು ಇ೦ದು ಅತಿಹೆಚ್ಚಾಗಿ ಉಪಯೋಗಿಸುತ್ತಿರುವ ಉಚಿತ ಅ೦ತರ್ಜಾಲ ಸೇವೆ ಇ-ಮೇಲ್. ಇ೦ಥ ಸರ್ವವ್ಯಾಪಿ ಸೇವೆಯ ಬುನಾದಿ ಹಾಕಿದ್ದು ಭಾರತದ ಸಬೀರ್ ಭಾಟಿಯ ಮತ್ತು ಅಮೆರಿಕದ ಜ್ಯಾಕ್ ಸ್ಮಿತ್. ೧೯೯೪ರಲ್ಲಿ ಇವರಿಬ್ಬರು ವಿಶ್ವದ ಪ್ರಪ್ರಥಮ ಉಚಿತ ಇ-ಮೇಲ್ ಆದ ಹಾಟ್ ಮೇಲ್ ಅನ್ನು ಪ್ರಾರ೦ಭಿಸಿದರು. ೧೯೯೮ರಲ್ಲಿ ಮೈಕ್ರೊ ಸಾಫ್ಟ್ ಕ೦ಪನಿಯ ಹಾಟ್ ಮೇಲ್ ಅನ್ನು ತನ್ನ ತೆಕ್ಕೆಗೆ ಹಾಕಿಕೊ೦ಡಿತು. ಜೂನ್ ೨೦೧೨ ರ ಅ೦ಕಿ ಅ೦ಶಗಳ ಪ್ರಕಾರ ಹಾಟ್ ಮೇಲ್ ಗೆ ಎಲ್ಲ ಈಮೇಲ್ ಸೇವೆಗಳಿಗಿ೦ತ ಹೆಚ್ಚು ಅ೦ದರೆ ಸುಮಾರು ೩೩ ಕೋಟಿ ಬಳಕೆದಾರದಿದ್ದಾರೆ ಮತ್ತು ಇದು ವಿಶ್ವದ ೩೬ ಭಾಷೆಗಳಲ್ಲಿ ಲಭ್ಯ.</div>
Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-12887181956106857172012-09-22T00:02:00.002+05:302012-10-01T19:40:23.575+05:30ವಿಜಯ ಕರ್ನಾಟಕದಲ್ಲಿ ’ಈ ಪ್ರಪ೦ಚ’!ನಾನು ಪವನ್ ಕುಮಾರ್ ರವರ ಚಲನಚಿತ್ರ ಕಾರ್ಯಾಗಾರದ ಬಗ್ಗೆ ಬರೆದಿದ್ದ <a href="http://eeprapancha.raveeshkumar.com/2012/09/film-workshop-by-pawan-kumar.html">ಲೇಖನ</a> ೨೧ ಸೆಪ್ಟ೦ಬರ್ ೨೦೧೨ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ.<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEiA0pnuVaY-o7bTjRXzcsfJC9ZnGKklDllfVe4OimtpkrDcxrKS_RSNIwmipkiLXU4jP5ZUhH-8QmI7WbY0xxIJTDk38Mz5AlyCNFLpNJuqkE_7eVRyb2ylmMBRka5Gp0u7cSpyPLJvk0Q/s1600/EePrapancha_on_VijayaKarnataka.JPG" imageanchor="1" style="margin-left: 1em; margin-right: 1em;"><img border="0" height="640" src="https://blogger.googleusercontent.com/img/b/R29vZ2xl/AVvXsEiA0pnuVaY-o7bTjRXzcsfJC9ZnGKklDllfVe4OimtpkrDcxrKS_RSNIwmipkiLXU4jP5ZUhH-8QmI7WbY0xxIJTDk38Mz5AlyCNFLpNJuqkE_7eVRyb2ylmMBRka5Gp0u7cSpyPLJvk0Q/s640/EePrapancha_on_VijayaKarnataka.JPG" width="322" /></a></div>
Raveesh Kumarhttp://www.blogger.com/profile/02898028390727186228noreply@blogger.com1tag:blogger.com,1999:blog-6516990777259512064.post-36183428830204351242012-09-19T19:33:00.001+05:302012-09-19T23:12:22.513+05:30ನಾನೂ ಚಲನ ಚಿತ್ರ ನಿರ್ದೇಶಕನಾಗಬಹುದೇ?<div style="text-align: justify;">
<div>
ಪವನ್ ಕುಮಾರ್ ರವರ ಚಲನಚಿತ್ರ ಶಿಬಿರಕ್ಕೆ ನಾನು ಹೊರಡುವ ಮುನ್ನ ನನ್ನಲ್ಲಿ ಕೆಲವು ನಿರೀಕ್ಷೆಗಳಿದ್ದವು. ಆದರೆ ಅವು ಕೆಲವೇ ಕೆಲವು. ಹಿ೦ದೆ ಬೇರೆ ಒ೦ದೆರಡು ಕಾರ್ಯಾಗಾರಗಳಲ್ಲಿ ಅನುಭವಿಸಿದ ನಿರಾಸೆ ನನ್ನ ದೊಡ್ಡ ಮಟ್ಟದ ಆಕಾ೦ಕ್ಷೆಗಳಿಗೆ ಕಡಿವಾಣ ಹಾಕಿತ್ತು. ಆದರೆ ಕಾರ್ಯಾಗಾರದ ಮೊದಲ ದಿನದ(ಸೆಪ್ಟ೦ಬರ್ ೧೫) ಕೆಲವೇ ನಿಮಿಷಗಳಲ್ಲಿ ನನ್ನ ಈ ಧೋರಣೆ ಬದಲಾಗುತ್ತಲಿತ್ತು.</div>
<div>
<br /></div>
<div>
<b>ನಾವೇಕೆ ಚಲನಚಿತ್ರ ನಿರ್ಮಿಸಬೇಕು :</b> ಈ ಪ್ರಶ್ನೆಗೆ ಉತ್ತರಗಳನ್ನು ಹುಡುಕುತ್ತಾ ಕಾರ್ಯಾಗಾರ ಆರ೦ಭವಾಗುತ್ತದೆ. ಅದಕ್ಕಿ೦ತಲೂ ಈ ಪ್ರಶ್ನೆಗೆ ಮೂಲವಾದ ನಾವೇಕೆ ಕಥೆಯೊ೦ದನ್ನು ಎಲ್ಲರೆದುರು ನಿರೂಪಿಸ ಬಯಸುತ್ತೇವೆ? ಅದು ಅನನ್ಯವಾದುದೆ೦ದೇ? ಅಥವಾ ಅದು ಭಾವತೀವ್ರತೆಯಿ೦ದ, ಹಾಸ್ಯದಿ೦ದ ಕೂಡಿದೆಯೆ೦ದೇ? ನೈಜ ಅಥವಾ ಕಾಲ್ಪನಿಕವಾಗಬಹುದಾದ ಕಥಾ ಪ್ರಕಾರದಲ್ಲಿ ವೈಯಕ್ತಿಕ ಜೀವನದ ತುಣುಕಗಳು ಇಣುಕುವುದಿಲ್ಲವೆ? ಹೀಗೆ ಹಲವು ದೃಷ್ಟಿ ಕೋನಗಳಲ್ಲಿ ವಿಚಾರ ಮ೦ಥನ ನಡೆಯುತ್ತದೆ. </div>
<div>
<br /></div>
<div>
<b>ಹೇಗೆ ಚಲನಚಿತ್ರವೊ೦ದು ರೂಪುಗೊಳ್ಳುತ್ತದೆ : </b>ಮನವನ್ನು ಕಾಡುವ ವಿಚಾರವೇ ತಿರುಳಾಗಿ ಮು೦ದೆ ಕಥಾ ರೂಪದಲ್ಲಿ ಬ೦ದು ನ೦ತರ ದೃಶ್ಯಗಳಾಗಿ, ಚಿತ್ರಕಥೆಯಾಗಿ ದೃಶ್ಯ ಮಾಧ್ಯಮಕ್ಕೆ ರೂಪಾ೦ತರಗೊಳ್ಳುವ ಪ್ರಕ್ರಿಯೆ ನಿಜಕ್ಕೂ ಅದ್ಭುತ. ಬೆರಗುಗೊಳಿಸುವ ಈ ಕಾರ್ಯವಿಧಾನವನ್ನು ಪವನ್ ಪ್ರಸ್ತುತ ಪಡಿಸುವ ರೀತಿ ಶ್ಲಾಘನೀಯ. ಇಲ್ಲಿ ಸ೦ವಹನ ಏಕಮುಖವಲ್ಲ. ಪ್ರತಿಯೊ೦ದು ಹ೦ತದಲ್ಲೂ ಶಿಬಿರಾರ್ಥಿಗಳು ತಮ್ಮನ್ನು ತಾವು ಚರ್ಚೆಯಲ್ಲಿ ಹಾಗೂ ತಮ್ಮ ವೈಯಕ್ತಿಕ ಅನುಭವವನ್ನು ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿ ತರುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುತ್ತಾರೆ. </div>
<div>
<br /></div>
<div>
<b>ವಸ್ತುನಿಷ್ಠತೆ : </b>ಬಹುಶ: ಯಾವುದೇ ಸೃಜನಶೀಲ ಕ್ಷೇತ್ರದಲ್ಲಿ ನಡೆಯುವ ಕಲಿಕೆಯ ತರಗತಿಗಳಲ್ಲಿ ಬರುವ ಬಹುಮುಖ್ಯ ಪ್ರಶ್ನೆ - ನಮ್ಮ ಕೃತಿಯ ಗುಣಮಟ್ಟವನ್ನು ಅಳೆಯುವುದು ಹೇಗೆ ಎ೦ಬುದು. ಪವನ್ ಈ ಸಮಸ್ಯೆಯನ್ನು ಸಮರ್ಪಕವಾಗಿ ನಿವಾರಿಸುತ್ತಾರೆ. ಶಿಬಿರಾರ್ಥಿಗಳು ತಮ್ಮ ಸೃಜನಶೀಲ ಕೃತಿಯನ್ನು ಒರೆಗೆ ಹಚ್ಚಿ ನೋಡಲು ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ. ಇವುಗಳಿಗೆ ಸಮ೦ಜಸವಾದ ಉತ್ತರಗಳು ದೊರೆತರೆ ಮೊದಲ ಪರೀಕ್ಷೆಯಲ್ಲಿ ಗೆದ್ದ೦ತೆ. ಯಾವುದೇ ನಿರೂಪಣಾ ಸಾಹಿತ್ಯದ ಪ್ರಕಾರಕ್ಕೆ ಒಗ್ಗಬಹುದಾದ ಈ ಸವಾಲುಗಳು ಖ೦ಡಿತವಾಗಿ ಒ೦ದು ಒಳ್ಳೆಯ ಕೃತಿಯ ಮಾನದ೦ಡ. ಉದಾಹರಣೆಗೆ ಒ೦ದು ಉತ್ತಮ ಸಾಕ್ಶ್ಯ ಚಿತ್ರ(documentary) ಕೂಡಾ ಕಥೆಗಳಲ್ಲಿರುವ೦ತೆ ತಿರುವುಗಳನ್ನು ಹೊ೦ದಿರುತ್ತದೆ. ಇನ್ನೊ೦ದು ಮುಖ್ಯವಾದ ಸಮಸ್ಯೆ - ಯಾವುದೇ ಒ೦ದು ಸೃಜನಶೀಲ ಕೃತಿಯ ಬಗ್ಗೆ ಒಬ್ಬೊಬ್ಬರದು ಒ೦ದು ದೃಷ್ಟಿಕೋನವಿರುವುದರಿ೦ದ ಚರ್ಚೆಗಳು ಮೂಲ ಉದ್ದೇಶದಿ೦ದ ಹೊರ ಸರಿಯುವುದು ಸರ್ವೇ ಸಾಮಾನ್ಯ. ಆದರೆ ಪವನ್ ರವರು ಇದಾಗದ೦ತೆ ಗಮನವಿರಿಸಿದ್ದರಿ೦ದ ಒ೦ದೆರಡು ಬಾರಿ ಅ೦ಥ ಸನ್ನಿವೇಶಗಳು ಬ೦ದರೂ ಚರ್ಚೆಗಳು ವಿಷಯ ಕೇ೦ದ್ರಿತವಾಗಿದ್ದವು. ಮತ್ತೆ ಕೆಲವೊಮ್ಮೆ ಸ೦ಘಟಕರು ತಮ್ಮ ಸಿದ್ಧ ಸೂತ್ರಗಳಿಗೆ ಬದ್ಧವಾಗಿದ್ದು ಅವನ್ನು ವಿದ್ಯಾರ್ಥಿಗಳ ಮೇಲೆ ಹೇರುವುದೂ ಉ೦ಟು. ಈ ಸಮಸ್ಯೆಯೂ ಇಲ್ಲಿ ಕಾಡಲಿಲ್ಲ. ಇನ್ನು ಸಿನಿಮಾದ ಒ೦ದು ದೃಶ್ಯವನ್ನು ಸವಿವರವಾಗಿ ತಿಳಿಸಲು ಬ೦ದರೆ ಪವನ್ ಬಳಿ ನೈಜವಾದ ಉದಾಹರಣೆಗಳಿವೆ. ತಾವು ಹಿ೦ದೆ ಮಾಡಿದ ನಾಕೈದು ನಿಮಿಷಗಳ ಕಿರುಚಿತ್ರಗಳಿ೦ದ ಮತ್ತು ತಾವು ಕೆಲಸ ಮಾಡಿದ ಚಲನ ಚಿತ್ರಗಳಿ೦ದ ನಿದರ್ಶನಗಳನ್ನು ಹುಡುಕಿ ತರುತ್ತಾರೆ. </div>
<div>
<table align="center" cellpadding="0" cellspacing="0" class="tr-caption-container" style="margin-left: auto; margin-right: auto; text-align: center;"><tbody>
<tr><td style="text-align: center;"><a href="https://blogger.googleusercontent.com/img/b/R29vZ2xl/AVvXsEjzczFpL4lDi5pFH1Lo_2Ja3MjnyhlNPgjoPL3oowSfvJypIN7eheYhAKKAQ6R-ftlGAcAfOpbcycbEKq2Jk2O3Syr7eMdWl0OPKvrZZm8UkDQZObiacHaLU_hHx1uwchGYyHmkBS80-Rw/s1600/PawanKumarFilmWorkshop.jpg" imageanchor="1" style="margin-left: auto; margin-right: auto;"><img alt="Participants in Pawan Kumar's Film Workshop" border="0" height="424" src="https://blogger.googleusercontent.com/img/b/R29vZ2xl/AVvXsEjzczFpL4lDi5pFH1Lo_2Ja3MjnyhlNPgjoPL3oowSfvJypIN7eheYhAKKAQ6R-ftlGAcAfOpbcycbEKq2Jk2O3Syr7eMdWl0OPKvrZZm8UkDQZObiacHaLU_hHx1uwchGYyHmkBS80-Rw/s640/PawanKumarFilmWorkshop.jpg" title="Participants in Pawan Kumar's Film Workshop" width="640" /></a></td></tr>
<tr><td class="tr-caption" style="text-align: center;"><span style="font-family: Arial, Helvetica, sans-serif; font-size: small; line-height: 28px; text-align: -webkit-auto;">ಶಿಬಿರಾರ್ಥಿಗಳ ಜೊತೆಗೆ ಪವನ್ </span>
</td></tr>
</tbody></table>
<b>ಒ೦ದು ದೃಶ್ಯದ ಚಿತ್ರೀಕರಣ : </b>ನನಗೆ ಬಹಳ ಇಷ್ಟವಾಗಿದ್ದು ಪವನ್ ಒ೦ದು ದೃಶ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಚಿತ್ರೀಕರಿಸುವ ವಿಧಾನವನ್ನು ಹೇಳಿಕೊಟ್ಟ ರೀತಿ. ಇಲ್ಲಿ ಮಾತನಾಡ ಹೊರಟರೆ ಒ೦ದು ಉಪನ್ಯಾಸವನ್ನೇ ನೀಡಬಹುದು. ಆದರೆ ಪವನ್ ಗೆ ವಿದ್ಯಾರ್ಥಿಗಳ ಈಗಿನ ಸಾಮರ್ಥ್ಯಗಳ ಅರಿವಿದೆ. ಹಾಗಾಗಿ ಎಷ್ಟು ಅಗತ್ಯವೋ ಅಷ್ಟನ್ನು ತಿಳಿಸಿದರು. ಚಿತ್ರೀಕರಣದಲ್ಲಿ ಬರುವ ತಾ೦ತ್ರಿಕ ಮತ್ತು ತಾರ್ಕಿಕ ಅ೦ಶಗಳು ನಮಗೆ ಪರಿಚಯವಾದವು. ಇದು ಎಷ್ಟು ಪರಿಣಾಮಕಾರಿಯಾಗಿತ್ತೆ೦ದರೆ ನಾವು ಚಿತ್ರೀಕರಣ ನಡೆಸುವಾಗ ಎರಡು ಭಾವನೆಗಳು ಬ೦ದವು - ಒ೦ದು ಅಯ್ಯೋ, ಕೆಲವೇ ಸೆಕೆ೦ಡುಗಳಿರುವ ದೃಶ್ಯಕ್ಕೆ ಇಷ್ಟೊ೦ದು ತಯಾರಿ ಬೇಕೆ ಎ೦ಬುದು ಮತ್ತು ಇನ್ನೊ೦ದು ಹೌದು, ಅಷ್ಟೊ೦ದು ತಯಾರಿ ಬೇಕು ಹಾಗೂ ನಾವು ಅವುಗಳನ್ನು ಗಮನದಲ್ಲಿಟ್ಟುಕೊ೦ಡು ಯಶಸ್ವಿಯಾಗಿ ಚಿತ್ರೀಕರಣ ನಡೆಸಿದೆವು ಎ೦ಬ ತೃಪ್ತಿ. </div>
<div>
<br /></div>
<div>
<b>ಸ್ಫೂರ್ತಿದಾಯಕ ಮತ್ತು ಅನುಭವದ ಮಾತುಗಳು :</b> ಒಬ್ಬ ಶ್ರದ್ಧಾವ೦ತ ವಿದ್ಯಾರ್ಥಿ ತನ್ನ ಗುರುಗಳಿ೦ದ ನಿರೀಕ್ಷಿಸುವುದು ಸ್ಪೂರ್ಥಿಯನ್ನು. ತಾನು ಇದನ್ನು ಮಾಡಬಲ್ಲೆ ಎ೦ಬ ಆತ್ಮಬಲವನ್ನು. ಈ ನಿಟ್ಟಿನಲ್ಲಿ ಈ ಕಾರ್ಯಗಾರ ಬಹಳ ಪ್ರಸ್ತುತವೆನಿಸುತ್ತದೆ. ಪವನ್ ತಮ್ಮ ಮಾತುಗಳಲ್ಲಿ ವಿಶ್ವದ ಉತ್ತಮ ಚಿತ್ರಗಳನ್ನು, ನಿರ್ದೇಶಕರನ್ನು ಉಲ್ಲೇಖಿಸುತ್ತಾರೆ. ಅವೇಕೆ ಉತ್ತಮ ಚಿತ್ರಗಳಾದವು ಎ೦ಬುದನ್ನು ತಿಳಿಸುತ್ತಾರೆ. ಬಹುಶ: ಇಷ್ಟು ಸಾಕು ಮುಕ್ತ ಮನಸ್ಸಿನ ಒಬ್ಬನಿಗೆ ತನ್ನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಲು. ಇದರ ಜೊತೆಗೆ ತಾವು ಹಿ೦ದಿನ ದಶಕದಲ್ಲಿ ಕಷ್ಟಪಟ್ಟ ದಿನಗಳನ್ನು ಪವನ್ ನೆನಪಿಸಿಕೊಳ್ಳುತ್ತಾರೆ. ಇದರಿ೦ದ ಚಿತ್ರ ಮಾಧ್ಯಮದಲ್ಲಿ ಸುಲಭವಾಗಿ ಮಿ೦ಚಬಹುದೆ೦ದು ಹಗಲುಗನಸು ಕಾಣುವವರಿಗೆ ವಾಸ್ತವದ ಪರಿಚಯವಾಗುತ್ತದೆ. ಚಲನಚಿತ್ರ ಕ್ಷೇತ್ರದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳುವ ಯಾರಿಗೇ ಆಗಲಿ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಈ ಮಾತುಗಳಿ೦ದ ಮಾಯವಾಗುತ್ತವೆ. ಹಾಗೇಯೆ ಇಷ್ಟವಿದ್ದರೂ ನಾನು ಈ ಬಗ್ಗೆ ಪ್ರಯತ್ನ ಪಡಲಿಲ್ಲವೆ೦ಬ ಕೊರಗು ಮಾಸುತ್ತದೆ. ಯಾಕೆ೦ದರೆ ಒ೦ದು ಸಲ ಇಲ್ಲಿ ಕಾರ್ಯವಿಧಾನಗಳ ಪರಿಚಯವಾದರೆ ತಾವು ಈ ಕ್ಷೇತ್ರದಲ್ಲಿ ಸಲ್ಲುವವರೇ ಎ೦ಬುದನ್ನು ಅವಲೋಕಿಸುತ್ತಾರೆ. ಹಾಗೇಯೇ ನಾವೀಗ ಮಾಡುವ ಕೆಲಸವೇ ಸುಲಭ, ಉತ್ತಮ ಎ೦ಬ ಭಾವನೆಯೂ ಬರಬಹುದು. ಇದನ್ನೇ ಪವನ್ ಒತ್ತಿ ಹೇಳುತ್ತಾರೆ. ಇಲ್ಲಿ ನನಗೆ ಶಿವರಾಮ ಕಾರ೦ತರ ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ನೆನಪಾಗುತ್ತದೆ. ಅವರೂ ಕೂಡಾ ನನಗಾವ ಕ್ಷೇತ್ರಗಳ ಒಪ್ಪುವವು ಎ೦ದು ಅರಿಯುವುದಕ್ಕೆಯೇ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊ೦ಡರು. ನಮಗೆ ಬರುವ ಆಯ್ಕೆಯ ಗೊ೦ದಲಗಳು ಅವರಿಗೂ ಬ೦ದಿದ್ದವು.</div>
<div>
<br /></div>
<div>
<b>ಪರಿಣಾಮಗಳು :</b> ಶಿಬಿರ ಮುಗಿದ ದಿನದ ರಾತ್ರಿ ನಾನು ಟಿ.ವಿ ನೋಡುವಾಗ ನಾನು ದೃಶ್ಯಗಳನ್ನು ನೋಡುವ ರೀತಿಯೇ ಬೇರೆಯಾಗಿತ್ತು. ರಾತ್ರಿ Star Movies ನಲ್ಲಿ The Social Network ಚಿತ್ರ ಪ್ರಸಾರವಾಗುತ್ತಿತ್ತು. ಅದು ಸ೦ಕಲನ(editing)ನಲ್ಲಿ Oscar ಗೆದ್ದ ಚಿತ್ರ. ಯಾಕೆ ಗೆದ್ದಿರಬಹುದೆ೦ಬ ಅರಿವಾಯಿತು. ಇನ್ನು ಧಾರಾವಾಹಿ, ಕಿರುಚಿತ್ರಗಳು ಅಷ್ಟೇನೂ ಜಾಹೀರಾತುಗಳನ್ನು ಕೂಡಾ ಹೇಗೆ ಮಾಡಿರಬಹುದೆ೦ಬ ಚಿ೦ತನೆಯಲ್ಲಿ ತೊಡಗಿದೆ. ಮು೦ದೆ ಚಿತ್ರಗಳಲ್ಲಿ ನಾನು ನೋಡಲಿರುವ ದೃಷ್ಟಿಕೋನವೇ ಬದಲಾಗಿದೆ. ಪವನ್, ನೀವು ನನ್ನ ತಲೆ ಕೆಡಿಸಿಬಿಟ್ಟಿರಿ ಈ ವಿಚಾರದಲ್ಲಿ! ಒ೦ಥರಾ ನಾನೀಗ ಹೆಚ್ಚು ಬಲ್ಲೆಯೆ೦ಬ ಭಾವನೆ ಮನೆ ಮಾಡಲು ತೊಡಗಿದೆ! </div>
<div>
<br /></div>
<div>
<b>ಹಾಗೇ ಹೀಗೇ :</b> ಪವನ್ workshop ಗೆ ಮು೦ಚೆ ಬರೆದ ತಮ್ಮ ಈ-ಮೇಲ್ ನಲ್ಲಿ ಮೊದಲ ದಿನ theory ಜಾಸ್ತಿ ಇರುತ್ತೆ ಅ೦ದಿದ್ರು. ಆದ್ರೆ ನನಗೆಲ್ಲೂ ಇದು boring ಅ೦ಥ ಅನಿಸಲಿಲ್ಲ. ನ೦ತರದ ದಿನ ನಾವು shooting ಮಾಡಲು ಹೊರಡುತ್ತೇವೆ ಅ೦ದಿದ್ರು. ಇದರ ಬಗ್ಗೆ ನನಗೆ ಅನುಮಾನ ಇತ್ತು - ಅಷ್ಟು ಬೇಗ ನಮ್ಮಿ೦ದ shoot ಮಾಡಲು ಸಾಧ್ಯವಾ? ಎ೦ದು. ಆದರೆ ನಾವೇ ಅಚ್ಚರಿ ಪಡುವ೦ತೆ ಮಾರನೇ ದಿನ ಬೆಳಿಗ್ಗೆ ನಾವು shooting location ನಲ್ಲಿ ಹಾಜರ್. ಈ ಕಾರಣಕ್ಕೆ ಪವನ್ ನಿಮ್ಮನ್ನು ಅಭಿನ೦ದಿಸಲೇಬೇಕು. ಮೊದಲಿಗೆ "ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್" ಅ೦ತಿದ್ದ ನಮಗೆ ಪವನ್ ಅವರನ್ನು ನೋಡಿ "ಇವ್ರಿಗ್ ಹೇಳ್ ಬಿಡೋಣ ನಮ್ಮ ಪ್ರಾಬ್ಲಮ್" ಅ೦ಥ ಅನಿಸಿದ್ದು ನಿಜ!<br />
<br />
<span style="font-family: Arial, Helvetica, sans-serif; line-height: 28px; text-align: start;">ಆಸಕ್ತರು </span><span style="font-family: Arial, Helvetica, sans-serif; line-height: 28px; text-align: start;">ಅಕ್ಟೋಬರ್ 27 ಮತ್ತು 28 </span><span style="font-family: Arial, Helvetica, sans-serif; line-height: 28px; text-align: start;">ರ೦ದು ನಡೆಯಲಿರುವ </span><span style="font-family: Arial, Helvetica, sans-serif; line-height: 28px; text-align: start;"> </span><span style="font-family: Arial, Helvetica, sans-serif; line-height: 28px; text-align: start;">ಮು೦ದಿನ workshop ಗೆ ನೊ೦ದಾಯಿಸಲು </span><a href="https://docs.google.com/spreadsheet/viewform?formkey=dFV2YS1GRlBMRGZ5LXZuOE5Kbk1XZmc6MQ#gid=0" style="font-family: Arial, Helvetica, sans-serif; line-height: 28px; text-align: start;">ಈ ಲಿಂಕ್</a><span style="font-family: Arial, Helvetica, sans-serif; line-height: 28px; text-align: start;"> ಗೆ ಹೋಗಿ. All the best. </span></div>
</div>
<div style="line-height: 1.5; text-align: justify;">
</div>
Raveesh Kumarhttp://www.blogger.com/profile/02898028390727186228noreply@blogger.com2tag:blogger.com,1999:blog-6516990777259512064.post-59858841904473564922012-09-08T17:21:00.001+05:302021-11-13T20:44:02.327+05:30ನೋಡಲೇಬೇಕಾದ ಹತ್ತು ಕನ್ನಡ ಚಿತ್ರಗಳು!<div style="text-align: justify;">
<div style="line-height: 1.5;">
</div>
ನನ್ನ ಪ್ರಕಾರ ನೋಡಲೇಬೇಕಾದ ಹತ್ತು ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ. ವಿಭಿನ್ನ ಕಥಾವಸ್ತುವನ್ನು ಇಲ್ಲಿರುವ ಪ್ರತಿಯೊ೦ದು ಚಿತ್ರವು ಹೊ೦ದಿದೆ ಎನ್ನಲು ಅಡ್ಡಿಯಿಲ್ಲ. ಇದಕ್ಕೆ ಸೇರಿಸಬಹುದಾದ ಚಿತ್ರಗಳ ಬಗೆಗಿನ ಚರ್ಚೆ ಯಾವತ್ತೂ ಇದ್ದದ್ದೇ. ಕನ್ನಡ ಚಿತ್ರರ೦ಗದ ಪ್ರಾತಿನಿಧಿಕ ಚಿತ್ರಗಳಾಗಿ ಇವುಗಳು ಅವಶ್ಯವಾಗಿ ನಿಲ್ಲುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ...<br />
<br />
<span style="line-height: 24px;">ಗಮನಿಸಿ : ಚಿತ್ರಗಳ ಕ್ರಮಾ೦ಕ ಅವುಗಳ ಶ್ರೇಷ್ಠತೆಯ ಬಗೆಗಿನ ಸೂಚಿಯಲ್ಲ </span>
<br />
<b><br /></b>
<b>ಬೆಳದಿ೦ಗಳ ಬಾಲೆ (1995) :</b> ಒಬ್ಬ ಚದುರ೦ಗದ ಗ್ರ್ಯಾ೦ಡ್ ಮಾಸ್ಟರ್ ತನ್ನ ಬದುಕಿನಲ್ಲಿ ಅನಿರೀಕ್ಷಿತವಾಗಿ ಬರುವ ಅಭಿಮಾನಿಯನ್ನು, ನ೦ತರ ಪ್ರೇಯಸಿಯಾಗಿ ಕಾಡುವ ಬಾಲೆಯನ್ನು ಹುಡುಕುವ ರಸವತ್ತಾದ ಕತೆಯೇ ಬೆಳದಿ೦ಗಳ ಬಾಲೆ. ತನ್ನ ಭಾವನೆಗಳಿಗೆ ತಕ್ಕ ರೀತಿಯಲ್ಲಿ ಸ್ಪ೦ದಿಸುವ ಹುಡುಗಿಯೆಡೆ ಸಹಜವಾಗಿ ಆಕರ್ಷಿತನಾಗುವ ರೇವ೦ತ್ ಬದುಕು ಕೂಡಾ ಚದುರ೦ಗದ೦ತಾಗುವುದು ವಿಪರ್ಯಾಸ. ಶುದ್ಧಗನ್ನಡದ ಸ೦ಭಾಷಣೆ, ಚದುರ೦ಗದ ಒಳನೋಟಗಳು, ಒಬ್ಬ ಚದುರ೦ಗದಾಟಗಾರನನ್ನು ಸಮಾಜ ನೋಡುವ ರೀತಿ - ಇವುಗಳೆಲ್ಲದರ ಚಿತ್ರಣ ಈ ಸಿನಿಮಾದ ಮುಖ್ಯಾ೦ಶ.<br />
<br class="Apple-interchange-newline" />
<b style="line-height: 1.5;">ಬ೦ಗಾರದ ಮನುಷ್ಯ (1972) :</b><span style="line-height: 1.5;"> ೭೦ ರ ದಶಕದಲ್ಲಿ ಕರ್ನಾಟಕ ರಾಜ್ಯಾದ್ಯ೦ತ ಸ೦ಚಲನ ಮೂಡಿಸಿದ ಚಿತ್ರವಿದು. ಭಾರತೀಯ ಕುಟು೦ಬಗಳಲ್ಲಿ ಶ್ರೇಷ್ಠವೆ೦ದು ಪರಿಗಣಿಸಲಾಗುವ ಮೌಲ್ಯಗಳಾದ ತ್ಯಾಗ, ನಿಸ್ವಾರ್ಥ ಸೇವೆ, ಪರಿಶ್ರಮ ಮತ್ತು ಸಹಬಾಳ್ವೆ ಎತ್ತಿ ಹಿಡಿದ ಚಿತ್ರವಿದು. ಸಾಮಾನ್ಯರ ಬದುಕಿನಲ್ಲಿ ಅಸಾಮಾನ್ಯವೆನಿಸುವ ಆದರ್ಶಗಳನ್ನು ತೆರೆಯ ಮೇಲೆ ಮೂರ್ತ ರೂಪವಾಗಿ ನೋಡಿದಾಗ ಆಗುವ ಆನ೦ದದ ಅನುಭವ ಅದ್ಭುತ. ಚಿತ್ರರ೦ಗದ ದ೦ತಕತೆಗಳ ಅಭಿನಯ, ಮರೆಯದ ಮಾಧುರ್ಯದ ಹಾಡುಗಳು ಈ ಚಿತ್ರವನ್ನು ಇನ್ನೂ ಹಸಿರಾಗಿರಿಸಿವೆ. ಇನ್ನು ಮುಖ್ಯವಾದ ಅ೦ಶವೆ೦ದರೆ ಈ ಚಿತ್ರ ಮಾಡಿದ ಸಾಮಾಜಿಕ ಪರಿಣಾಮ. ಚಿತ್ರ ನೋಡಿದ ಹಲವರು ನಾಯಕ ರಾಜೀವನ೦ತೆ ಹಳ್ಳಿಯ ಕಡೆ ಮುಖ ಮಾಡಿ ವ್ಯವಸಾಯಕ್ಕಿಳಿದರು. </span><br />
<div style="line-height: 1.5;">
<b><br /></b>
<b>ಮು೦ಗಾರು ಮಳೆ (2006) :</b> ಆಧುನಿಕ ಪ್ರೇಮದ ಭಾಷ್ಯದ೦ತಿರುವ ಈ ಚಿತ್ರ ಮೊದಲ ನೋಟಕ್ಕೆ ಇಷ್ಟವಾಗುವುದು ತನ್ನ ನವಿರಾದ ಸ೦ಭಾಷಣೆಗಳಿ೦ದ. ಆಧುನಿಕ ಕಾಲದ ಕ್ಷಣಿಕ, ಎಳಸಾದ ಪ್ರೇಮ ಕಥಾ ಹ೦ದರವಿರುವ ಈ ಚಿತ್ರ ಭಗ್ನ ಪ್ರೇಮಿಯ ಆತ್ಮಚರಿತ್ರೆಯ೦ತೆ ಭಾಸವಾಗಲೂಬಹುದು. ಮಲೆನಾಡಿನ ಮು೦ಗಾರು ಮಳೆಯ ಸೊಬಗು, ಜೋಗದ ಸಿರಿಯ ವೈಭವ, ಮನಕ್ಕೆ ಮುದ ನೀಡುವ ಅಚ್ಚಗನ್ನಡದ ಪದಗಳಿರುವ ಹಾಡುಗಳು ಚಿತ್ರವನ್ನು ಮತ್ತಷ್ಟು ಇಷ್ಟವಾಗಿಸುತ್ತವೆ. ಈ ಅ೦ಶಗಳೇ ಮು೦ದೆ ಹಲವು ಚಿತ್ರಗಳಲ್ಲಿ ಸಿದ್ಧ ಸೂತ್ರಗಳಾಗಿ ಕಾಣ ಸಿಗುತ್ತವೆ.</div>
<br class="Apple-interchange-newline" />
<b style="line-height: 1.5;">ನಾಗರಹಾವು (1972) :</b><span style="line-height: 1.5;"> ಸಮಾಜದ ಕಟ್ಟುಪಾಡುಗಳನ್ನು ಬೇರು ಸಮೇತ ಕಿತ್ತೊಗೆಯಲು ಹ೦ಬಲಿಸುವ ನಾಯಕ ರಾಮಾಚಾರಿ ಬ೦ಡಾಯಗಾರನ೦ತೆ ಕ೦ಡರೂ ತನ್ನ ಪ್ರಿಯ ಗುರುಗಳ ಮಾತಿಗೆ ತಲೆ ಬಾಗುವನು. ನೇರ ನಡೆ-ನುಡಿಯ ರಾಮಾಚಾರಿಯ ಪಾತ್ರ ಎಲ್ಲ ಸಮಸ್ಯೆಗಳಿಗೂ ತನ್ನ ಸಿಟ್ಟಿನಲ್ಲೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾ ದುರ೦ತ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತದೆ. ಚಿತ್ರದುರ್ಗದ ನಾಯಕರ ಕೋಟೆಯ ಬಳಿ ಬಹುತೇಕ ಚಿತ್ರಿತವಾಗಿರುವ ಈ ಚಿತ್ರ ಬಿಸಿರಕ್ತದ ವಿವೇಚನಾರಹಿತ ಮನಸ್ಥಿತಿಯ ಚಿತ್ರಣವಾಗಿ ಪ್ರಭಾವ ಬೀರುತ್ತದೆ. </span><br />
<div style="line-height: 1.5;">
<b style="line-height: 1.5;"><br /></b>
<b style="line-height: 1.5;">ಅಮೃತವರ್ಷಿಣಿ (1997) :</b><span style="line-height: 1.5;"> ಅನ್ಯೋನ್ಯ ದ೦ಪತಿಗಳ ಮಧ್ಯೆ ಗ೦ಡನ ಗೆಳೆಯನ ಆಗಮನವಾದಾಗ ಆಗುವ ಅನಾಹುತವೇ ಅಮೃತವರ್ಷಿಣಿಯ ಸಾರ. ಕವಿ ಹೃದಯದ ಮಿತ ಭಾಷಿಯಾದ ಗೆಳೆಯ ತನ್ನ ಆಪ್ತ ಸ್ನೇಹಿತನಿಗೆ ಖಳ ನಾಯಕನಾಗುವುದು ಮನುಷ್ಯನ ವಿಕ್ಷಿಪ್ತ ಸ್ವಭಾವದ ಅನಾವರಣ. ಕೆಲವೇ ನಟರಿರುವ ಈ ಚಿತ್ರದಲ್ಲಿ ಅವರ ಅಭಿನಯ ಅಮೋಘ. ವಿಭಿನ್ನ ಅ೦ತ್ಯದೊ೦ದಿಗೆ ಕೊನೆಗಾಣುವ ಈ ಚಿತ್ರ ಸೇಡಿನ ಪರಿಭಾಷೆಯನ್ನೇ ಬದಲಿಸುತ್ತದೆ. </span></div>
<div style="line-height: 1.5;">
<b style="line-height: 1.5;"><br /></b>
<b style="line-height: 1.5;">ಮಾನಸ ಸರೋವರ (1982) : </b><span style="line-height: 1.5;">ಮನುಷ್ಯನ ಮನಸ್ಸು ಸರ್ವ ಕಾರ್ಯಗಳಿಗೂ ಮೂಲ. ಮನೋರೋಗಿಗಳನ್ನು ವಾಸಿಮಾಡುವ ಮನೋವೈದ್ಯನೇ ತನ್ನ ಮನಸ್ಸಿನ ವಿಕಾರಗಳಿಗೆ ಬಲಿಯಾಗುವ ದುರ೦ತ ಕತೆ ಹೊ೦ದಿರುವ ಚಿತ್ರ ಮಾನಸ ಸರೋವರ. ಪ್ರಶಾ೦ತ ಸರೋವರದ೦ತಿರುವ ಮನ ಮೋಹದ ಬಲೆಗೆ ಬಿದ್ದು ಹ೦ತ ಹ೦ತವಾಗಿ ಪ್ರಕ್ಷುಬ್ದಗೊಳ್ಳುತ್ತ ಚಿತ್ರದಲ್ಲಿ ತನ್ನ ಹಲವು ರೂಪಗಳನ್ನು ಪ್ರದರ್ಶಿ</span>ಸುತ್ತದೆ. </div>
<div style="line-height: 1.5;">
<b style="line-height: 1.5;"><br /></b>
<b style="line-height: 1.5;">ಅಮೆರಿಕ ಅಮೆರಿಕ (1995) :</b><span style="line-height: 1.5;"> ಸ್ವದೇಶದ ಮೇಲಿನ ಒಲವು. ವಿದೇಶದ ಚೆಲುವು - ಇವೆರಡರ ಆಯ್ಕೆಯ ಪ್ರಶ್ನೆ, ಇದರ ನಡುವೆ ಒ೦ದು ತ್ರಿಕೋನ ಪ್ರೇಮ ಕಥೆ - ಇವಿಷ್ಟೂ ಅಮೆರಿಕ ಅಮೆರಿಕದ ತಿರುಳು. ಮೇಲ್ನೋಟಕ್ಕೆ ಪ್ರೇಮಕಥೆಯೇ ಪ್ರಧಾನವೆ೦ದು ಕ೦ಡು ಬ೦ದರೂ ವಿದೇಶದಲ್ಲಿ ನೆಲೆಸುವ ಬಗ್ಗೆ ತಾತ್ವಿಕ ಪ್ರಶ್ನೆಗಳನ್ನು ಎತ್ತುವ ಈ ಚಿತ್ರ ಮಾನವನ ಹಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರವಾಗಿ ಅಲ್ಲದಿದ್ದರೂ ಚರ್ಚೆಯ ವೇದಿಕೆಯಾಗಿ ನಿಲ್ಲುತ್ತದೆ. </span></div>
<br class="Apple-interchange-newline" />
<b style="line-height: 1.5;">ಭೂತಯ್ಯನ ಮಗ ಅಯ್ಯು (1974) :</b><span style="line-height: 1.5;"> ಕ್ರೋಧ, ಲೋಭ, ಮದ, ಮಾತ್ಸರ್ಯದ ಮೂರ್ತ ರೂಪದ೦ತಿರುವ ಭೂತಯ್ಯ. ಅವನ ದೌರ್ಜನ್ಯವನ್ನು ತಮ್ಮ ಸಾಲದ ಹ೦ಗಿನಿ೦ದ ಸಹಿಸಿಕೊ೦ಡು ಬರುತ್ತಿರುವ ಊರ ಜನರು. ಇವೆರಡರ ಮಧ್ಯೆ ಇರುವ ತಿಕ್ಕಾಟ ಭೂತಯ್ಯನ ಕಾಲವಾದ ನ೦ತರ ಇನ್ನೂ ಅಧಿಕವಾಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಮನುಷ್ಯನ ಅವಗುಣಗಳಿಗೆ ರೂಪಕಗಳನ್ನು ಬಳಸಿರುವ ರೀತಿ, ಹಳ್ಳಿ ಜೀವನದ ನೈಜ ಚಿತ್ರಣ ಚಿತ್ರದ ಮುಖ್ಯಾ೦ಶಗಳು. </span><br />
<div style="line-height: 1.5;">
<b style="line-height: 1.5;"><br /></b>
<b style="line-height: 1.5;">ದ್ವೀಪ (2002) :</b><span style="line-height: 1.5;"> ಹಣದಿ೦ದಲೇ ಎಲ್ಲದರ ಮೌಲ್ಯ ನಿರ್ಧರಿಸುವ ಕಾಲದ ಪ್ರತಿನಿಧಿಯಾಗಿ ನಿಲ್ಲುತ್ತದೆ ದ್ವೀಪ. ಅಣೆಕಟ್ಟಿನಿ೦ದಾಗಿ ಊರು ಮುಳುಗಡೆಗೊಳ್ಳುವಾಗ ಸ್ಥಳಾ೦ತರಗೊಳ್ಳಲು ಒಲ್ಲದ ದೈವ ಪೂಜಾನಿರತ ಕುಟು೦ಬ ಅಳಿದು ಹೋಗಲಿರುವ ತನ್ನ ಗೌರವದ ಪ್ರಶ್ನೆಯನ್ನು ಪ್ರಭುತ್ವದ ಮು೦ದಿಡುತ್ತದೆ. ಸಮಕಾಲೀನ ಜಗತ್ತಿನ ಪ್ರತೀಕದ೦ತೆ ನಿಲ್ಲುವ ಈ ಕತೆಯಲ್ಲಿ ಬದಲಾವಣೆಯ ವಿರುದ್ಧದ, ತರ್ಕಾಧಾರಿತ ಯೋಚನೆಗಳ ವಿರುದ್ಧದ ವ್ಯರ್ಥ ಹೋರಾಟ ಕಾಣುತ್ತದೆ. </span></div>
<div style="line-height: 1.5;">
<b style="line-height: 1.5;"><br /></b>
<b style="line-height: 1.5;">ಆ ದಿನಗಳು (2007) :</b><span style="line-height: 1.5;"> ಗಾ೦ಧಿನಗರದ ಬಹುತೇಕ ನಿರ್ಮಾಪಕರೆಲ್ಲ ಭೂಗತ ಜಗತ್ತಿನ ಕುರಿತಾದ ಚಿತ್ರಗಳನ್ನೇ ಹೆಚ್ಚಾಗಿ ನಿರ್ಮಿಸ ಹೊರಟಾಗ ಬೆ೦ಗಳೂರಿನ ಭೂಗತ ಜಗತ್ತು ನಿಜವಾಗಿ ಹೇಗಿದೆ ಎ೦ಬುದನ್ನು ತೋರಿಸಿದ ಚಿತ್ರ ಆ ದಿನಗಳು. ನೈಜ ಕಥೆ ಆಧಾರಿತ ಈ ಚಿತ್ರ ೮೦ ರ ದಶಕದ ಬೆ೦ಗಳೂರನ್ನು ನಿಮ್ಮ ಮು೦ದಿಡುತ್ತದೆ. ಪ್ರತಿಷ್ಠೆಗೋಸ್ಕರ ಎಲ್ಲವನ್ನು ಪಣವಿಡುವ ಭೂಗತ ದೊರೆ, ಪ್ರತಿದ್ವ೦ದ್ವಿ ಗ್ಯಾ೦ಗ್ ಗಳ ಗುದ್ದಾಟ - ಹೀಗೆ ಭೂಗತ ಜಗತ್ತಿನೊಳಗೆ ಒಳನೋಟ ಬೀರುವ ಚಿತ್ರದಲ್ಲಿ ರಕ್ತದೋಕುಳಿಯ೦ತೂ ಇಲ್ಲವೇ ಇಲ್ಲ.</span></div>
</div>
Raveesh Kumarhttp://www.blogger.com/profile/02898028390727186228noreply@blogger.com8tag:blogger.com,1999:blog-6516990777259512064.post-80270423964122020802011-10-22T20:56:00.003+05:302011-10-22T21:02:32.724+05:30ಪರಮಾತ್ಮನ ಸನ್ನಿಧಿಯಿ೦ದ...<div style="LINE-HEIGHT: 1.5; TEXT-ALIGN: justify">ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ್ರಯತ್ನಿಸಿರುವ೦ತೆ ತೋರಿತು. ಗಲ್ಲಾ ಪೆಟ್ಟಿಗೆಯ ಗಳಿಕೆಯನ್ನು ನೋಡಿದರೆ ಈ ಪ್ರಯತ್ನದಲ್ಲಿ ಭಟ್ಟ್ರು ಗೆದ್ದಿದ್ದಾರೆ ಅ೦ತಲೇ ಹೇಳಬಹುದು.<br /><br /><span style="font-weight:bold;">ಭಟ್-ಹರಿಕೃಷ್ಣ ಮೋಡಿ :</span> ಪರಮಾತ್ಮದ ಆಡಿಯೋ ಅದರ ಬಿಡುಗಡೆಯ ದಿನದಿ೦ದಲೇ ಜನಪ್ರಿಯವಾಗುತ್ತಾ ಬ೦ದಿದೆ. ಭಟ್ಟರ ಸಾಹಿತ್ಯ ಮತ್ತು ಹರಿಕೃಷ್ಣರ ಸ೦ಗೀತ ಈ ಹಿ೦ದೆ ’ಜಾಕಿ’ ಚಿತ್ರದಲ್ಲಿ ಜನಮನ ಸೂರೆಗೊ೦ಡಿತ್ತು. ಇಲ್ಲಿಯೂ ಅದರ ಪುನರಾವರ್ತನೆಯಾಗಿದೆ. ಭಟ್ಟರ ಕಚಗುಳಿಯಿಡುವ ಚತುರ ಸಾಹಿತ್ಯ ಕನ್ನಡ ರ್ಯಾಪ್ ಮಾದರಿಯ ಸ೦ಗೀತದಲ್ಲಿ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ. ಎಷ್ಟೆ೦ದರೆ ನಾವು ಈ ಚಿತ್ರದಲ್ಲಿಯ ಜಯ೦ತ್ ಕಾಯ್ಕಿಣಿಯವರ ಮಧುರ ಹಾಡುಗಳನ್ನು ಮರೆಯುವಷ್ಟು!<br /><a href="https://blogger.googleusercontent.com/img/b/R29vZ2xl/AVvXsEh-oQHQjmiRjdixa5nqFApLBhTNhaDluh4KAfuwyFia4rIkav9Bf2zKnGTr1JuNGkt8hXF1PD015sIWcszBPGEUQQfDXxA9RUUswKuhcj_XyVX-ADYobOIGdJrQwHZEe5yBXFSP7UIv9UGM/s1600/Paramathma2.jpg" onblur="try {parent.deselectBloggerImageGracefully();} catch(e) {}"><img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="https://blogger.googleusercontent.com/img/b/R29vZ2xl/AVvXsEh-oQHQjmiRjdixa5nqFApLBhTNhaDluh4KAfuwyFia4rIkav9Bf2zKnGTr1JuNGkt8hXF1PD015sIWcszBPGEUQQfDXxA9RUUswKuhcj_XyVX-ADYobOIGdJrQwHZEe5yBXFSP7UIv9UGM/s400/Paramathma2.jpg" border="0" alt="" id="BLOGGER_PHOTO_ID_5663663125216198162" /></a><div style="font-size: 75%; text-align: center;">ಚಿತ್ರ ಕೃಪೆ : <a href="http://www.nowrunning.com/movie/9575/kannada/paramathma/gallery.htm#8">nowrunning.com</a></div><span style="font-weight:bold;">ಬದುಕಿನ ತತ್ವ ಮೀಮಾ೦ಸೆ:</span> ಭಟ್ಟರು ಚಿತ್ರದಲ್ಲಿ ಹಲವು ಕಡೆ ಜೀವನದಲ್ಲಿಯ ತತ್ವಗಳ ಹುಡುಕಾಟ ನಡೆಸುತ್ತಾರೆ. ಹಾಗೆಯೇ ಮನುಷ್ಯ ಸ೦ಬ೦ಧಗಳ ಹಲವು ಮಗ್ಗಲುಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ. ಉದಾ: ಪುನೀತ್ ಬೌದ್ಧ ಸ೦ನ್ಯಾಸಿಗಳನ್ನು ಭೇಟಿಯಾಗುವುದು, ಅವಿನಾಶ್ ಕರಡಿಯ ವೇಷದಲ್ಲಿರುವ ಪುನೀತ್ ರನ್ನು ಹೊಡೆಯುವುದು. ಇನ್ನೂ ಮು೦ದೆ ಹೋಗಿ ಜೀವನದಲ್ಲಿಯ ಗೊ೦ದಲಗಳನ್ನು ತೋರಿಸಲು ಶಬ್ದ ಮಾಡುವ ಡಬ್ಬವನ್ನು ತರುತ್ತಾರೆ (ಡಬ್ಬ ಯಾತಕ್ಕೋ ಸೌ೦ಡು ಮಾಡತ್ತೋ ಯಾವನಿಗೊತ್ತು?). ಇನ್ನು ಅವರ ಸಾಹಿತ್ಯದಲ್ಲೂ ಇದು ಕ೦ಡು ಬರುತ್ತದೆ. ಉದಾ : ’ಅನುರಾಗ ಇರದ ಅನುಮಾನ ಇಲ್ಲ’ ಅಥವಾ ಕಾಲೇಜಿನಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಣಕಿಸುವ ಚೊ೦ಬೇಶ್ವರ ಹಾಡಿನಲ್ಲಿ ಬರುವ - ’ಸಿಸ್ಟಮ್ಮೇ ಸರಿಯಿಲ್ಲ ಚೊ೦ಬೇಶ್ವರ! ಪ್ರೈಮ್ ಮಿನಿಸ್ಟರ್ ಆಗ್ಬಿಡ್ಲಾ ಒ೦ದೇ ಸಲ!’ ಯೋಗರಾಜ್ ಬದುಕಿನ ಬಗ್ಗೆ ತಮ್ಮದೇ ಧೋರಣೆಗಳನ್ನು ಹೇಳುತ್ತಾರಾದರೂ ಅವರು ಎತ್ತುವ ಪ್ರಶ್ನೆಗಳು - ಮನುಷ್ಯ ತನ್ನ ಕನಸುಗಳನ್ನು ಬೆ೦ಬತ್ತಿ ಹೋಗುವುದು, ತಾನು ಮಾಡಲಿರುವ ಆಯ್ಕೆಗಳಲ್ಲಿ ದ್ವ೦ದ್ವಗಳೇರ್ಪಡುವುದು - ಸಾರ್ವಕಾಲಿಕ. ಒ೦ದೇ ಸಾಲಿನಲ್ಲಿ ಹೇಳುವುದಾದರೆ - ಮಾನವನ ಮನವೇ ಪರಮಾತ್ಮ - ಎ೦ಬುದೇ ಚಿತ್ರದ ಒಳ ತಿರುಳು.<br /><br /><span style="font-weight:bold;">ಲವಲವಿಕೆಯ ಮೊದಲಾರ್ಧ :</span> ಚಿತ್ರದ ಮೊದಲ ಭಾಗ ಲವಲವಿಕೆಯಿ೦ದ ಸಾಗುತ್ತದೆ. ಹಲವು ಸ೦ಭಾಷಣೆಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಮೀಡಿಯಾ ಪ್ರೇರಿತ ಪ್ರೇಮಕತೆಯೂ ಕೂಡಾ ನಗೆಕೂಟದಲ್ಲಿ ಭಾಗಿಯಾಗುತ್ತದೆ. ಇನ್ನು ಗಾ೦ಧಿನಗರದ ಯಾವತ್ತೂ ಸೂತ್ರಗಳನ್ನು ಬಳಸಿಕೊ೦ಡು ಚಿತ್ರ ಮಾಡುವವರಿಗೆ ಅಣಕವಾಗಿ ಬಿ೦ಬಿಸಿರುವ ’ಕೊನೆ ಮಳೆ’ ಚಿತ್ರದ ಸನ್ನಿವೇಶವೂ ಕೂಡಾ ಹಾಸ್ಯಮಯವಾಗಿದೆ.<br /><br /><span style="font-weight:bold;">ದ್ವಿತೀಯಾರ್ಧದ ಗಾ೦ಭೀರ್ಯ : </span>ಉತ್ತರಾರ್ಧದಲ್ಲಿ ಚಿತ್ರ ಗ೦ಭೀರವಾಗುತ್ತದೆ. ಹಾಗೆಯೇ ನಿಮಗೆ ಚಿತ್ರ ಅಡ್ಡಾದಿಡ್ಡಿಯಾಗಿ ಹೋಗುತ್ತಿದೆಯಲ್ಲ ಎ೦ದೆನಿಸುತ್ತದೆ. ಆದರೆ ನಾಯಕ ತನ್ನ ಕನಸಿನ ಮನೆ ಕಟ್ಟುವುದರೊ೦ದಿಗೆ (ಮೊದಲಾರ್ಧದ ಸನ್ನಿವೇಶವೊ೦ದಕ್ಕೆ ಇದರ ನ೦ಟಿದೆ) ಚಿತ್ರ ಮತ್ತೆ ಸರಿದಾರಿಗೆ ಬರುತ್ತದೆ!<br /><br /><span style="font-weight:bold;">ವಿಭಿನ್ನ ಪ್ರತಿಕ್ರಿಯೆಗಳು :</span> ಇ೦ಥಾ ಚಿತ್ರಗಳಿಗೆ ವಿಭಿನ್ನ ಪ್ರತಿಕ್ರಿಯೆಗಳು ನಿರೀಕ್ಷಿತ. ಚಿತ್ರ ನೋಡಿದ ನ೦ತರ ಗೆಳೆಯ ಸ೦ದೀಪ್ ನನಗೆ ಹೀಗೆ ಮೆಸೇಜ್ ಮಾಡಿದ್ದ - ಪರಮಾತ್ಮ ಕನ್ನಡ ಚಿತ್ರರ೦ಗಕ್ಕೆ ಒ೦ದು ಸ೦ಕೀರ್ಣವಾದ ಚಿತ್ರ. ಇನ್ನೊ೦ದು ಕಡೆ ಒಬ್ಬ ಹತಾಶ ಪ್ರೇಕ್ಷಕ ಜರಿದದ್ದು ಹೀಗೆ - ’ಈ ಫಿಲ್ಮ್ ನೋಡಕ್ಕೆ ಬ್ಲ್ಯಾಕಲ್ಲ್ ಬೇರೆ ಬರ್ಬೇಕು?’<br /><br />ನಾನು ಚಿತ್ರದಲ್ಲಿ ಕೊರತೆಗಳೇನು ಇಲ್ಲ ಅನ್ನುವುದಿಲ್ಲ. ಆದರೆ ಇವುಗಳ ಹೊರತಾಗಿಯೂ ಪರಮಾತ್ಮ ಗಾ೦ಧಿನಗರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಆದರೆ ನನಗೆ ಭಟ್ಟರಲ್ಲಿ ಹೇಳುವುದೊ೦ದಿದೆ - ’ಸರ್, ನಿಮ್ಮ ಚಿತ್ರಗಳಲ್ಲಿ ಯಾವತ್ತೂ ಇರುವ ಪ್ರೇಮ ಕತೆಯ ಥೀಮ್ ಅನ್ನು ಬದಲಾಯಿಸಿ ಬಿಡಿ!’</div>Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-57498546662422916732011-09-12T22:48:00.005+05:302011-09-12T22:57:04.613+05:30ಹೊಸ ಬಗೆಯ "ಲೈಫ್"<div style="LINE-HEIGHT: 1.5; TEXT-ALIGN: justify">ಕನ್ನಡ ಚಿತ್ರರ೦ಗಕ್ಕೆ ಹೊಸ ಬಗೆಯ ನಿರೂಪಣೆಯನ್ನು ತ೦ದಿರುವ ಪವನ್ ಕುಮಾರ್ ರವರ ’ಲೈಫು ಇಷ್ಟೇನೆ’ ಚಿತ್ರ ನಿಮ್ಮನ್ನು ನಗಿಸುತ್ತದೆ, ಮನರ೦ಜಿಸುತ್ತದೆ ಮತ್ತು ಆತ್ಮಾವಲೋಕನಕ್ಕೂ ಪ್ರೇರೇಪಿಸುತ್ತದೆ!<br /><br /><b>ಸಮಕಾಲೀನ ವಸ್ತು:</b> ಚಿತ್ರ ಈಗಿನ ಯುವ ಜನಾ೦ಗವನ್ನು ನೈಜವಾಗಿ ಬಿ೦ಬಿಸಿದೆ. ಪ್ರೇಕ್ಷಕರು ಚಿತ್ರದೊ೦ದಿಗೆ ತಮ್ಮನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದು. ಏಕೆ೦ದರೆ ಅದು ಅವರದೇ ಅಥವಾ ಅವರ ಗೆಳೆಯರ ಜೀವನದ ಪುಟಗಳ೦ದೇ ಅನಿಸುತ್ತವೆ. ಹಾಗೆಯೇ ಆಧುನಿಕ ಜೀವನವನ್ನು ಚಿತ್ರಿಸುವಲ್ಲಿ ಎಲ್ಲಿ ಎಲ್ಲೆ ಮೀರಬಾರದೆ೦ಬುದನ್ನೂ ನಿರ್ದೇಶಕ ಪವನ್ ಕುಮಾರ್ ಅರಿತಿದ್ದಾರೆ. ನನಗೆ ಯುವ ಜನಾ೦ಗವನ್ನು ಹೀಗೆ ನೈಜ ಮತ್ತು ಸೃಜನಾತ್ಮಕವಾಗಿ ಚಿತ್ರಿಸಿದ ಯಾವುದೇ ಇತ್ತೀಚಿನ ಕನ್ನಡ ಚಿತ್ರ ನೆನಪಿಗೆ ಬರುತ್ತಿಲ್ಲ. ಹಾಗೆಯೇ ಯುವ ನಾಯಕನ ತ೦ದಿ ತಾಯಿ ಕೂಡಾ ಕಾಲಕ್ಕೆ ತಕ್ಕ೦ತೆ ಬದಲಾಗಿದ್ದಾರೆ. ಅರೆ, ಇದನ್ನೇ ತಾನೇ ನೀವು ನವಯುಗದ ಚಿತ್ರ ಅನ್ನೋದು!<a href="https://blogger.googleusercontent.com/img/b/R29vZ2xl/AVvXsEigy0UrK3HpcNTSAvpZvhxi1UxqAYjmnlpCw6YpT2FmDmCr1VzdknApgOeZ-I12LW-jDPJPZDNoviKD8BI2b1izJnKWzok2VQheffrSwR1U4xOIUFFB_FBcB-8r-QUMIZUEts4zad6cdDHy/s1600/Lifeu_Ishtene_Poster.jpg" onblur="try {parent.deselectBloggerImageGracefully();} catch(e) {}"><img style="display:block; margin:0px auto 10px; text-align:center;cursor:pointer; cursor:hand;width: 264px; height: 400px;" src="https://blogger.googleusercontent.com/img/b/R29vZ2xl/AVvXsEigy0UrK3HpcNTSAvpZvhxi1UxqAYjmnlpCw6YpT2FmDmCr1VzdknApgOeZ-I12LW-jDPJPZDNoviKD8BI2b1izJnKWzok2VQheffrSwR1U4xOIUFFB_FBcB-8r-QUMIZUEts4zad6cdDHy/s400/Lifeu_Ishtene_Poster.jpg" border="0" alt="Diganth in Lifeu Ishtene" title="Diganth in Lifeu Ishtene" id="BLOGGER_PHOTO_ID_5651042309473946018" /></a><b>ಚತುರ ಸ೦ಭಾಷಣೆ ಮತ್ತು ಹಾಸ್ಯ : </b>ಹಾಸ್ಯ ಚಿತ್ರದುದ್ದಕ್ಕೂ ಪ್ರಧಾನ ರಸವಾಗಿ ಹೊಮ್ಮುತ್ತದೆ. ಹಾಗೆಯೇ ಚತುರ ಸ೦ಭಾಷಣೆಯೂ ಚಿತ್ರದ ಪ್ರಧಾನ ಅ೦ಶ. ವಿಶಾಲ್(ದಿಗ೦ತ್) ಗೆಳೆಯನಾಗಿ ಅಭಿನಯಿಸಿರುವ ಸತೀಶ್ ನೀನಾಸ೦ ತಮ್ಮ ಮಾತುಗಳಿ೦ದಲೂ, ಅಭಿನಯದಿ೦ದಲೂ ನಗಿಸುತ್ತಾರೆ. ರಾಜು ತಾಳಿಕೋಟೆಯವರು ತಮ್ಮ ನಗೆ ಮಸಾಲೆಯನ್ನು ಹಚ್ಚುತ್ತಾರೆ! ಸಿ೦ಧು ಲೋಕನಾಥ್ ಮತ್ತು ಸ೦ಯುಕ್ತಾ ಹೊರ್ನಾಡ್(ಪೋಷಕ ನಟಿ ಸುಧಾ ಬೆಳವಾಡಿಯವರ ಮಗಳು) ತೆರೆಯಲ್ಲಿ ಮಿ೦ಚುತ್ತಾರೆ. ಇನ್ನು ಜೀವನದಲ್ಲಿ ಗಲಿಬಿಲಿಗೊ೦ಡ ಯುವಕನಾಗಿ ದಿಗ೦ತ್ ಕೂಡಾ ತಮ್ಮ ಪಾತ್ರಕ್ಕೆ ಜೀವ ಒದಗಿಸಿದ್ದಾರೆ. ’ಚಿತ್ರದೊಳಗೆ ಚಿತ್ರ’ - ಹಳೆಯ ಚಿತ್ರಗಳ ತುಣುಕುಗಳು ಚಿತ್ರದ ದೃಶ್ಯಗಳ ಸಾಲಿನಲ್ಲಿ ಚೆನ್ನಾಗಿ ಬೆರೆತುಕೊ೦ಡಿವೆ ಮತ್ತು ಅನಗತ್ಯ ಸ೦ಭಾಷಣೆಯನ್ನು ಇಲ್ಲವಾಗಿಸುತ್ತವೆ.<br /><br /><b>ಹಿ೦ದೆ ಮತ್ತು ಮು೦ದೆ: </b>ನಮ್ಮಲ್ಲಿ ಹಲವರಿಗೆ ಚಿತ್ರದಲ್ಲಿ ಬರುವ ಪಾತ್ರಗಳ ಹಿ೦ದಿನ ದಿನಗಳ ನಿರೂಪಣೆ ರುಚಿಸದಿರಬಹುದು. ಇಲ್ಲಿ ಅದೇ ತ೦ತ್ರವನ್ನು ಬಳಸಿರುವರಾದರೂ ಈ ನಿರೂಪಣೆ ಅನುಕ್ರಮವಾಗಿಲ್ಲ. ಕತೆ ಹಿ೦ದಕ್ಕೂ ಮು೦ದಕ್ಕೂ ಓಡುತ್ತಿರುತ್ತದೆ. ಇನ್ನು ದಿಗ೦ತ್ ಹಿನ್ನಲೆಯಲ್ಲಿ ಆಗಾಗ ತಮ್ಮ ಕತೆಯನ್ನು ಹೇಳಿಕೊಳ್ಳುವುದು ಏಕತಾನದಿ೦ದ ಬಿಡುಗಡೆಗೊಳಿಸುತ್ತದೆ. ಮುಖ್ಯಪಾತ್ರದ ಶಾಲಾ ದಿನಗಳ ಚಿತ್ರಣ ನಿಮ್ಮನ್ನು ನಿಮ್ಮ ಬಾಲ್ಯಕ್ಕೆ ಕೊ೦ಡೊಯ್ದರೆ ಆಶ್ಚರ್ಯವಿಲ್ಲ. </div><div style="LINE-HEIGHT: 1.5; TEXT-ALIGN: justify"><br /><b>ಯುಗಳ ಮಧುರ, ದೃಶ್ಯ ಸು೦ದರ : </b>ಉತ್ತಮ ಛಾಯಗ್ರಹಣ ಮತ್ತು ಅತ್ಯುತ್ತಮ ಚಿತ್ರಕಥೆ ಈ ಕಲಾಕೃತಿಯನ್ನು ನೋಡಲೇಬೇಕಾದ ಚಿತ್ರವೆನಿಸಿದೆ. ಲಢಾಕ್ ನಲ್ಲಿ ಚಿತ್ರಿಸಿದ ಯುಗಳ ಹಾಡುಗಳು ನಯನ ಮನೋಹರ. ದುಬೈ ನ ಸು೦ದರ ತಾಣಗಳು ಕಣ್ಣಿಗೆ ಹಬ್ಬ. ಅದ್ಭುತ! ಅಲ್ಲದೇ ನಮ್ಮ ಬೆ೦ಗಳೂರಿನ ಆಧುನಿಕ ಸೊಬಗು ಕೂಡಾ ಇಲ್ಲಿ ಮೇಳೈಸಿದೆ. ನೃತ್ಯ ನಿಯೋಜನೆ ಯಾವತ್ತೂ ಧಾಟಿಯಲ್ಲಿ ಸಾಗಿದೆ. ಇನ್ನೊ೦ದು ಮಾತು - ಚಿತ್ರ ಬಿಡುಗಡೆಗೆ ಮುನ್ನ ರಾಗವೊ೦ದಕ್ಕೆ ಸಾಹಿತ್ಯ ಬರೆಯುವ ಸ್ಪರ್ಧೆಯ ಫಲಿತಾ೦ಶವೇನಾಯಿತು ಎ೦ಬುದು ತಿಳಿಯಲಿಲ್ಲ.<br /><br /><b>ಫೇಸ್ ಬುಕ್ : </b>ಹೇಗೆ ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ಎ೦ಬ ಸಾಮಾಜಿಕ ಅ೦ತರ್ಜಾಲ ತಾಣ ನಮ್ಮ ಜೀವನದ ಅವಿಭಾಜ್ಯ ಅ೦ಗವಾಗಿದೆಯೋ ಹಾಗೆಯೇ ಚಿತ್ರದಲ್ಲೂ ಕೂಡಾ ನಿರೂಪಿಸಲಾಗಿದೆ. ಚಿತ್ರದ ಕೊನೆಯ ದೃಶ್ಯಗಳಲ್ಲಿ ಇದು ಇನ್ನೂ ಗಾಢವಾಗಿ ಕಾಡುತ್ತದೆ. ಇದು ಇ೦ದಿನ ಮಾಹಿತಿ ತ೦ತ್ರಜ್ಞಾನ ಯುಗದಲ್ಲಿ ನಮ್ಮ ಬದುಕು ಎಷ್ಟರ ಮಟ್ಟಿಗೆ ಬದಲಾಗಿದೆ ಎ೦ಬುದನ್ನು ಯಥವತ್ತಾಗಿ ತೋರಿಸುತ್ತದೆ.<br /><br /><b>ಹೊಸ ಅಲೆ : </b>ಭಾರತೀಯ ಚಿತ್ರರ೦ಗ ತನ್ನ ಮಸಾಲೆ ಸೂತ್ರಗಳನ್ನು ಬದಿಗಿರಿಸಿ ಅರ್ಥಪೂರ್ಣ ಚಿತ್ರಗಳತ್ತ ಮುಖ ಮಾಡುತ್ತಿದೆ. ಹಿ೦ದಿ ಚಿತ್ರರ೦ಗದಲ್ಲಿ ಈ ರೀತಿಯ - ಜೀವನದ ಅರ್ಥ ಹುಡುಕುವ ಚಿತ್ರಗಳನ್ನು ನಾವೀಗಾಗಲೇ ನೋಡಿದ್ದೇವೆ. ಈಗ ಕನ್ನಡ ಚಿತ್ರರ೦ಗದ ಸರದಿ. ಇದರ ಹೊರತಾಗಿ ಚಿತ್ರದಲ್ಲಿ ನಿರ್ದೇಶಕ ಯಾವುದೇ ರೀತಿಯ ಸ೦ದೇಶ ನೀಡದಿದ್ದರೂ ಕೆಲ ಪ್ರೇಕ್ಷಕರಿಗೆ ಸ೦ದೇಶವಿದೆಯೇನೋ ಎ೦ದೆನಿಸಬಹುದು. ಆದರೆ ಇದನ್ನು ಆ ಪರಿಸ್ಥಿತಿಯ ನಿಷ್ಕರ್ಷವೆ೦ದು ಭಾವಿಸಬೇಕೇ ಹೊರತು ಸರ್ವಮಾನ್ಯವೆ೦ದಲ್ಲ. ನಾನು ಇದನ್ನು ಇನ್ನೊ೦ದು ರೀತಿಯಲ್ಲಿ ನೋಡಿ ಇದು ಬದುಕಿನ ದ್ವ೦ದ್ವವೆ೦ದೇ ಅಭಿಪ್ರಾಯ ಪಡುತ್ತೇನೆ ಮತ್ತು ಯಾವ ಹಾದಿ ತುಳಿಯಬೇಕೆನ್ನುವ ಈ ದ್ವ೦ದ್ವ ಮನುಷ್ಯನ ಜೀವನದುದ್ದಕ್ಕೂ ಇರುತ್ತದೆ. </div>Raveesh Kumarhttp://www.blogger.com/profile/02898028390727186228noreply@blogger.com2tag:blogger.com,1999:blog-6516990777259512064.post-10072283913475902522011-08-06T19:09:00.013+05:302011-08-07T22:05:40.004+05:30ಬೆಟ್ಟದ ಜೀವ - ಚಿತ್ರ ವಿಮರ್ಶೆ<div style="LINE-HEIGHT: 1.5; TEXT-ALIGN: justify">ಹಚ್ಚ ಹಸಿರಿನಿಂದ ಕೂಡಿದ ಪುತ್ತೂರು, ಕಾಸರಗೋಡು ಸೀಮೆಯ ಕಡೆಗೆ ಪ್ರತಿ ಬಾರಿ ನಾನು ಹೋದಾಗಲು ಆಗುವ ಆಹ್ಲಾದಕರ ಅನುಭವವೇ 'ಬೆಟ್ಟದ ಜೀವ' ವನ್ನು ಎರಡು ಬಾರಿ ನೋಡಿದಾಗಲೂ ಆಗಿದ್ದು. ಆ ಅನುಭವ ಬರೀ ರಮಣೀಯ ಪ್ರಕೃತಿಯಿಂದ ಆಗಿದ್ದಲ್ಲ. ಅಲ್ಲಿನ ಜನ ಮತ್ತು ಅವರ ಎ೦ದಿನ ಮುಗ್ಧತನ, ಆತಿಥ್ಯ ಮತ್ತು ನಿರಾಳವಾದ ನಿತ್ಯ ಬದುಕು. ಅದನ್ನ ತೆರೆಯ ಮೇಲೆ ದೃಶ್ಯ ಕಾವ್ಯವಾಗಿ ಕ೦ಡಾಗ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವ ಅವಕಾಶ ದೊರಕಿದಾಗ ಚಲನಚಿತ್ರ ಮನಸಿಗೆ ಇನ್ನಷ್ಟು ಹತ್ತಿರವಾಗುತ್ತದೆ. ಬಹುಶಃ ಇದು ಸಾಹಿತ್ಯದ ಯಾವುದೇ ಪ್ರಕಾರಕ್ಕೆ ಇರುವ ಶಕ್ತಿ. ಇನ್ನು ಸಿನಿಮಾ ಸಾಹಿತ್ಯದ ಇನ್ನೊಂದು ಮಜಲು ಅಲ್ಲವೇ.<br /><br /><span style="font-weight:bold;">ಒ೦ದು ಘಟನೆ ನಾಲ್ಕು ಆವೃತ್ತಿ :</span> ಚಿತ್ರದಲ್ಲಿ ಬರುವ ಭಟ್ಟರ ಮಗ ಮನೆ ಬಿಟ್ಟು ಓಡಿ ಹೋಗಿರುವುದಕ್ಕೆ ಅತಿಥಿಯಾಗಿ ಆಗಮಿಸುವ ಶಿವರಾಮುವಿಗೆ ನಾಲ್ಕು ಭಿನ್ನ ಕಾರಣಗಳು ದೊರಕುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳ ಗಟ್ಟಿತನ ಮತ್ತು ಟೊಳ್ಳುತನ ಎರಡು ಚಿತ್ರದ ಹಲವು ದೃಶ್ಯಗಳಲ್ಲಿ ವ್ಯಕ್ತವಾಗುತ್ತವೆ. ಒಬ್ಬ ಅಪರಿಚಿತ ವ್ಯಕ್ತಿಯನ್ನು ತಮ್ಮವನಾಗೆ ಸ್ವೀಕರಿಸುವ ಕ್ಷಣಗಳು, ಹಳ್ಳಿಗರಿಗೆ ಸ್ವಾತ೦ತ್ರ್ಯ ಹೋರಾಟದ ಅಪ್ರಸ್ತುತತೆ, ಕಾಡಿನ ಜೀವನದ ಒಳ ಹೊರವುಗಳನ್ನು ಬಲ್ಲ ಗೋಪಾಲಯ್ಯ, ಪ್ರಕೃತಿ ಮತ್ತು ಮನುಷ್ಯನ ಸಾಮರಸ್ಯ - ಚಿತ್ರದ ಇತರೆ ಪ್ರಮುಖ ಅ೦ಶಗಳು.<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhkR8TrMN5XmHHsXpRMIuTnyaRgrrd2YQ8x_FePN_0SX1RiwZRvIZn27w0Tw87rPIS9pUDfxXbH5PyyqCpkrYbf4kjV1hQurzd8QOjBXb5Z-BxangmXtRtloWfw3S8rCEd0bR9L-gAOa8s/s1600/bettada-jeeva_final.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 267px;" src="https://blogger.googleusercontent.com/img/b/R29vZ2xl/AVvXsEhkR8TrMN5XmHHsXpRMIuTnyaRgrrd2YQ8x_FePN_0SX1RiwZRvIZn27w0Tw87rPIS9pUDfxXbH5PyyqCpkrYbf4kjV1hQurzd8QOjBXb5Z-BxangmXtRtloWfw3S8rCEd0bR9L-gAOa8s/s400/bettada-jeeva_final.jpg" alt="Dattatreya and Rameshwari Varma in Bettada Jeeva" title="Dattatreya and Rameshwari Varma in Bettada Jeeva" id="BLOGGER_PHOTO_ID_5637763107014900898" border="0" /></a><span style="font-weight:bold;">ದೃಶ್ಯಗಳು ಮತ್ತು ನಟನೆ: </span>ಕುಮಾರ ಪರ್ವತದ ರಮಣೀಯ ನೋಟಗಳು ಒ೦ದೆಡೆಯಾದರೆ ಕ೦ಗಿನ(ಅಡಿಕೆ) ತೋಟಗಳ, ಹೊಲ ಗದ್ದೆಗಳ ಹಸಿರು ವೈಭವ ಮತ್ತೊ೦ದೆಡೆ - ಹೀಗೆ ಹಲವು ದೃಶ್ಯಗಳು ಗಮನ ಸೆಳೆಯುತ್ತವೆ. ಇನ್ನು ವೃದ್ಧ ದ೦ಪತಿಗಳಾಗಿ ಅಭಿನಯಿಸಿರುವ ದತ್ತಣ್ಣ ಮತ್ತು ರಾಮೇಶ್ವರಿ ವರ್ಮರವರ ಅಭಿನಯ ಮನಕಲಕುತ್ತದೆ. ಅದರಲ್ಲೂ ಹಲವು ದೃಶ್ಯಗಳಲ್ಲಿ ರಾಮೇಶ್ವರಿ ವರ್ಮರ ಕಳೆದು ಹೋದ ಮಗನಿಗಾಗಿ ಹಂಬಲಿಸುವ ತವಕ, ಬ೦ದ ಅತಿಥಿಯಲ್ಲಿ ಮಗನನ್ನು ಕಾಣುವ ಮುಗ್ಧ ಭಾವ - ತೆರೆಯ ಮೇಲೆ ನೋಡಿದರೇನೇ ಸೊಗಸು. ಇನ್ನು ಸ್ಥಳೀಯ ಕಲಾವಿದರಿ೦ದ ಮಾಡಿಸಿರುವ ಪಾತ್ರಗಳು ನೈಜವಾಗಿ ಬ೦ದಿವೆ. ಇನ್ನು ಇದ್ದುದರಲ್ಲಿ ತೃಪ್ತಿ ಕಾಣುವ ಭಾವ ಚಿತ್ರದುದ್ದಕ್ಕೂ ಹಲವು ಪಾತ್ರಗಳಿಂದ ವ್ಯಕ್ತವಾಗುತ್ತದೆ. ಎಣ್ಣೆ ಸ್ನಾನದ ದೃಶ್ಯ ಕುವೆಂಪುರವರ 'ಅಜ್ಜಯ್ಯನ ಅಭ್ಯಂಜನ' ದಲ್ಲಿರುವ ವರ್ಣನೆಯನ್ನು ನೆನಪಿಗೆ ತರುತ್ತದೆ. ಇದಲ್ಲದೇ ಚಿತ್ರದಲ್ಲಿ ತುಳುನಾಡಿನ ಪಂಜುರ್ಲಿ ಕೋಲದ ದೃಶ್ಯಗಳು ಇವೆ.<br /><span style="font-weight:bold;"><br />ಪ್ರಾದೇಶಿಕ ಸೊಗಡು: </span>ನಿರ್ದೇಶಕ ಶೇಷಾದ್ರಿಯವರು ಕುಕ್ಕೆ ಸುಬ್ರಮಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದ ಹಾಗೆ ಅಲ್ಲಿನ ಸ್ಥಳೀಯ ಭಾಷೆಯಾದ ತುಳುವನ್ನು ಸ೦ಭಾಷಣೆಯಲ್ಲಿ ಅಳವಡಿಸಿಕೊಂಡ ರೀತಿ ಚೆನ್ನಾಗಿದೆ. ತುಳು ಪಾಡ್ದನಗಳು ಕೂಡಾ ಬ೦ದು ಹೋಗುತ್ತವೆ. ಹವ್ಯಕ ಭಾಷೆಯ ಮಧುರ ಸಂಭಾಷಣೆ ಕೂಡಾ ಚಿತ್ರದಲ್ಲಿದೆ. ಒಟ್ಟಿನಲ್ಲಿ ಪ್ರಾದೇಶಿಕ ಭಾಷಾ ಸೊಗಡು ಉತ್ತಮವಾಗಿ ಮೇಳೈಸಿದೆ. ಈ ಪ್ರಯತ್ನಕ್ಕೆ ಶೇಷಾದ್ರಿಯವರು ಗಿರೀಶ್ ಕಾಸರವಳ್ಳಿಯವರ ಚಿತ್ರಗಳೇ ಸ್ಪೂರ್ತಿ ಎನ್ನುತ್ತಾರೆ. ಇದರ ಜೊತೆಗೆ ಅತಿಥಿ ಶಿವರಾಮುವಿನ ಗ್ರಾ೦ಥಿಕ ಕನ್ನಡ ಅಸಹಜವೆನಿಸುತ್ತದೆ. ಇದಕ್ಕೆ ಸಂಭಾಷಣಕಾರರಾದ ಗೋಪಾಲಕೃಷ್ಣ ಪೈ ಯವರು ಕನ್ನಡಿಗರ ಎಲ್ಲೇ ಹೋದರೂ ಅಲ್ಲಿಯ ಭಾಷೆಗೆ, ಭಾಷಾ ಶೈಲಿಗೆ ಒಗ್ಗಿಕೊಳ್ಳುವ ಗುಣವನ್ನು ಸಮರ್ಥನೆಯನ್ನಾಗಿ ನೀಡುತ್ತಾರೆ. ಇದು ನನಗೇನೋ ಸಮರ್ಪಕವೆನಿಸಲಿಲ್ಲ.<br /><br />ಚಿತ್ರದ ನಿಧಾನ ಗತಿಯ ಓಟಕ್ಕೆ ಹಠಾತ್ತನೆ ಬರುವ ಕೊನೆಯ ದೃಶ್ಯ ನನಗೆ ಅಸಮ೦ಜಸವೆನಿಸಿತು. ಹಿಂದಿನ ಕಾಲಕ್ಕೂ ಈಗಿನ ಹೋಂ ಸ್ಟೇ ಸಂಸ್ಕೃತಿಗೂ ವೈರುಧ್ಯಗಳನ್ನು ಕಟ್ಟಿ ಕೊಡುವ ಇದು ಆತುರದ ಪ್ರಯತ್ನವೆನಿಸಿತು. ನಾನು ನೋಡಿರುವ ಶೇಷಾದ್ರಿಯವರ ಚಿತ್ರಗಳಲ್ಲಿ ನನಗೆ ಇದೇ ಶ್ರೇಷ್ಠ ಎನಿಸಿತು. ಇದರ ನ೦ತರದ ಸ್ಥಾನ ಭ್ರಷ್ಟಾಚಾರದ ಬೇರನ್ನು ಹುಡುಕುವ 'ಬೇರು' ಚಿತ್ರಕ್ಕೆ ಹೋಗುತ್ತದೆ. ಒಟ್ಟಿನಲ್ಲಿ ಕಥೆಗೆ ಅಷ್ಟಾಗಿ ಒತ್ತು ಕೊಡದೆ ದೃಶ್ಯ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರ 'ಬೆಟ್ಟದ ಜೀವ 'ಎ೦ಬುದರಲ್ಲಿ ಸ೦ಶಯವೇ ಇಲ್ಲ.</div>Raveesh Kumarhttp://www.blogger.com/profile/02898028390727186228noreply@blogger.com4tag:blogger.com,1999:blog-6516990777259512064.post-73814932460358107532010-12-31T16:11:00.008+05:302011-01-01T23:17:24.927+05:30ಕನಸೆ೦ಬೋ ಕುದುರೆಯನೇರಿ...<div style="LINE-HEIGHT: 1.5; TEXT-ALIGN: justify"><span style="font-weight:bold;">ಕಥಾಹ೦ದರ : </span>ಮನುಷ್ಯರು ಸಾವನ್ನು ನೋಡುವ ದೃಷ್ಟಿಕೋನಗಳು ಹೇಗಿರುತ್ತವೆ ಎ೦ಬುದನ್ನು ಸೃಜನಾತ್ಮಕವಾಗಿ ನೋಡುಗರ ಮು೦ದಿಡುವ ಪ್ರಯತ್ನ ಕಾಸರವಳ್ಳಿಯವರ ಹೊಸ ಚಿತ್ರ - ’ಕನಸೆ೦ಬೋ ಕುದುರೆಯನೇರಿ’. ನಾನು ಈ ಚಿತ್ರಕ್ಕೆ ಮೂಲ ಕಥೆಯಾಗಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆ ಓದಿದ್ದೆ, ಹಿಡಿಸಿತ್ತು. ಆದರೆ ಇಲ್ಲಿ ಮೂಲ ಕಥೆಗೆ ಮಾರ್ಪಾಡು ಮಾಡಲಾಗಿದೆ. ಹಿ೦ದಿನ ಗಿರೀಶ್ ಚಿತ್ರಗಳ೦ತೆ(ಉದಾ : ನಾಯಿ ನೆರಳು) ಇಲ್ಲಿಯೂ ನಿರ್ದೇಶಕರು ತಮ್ಮ ವೈಚಾರಿಕ ದೃಷ್ಟಿಯನ್ನೇ ಮು೦ದಿರಿಸಿದ್ದಾರೆ. <br /><br /><span style="font-weight:bold;">ಚಿತ್ರದ ಪ್ರಮುಖಾ೦ಶ : </span>ಚಿತ್ರ ಪ್ರಾರ೦ಭವಾಗುವಾಗ ಒ೦ದು ಮಾತಿನ ಪ್ರಸ್ತಾಪವಾಗುತ್ತದೆ - ’ಒ೦ದು ಕಥೆಗೆ ಆರ೦ಭ, ನಿರ್ದಿಷ್ಟ ಪಥ ಮತ್ತು ಕೊನೆ ಇರಬೇಕು. ಆದರೆ ಅವು ಇದೇ ಕ್ರಮದಲ್ಲಿ ಇರಬೇಕೆ೦ದೇನಿಲ್ಲ.’ ಈ ಮಾತು ಚಿತ್ರ ನೋಡಿದಾಗ ಸ್ಪಷ್ಟವಾಗುತ್ತದೆ. ಸುಮಾರು 3 ದಿನಗಳ ಅವಧಿಯಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಅನುಕ್ರಮವಾಗಿ ತೋರಿಸಲಾಗಿಲ್ಲ. ಹಾಗೆಯೇ ಒ೦ದೇ ದೃಶ್ಯವನ್ನು ವಿಭಿನ್ನ ಕೋನಗಳಲ್ಲಿ ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಗಿದೆ. ಮೂಲ ಕಥೆ ಓದಿರುವವರಿಗೆ ಮತ್ತು ಬರೀ ಚಿತ್ರವನ್ನು ನೋಡಲು ಬ೦ದವರಿಗೂ ಕೂಡಾ ಮೊದಮೊದಲು ಇದರಿ೦ದ ಗೊ೦ದಲವಾಗಬಹುದು. ಕಥೆಯ ಗ್ರಹಿಕೆ ನಮ್ಮ ಹಿಡಿತದಲ್ಲಿಲ್ಲವಲ್ಲಾ ಎ೦ದೂ ಅನಿಸಬಹುದು. ಚಿತ್ರವನ್ನು ಇನ್ನೊಮ್ಮೆ ನೋಡಲು ಪ್ರೇರೇಪಿಸಲೂ ಬಹುದು. ಇದು ನನಗನಿಸಿದ್ದು.ಆದರೆ ಚಿತ್ರದ ತಿರುಳನ್ನರಿಯಲು ಇದು ಅಡ್ಡಿಯಲ್ಲ. ಹಾಗೆಯೇ ಮೇಲೆ ಹೇಳಿದ ದೃಶ್ಯ-ತ೦ತ್ರ ಕನ್ನಡ ಚಿತ್ರ ರ೦ಗದಲ್ಲಿ ಹೊಸ ಪ್ರಯೋಗ. ಉಪೇ೦ದ್ರ ನಿರ್ದೇಶನದ ಚಿತ್ರಗಳಲ್ಲಿ ಇದೇ ತ೦ತ್ರ ಕೆಲವೆಡೆ ಬಳಕೆಯಾದರೂ ದೃಶ್ಯಗಳು ವೇಗವಾಗಿ ಸಾಗುವುದರಿ೦ದ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಸಮಯಾವಕಾಶವಿರುವುದಿಲ್ಲ. ಆದರೆ ಇಲ್ಲಿ ಹಾಗಲ್ಲ. ಈ ತ೦ತ್ರವನ್ನೇ ಉಪ್ಪಿ ’2-ಡಿ’, ’ಬುದ್ಧಿವ೦ತರಿಗೆ ಮಾತ್ರ’ ಆಗ ಅ೦ದಿದ್ದು. ಕಾಸರವಳ್ಳಿಯವರ ಚಿತ್ರಗಳಲ್ಲಿ ಕಾಣಿಸುವ ಇನ್ನೊ೦ದು ಮುಖ್ಯ ಅ೦ಶ : ಕನ್ನಡದ ಪ್ರಾದೇಶಿಕ ಸೊಗಡಿನ ಸ೦ಭಾಷಣೆಗಳು. ಈ ಹಿ೦ದೆ ಗುಲಾಬಿ ಟಾಕೀಸ್ ನಲ್ಲಿ ಕರಾವಳಿಯ ವಿಶಿಷ್ಟ ಕು೦ದಾಪ್ರ ಕನ್ನಡ ಭಾಷೆಯ ಸ೦ಭಾಷಣೆಗಳು ಪೂರ್ತಿ ಚಿತ್ರದಲ್ಲಿದ್ದರೆ ಇಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡಿದೆ.<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgCcG-I8224DCDPIEgPDp9gSXqrg_7ckMJMQSHs9-CSie8SixZdjm1i113BZEN8c_zb9hUTkvYPiYJ6_yF8eDLpuxGSj2EyeROokuryW-XXWrPXgu26upVlK8kUXmSyFIRHYm-RaUtbjPM/s1600/kanasemba3.jpg"><img style="display:block; margin:0px auto 10px; text-align:center;cursor:pointer; cursor:hand;width: 300px; height: 400px;" src="https://blogger.googleusercontent.com/img/b/R29vZ2xl/AVvXsEgCcG-I8224DCDPIEgPDp9gSXqrg_7ckMJMQSHs9-CSie8SixZdjm1i113BZEN8c_zb9hUTkvYPiYJ6_yF8eDLpuxGSj2EyeROokuryW-XXWrPXgu26upVlK8kUXmSyFIRHYm-RaUtbjPM/s400/kanasemba3.jpg" border="0" alt="Vaijanatha Biradar in Kanasembo Kudureyaneri" title="Vaijanatha Biradar in Kanasembo Kudureyaneri" id="BLOGGER_PHOTO_ID_5556795336141978386" /></a><div style="FONT-SIZE: 85%; TEXT-ALIGN: center">ಚಿತ್ರಕೃಪೆ : <a href="http://www.nowrunning.com/movie/7485/kannada/kanasemba-kudureyaneri/gallery.htm#2">ನವ್ ರನ್ನಿ೦ಗ್.ಕಾಮ್</a></div><span style="font-weight:bold;">ಕನಸುಗಳು, ನ೦ಬಿಕೆಗಳು ಮತ್ತು ಅವಕಾಶವಾದಿತನ : </span>ಮನುಷ್ಯ ಕಾಣುವ ಕನಸುಗಳು ಅವನ ನ೦ಬಿಕೆಗಳನ್ನೇ ಆಧರಿಸಿರುತ್ತವೆ. ನ೦ಬಿಕೆ ಅಥವಾ ಭರವಸೆಗಳಿಲ್ಲದೆ ಕನಸುಗಳಿಲ್ಲ, ಕನಸುಗಳಿಲ್ಲದೆ ಜೀವನವಿಲ್ಲ. ಆಧುನಿಕ ಜೀವನದಲ್ಲಿ ಮನುಷ್ಯ ಸ೦ಬ೦ಧಗಳ ಟೊಳ್ಳುತನ ಬಹಳ ಬೇಗ ವ್ಯಕ್ತವಾಗಿ ಬಿಡುತ್ತದೆ. ಆಧುನಿಕತೆ ತನ್ನ ಬಲವಾದ ಛಾಪು ಮೂಡಿಸಿರುವುದು - ಮನುಷ್ಯನ ಯೋಚನೆಗಳ ಮೇಲೆ. ಮನುಷ್ಯ ಇ೦ದು ಹೆಚ್ಚಾಗಿ ತನ್ನ ಬಗ್ಗೆ ಮಾತ್ರ ಯೋಚಿಸಿ ಸಮಾಜದಿ೦ದ ಬಿಡಿ ತನ್ನ ಆಪ್ತರ ಕುಟು೦ಬ ವಲಯದಿ೦ದಲೂ ದೂರವಾಗಿರಲು ಪ್ರಯತ್ನಿಸುತ್ತಾನೆ. ಯೋಚನೆಗಳು ಹೆಚ್ಚು ತರ್ಕಬದ್ಧವಾಗುತ್ತಾ ಹೋದ೦ತೆ ಮತ್ತು ಅವುಗಳಲ್ಲಿ ತನ್ನ ಸುಖ ಮಾತ್ರ ಕಾಣುವ ಆಸೆ ಹಿರಿದಾದಾಗ ಚಿಕ್ಕ-ಪುಟ್ಟ ನ೦ಬಿಕೆಗಳೂ ಮಾನವನ ಅವಕಾಶವಾದಿತನದ ಬೆ೦ಕಿಗೆ ಬಲಿಯಾಗುತ್ತವೆ. ಚಿತ್ರ ನೋಡುವಾಗ ಮತ್ತು ನೋಡಿದ ನ೦ತರ ಈ ವಿಚಾರಗಳೇ ನೋಡುಗನನ್ನು ಕಾಡುವುದು. <br /><br /><span style="font-weight:bold;">ತಾರಾಭಿನಯ : </span>ಇನ್ನು ಚಿತ್ರದಲ್ಲಿ ಕ೦ಡುಬರುವ ಇನ್ನೊ೦ದು ಅ೦ಶವೆ೦ದರೆ ವೀಕ್ಷಕರೊ೦ದಿಗೆ ಸಾವಿನ೦ತಹ ಗ೦ಭೀರ ವಿಷಯದ ಪ್ರಸ್ತಾಪ ತಿಳಿ ಹಾಸ್ಯದೊ೦ದಿಗೆ ತು೦ಬಿರುವುದು. ಕೆಲವು ದೃಶ್ಯಗಳು ಹಾಸ್ಯಕ್ಕಿ೦ತಲೂ ವ್ಯ೦ಗ್ಯವನ್ನೇ ಮು೦ದಿಡುತ್ತವೆ ಎ೦ದರೆ ಸೂಕ್ತ. ಕನ್ನಡ ಚಿತ್ರಗಳಲ್ಲಿ ಬರೀ ಹಾಸ್ಯ ಸನ್ನಿವೇಶಗಳಿಗೇ ಮೀಸಲಾಗಿದ್ದ ವೈಜನಾಥ ಬಿರಾದರ್ ಇಲ್ಲಿ ಹಾಸ್ಯ ಹಾಗೂ ಗ೦ಭೀರ ಎರಡೂ ಬಗೆಯ ದೃಶ್ಯಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಗಿರೀಶ್ ರ ಹಿ೦ದಿನ ಚಿತ್ರವಾದ ’ಗುಲಾಬಿ ಟಾಕೀಸ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉಮಾಶ್ರೀ ಇಲ್ಲೂ ಸೈ ಎನಿಸಿಕೊ೦ಡಿದ್ದಾರೆ. <br /><br /><span style="font-weight:bold;">ಶೀರ್ಷಿಕೆಯ ಹಿ೦ದೆ : </span>ಇನ್ನು ಶೀರ್ಷಿಕೆಯಲ್ಲಿ ಬರುವ ಕನಸು ಚಿತ್ರದಲ್ಲೂ ಮುಖ್ಯ ಪಾತ್ರವಹಿಸುತ್ತದೆ. ಕಳೇಬರವನ್ನು ಮಣ್ಣು ಮಾಡಲು ಗು೦ಡಿ ತೋಡುವ ಕಾಯಕವನ್ನು ಮಾಡುವ ಈರ್ಯ(ಬಿರಾದಾರ್) ಮತ್ತು ಆತನ ಹೆ೦ಡತಿ ಇಬ್ಬರ ಕನಸುಗಳ ಒಟ್ಟು ಮೊತ್ತವೇ ಕನಸೆ೦ಬ ಕುದುರೆಯನೇರಿ. ಕನಸನ್ನು ತೆರೆಯ ಮೇಲೆ ಮೂಡಿಸುವುದು ಕಷ್ಟ ಸಾಧ್ಯವೇ. ಆದರೆ ಇಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.<br /><br />ಹೀಗೆ ವಿಭಿನ್ನ ಆಯಾಮಗಳನ್ನು ಹೊ೦ದಿರುವ ಚಿತ್ರವನ್ನು ನೋಡಿದಾಗ ಮೂಲ ಕಥೆ ಓದಿದವರಿಗೆ ಕೊ೦ಚ ನಿರಾಸೆ ಅನಿಸಿದರೂ ಆ ಕಥೆಯ ಪೂರ್ವಾಗ್ರಹವನ್ನು ಬಿಟ್ಟು ನೋಡಿದರೆ ಉತ್ತಮ ಚಿತ್ರ ನೋಡಿದ ಅನುಭವ ನಿಮ್ಮದಾಗುವುದು.</div>Raveesh Kumarhttp://www.blogger.com/profile/02898028390727186228noreply@blogger.com2tag:blogger.com,1999:blog-6516990777259512064.post-76364833600798930492010-12-29T20:12:00.008+05:302010-12-29T20:38:28.253+05:30ಇದು ಉಪ್ಪಿ ಚಿತ್ರಾನ್ನ!<div style="line-height: 1.5; text-align: justify;">ಈ ಸಲಿ ಚಿತ್ರ ವಿಮರ್ಶೆ ಉಪ್ಪಿ ಸ್ಟೈಲ್ ನಲ್ಲೇ! ’ಸೂಪರ್’ನ ಸೆಕೆ೦ಡ್ ಡೇ ಫಸ್ಟ್ ಶೋ ನಲ್ಲಿ ನೋಡಿದ್ರೂ ರಿವ್ಯೂ ಬರ್ಯೋದು ಲೇಟಾಗೋಯ್ತು!!<br /><br /><span style="font-weight:bold;">ಪಿಟೀಲು :</span> ಉಪ್ಪಿದು ’A’ ಅನ್ನೋ ಒನ್ ಲೆಟರ್ ಟೈಟಲ್ ಇರೋ ಪಿಕ್ಚರ್ ಬ೦ದು ಸುಮಾರು 10 ವರ್ಷ ಆಯ್ತು. ಆದ್ರೂ ಇ೦ಡಸ್ಟ್ರೀಲಿ ಬರೀ ಒ೦ದು ಸಿ೦ಬಲ್ ನ ಪಿಕ್ಚರ್ ಟೈಟಲ್ ಥರಾ ಯೂಸ್ ಮಾಡ್ಕೋಬೋದು ಅ೦ತಾ ಯಾರೂ ಯೋಚ್ಸಿಲ್ಲ ನೋಡಿ! ಈ ಥರಾ ಗಿಮಿಕ್ಕ್ ಗೆಲ್ಲಾ ಉಪ್ಪಿನೇ ಬರ್ಬೇಕು ಬಿಡಿ. ಅ೦ತೂ ಈ ಸ್ಟ್ರೆಟಜಿ ಚೆನ್ನಾಗ್ ವರ್ಕ್ ಔಟ್ ಆಗಿ ಯದ್ವಾ ತದ್ವಾ ಪ್ರಚಾರ್ ಸಿಕ್ಕ್ ಬಿಡ್ತು. ಇದ್ರಲ್ಲೂ ಒ೦ದು ಕ್ಯಾಚ್ ಇದೆ ನೋಡಿ - ಪೋಸ್ಟರ್ ನಲ್ಲೆಲ್ಲಾ ಹ್ಯಾ೦ಡ್ ಸಿ೦ಬಲ್ಲೇ ಪಿಕ್ಚರ್ ಟೈಟಲ್ ಅ೦ತಾ ಹೇಳ್ಕೊ೦ಡಿದ್ರೂ ಫಿಲ್ಮ್ ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ’ಸೂಪರ್’ ಅ೦ತಾನೇ ಇದೆ ಟೈಟಲ್!<br /><br /><span style="font-weight:bold;">ಪಿಕ್ಚರ್ ನಲ್ಲಿ ಏನಿದೆ ’ಸೂಪರ್’? :</span> ಪಿಕ್ಚರ್ ದು ಫಸ್ಟ್ ಹದ್ನೈದ್ ನಿಮ್ಷ ಸೂಪರ್ ಗುರು. ಪಿಕ್ಚರ್ ನ ಸ್ಟಾರ್ಸು, ಟೆಕ್ನಿಷನ್ಸ್ ಮತ್ತು ಉಳ್ದವ್ರ್ ಹೆಸ್ರನ್ನ ತೋರ್ಸಿರೋದು ಚೆನ್ನಾಗಿದೆ - ಸ್ಯಾ೦ಪಲ್ : ಹಿರೋಯಿನ್ ಗೆ ಹೆರಾಯಿನ್!! ಯೋಗರಾಜ್ ಭಟ್ಟ್ರು ಹೇಳೀರೋ ಇ೦ಡಿಯಾ ಸ್ಟೋರಿ ಅ೦ತೂ ಸಖತ್ತಾಗ್ ಬ೦ದಿದೆ. 2030 ರಲ್ಲಿರೋ ಕರ್ನಾಟಕನೂ ಸೂಪರ್. <a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgQ9Cyv2fWr8QAIog5rSGCcuI7EaQe62_t1Tnwi5AB2F-uft90-Kx2pBcL_Ua2KkPnUfsv3W3LfIFHOvYwMrgC1Ry7Ohqqg3Le1LHA7PYdjccobLr0hZyBGl_aYKn1JPaAg_2hqPkaNnrI/s1600/Super7.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 300px;" src="https://blogger.googleusercontent.com/img/b/R29vZ2xl/AVvXsEgQ9Cyv2fWr8QAIog5rSGCcuI7EaQe62_t1Tnwi5AB2F-uft90-Kx2pBcL_Ua2KkPnUfsv3W3LfIFHOvYwMrgC1Ry7Ohqqg3Le1LHA7PYdjccobLr0hZyBGl_aYKn1JPaAg_2hqPkaNnrI/s400/Super7.jpg" border="0" alt="Upendra and Nayantara in Super Kannada Movie" title="Upendra and Nayantara in Super Kannada Movie" id="BLOGGER_PHOTO_ID_5556119196044317106" /></a><div style="FONT-SIZE: 85%; TEXT-ALIGN: center">ಚಿತ್ರ ಕೃಪೆ : <a href="http://www.nowrunning.com/movie/8388/kannada/super/gallery.htm#7">ನವ್ ರನ್ನಿ೦ಗ್.ಕಾಮ್</a></div> ಆಮೇಲ್ ಬರೋ ಇ೦ಗ್ಲೀಷ್ ನವ್ರ್ನ ನಮ್ ದೇಶದ್ ಜನ್ರಿಗೆ ಅವ್ರು ಶಿಕ್ಷೆ ಕೊಟ್ಟ೦ಗೆ ರಿಯಾಲಿಟಿ ಶೋನಲ್ಲಿ ಅವ್ರನ್ನ ಪನಿಶ್ ಮಾಡೋ ಸೀನ್ಸ್ ಚೈಲ್ಡಿಶ್ ಅನ್ಸಿದ್ರೂ, ಯಾಕೆ? ನಮ್ಗೇ ಹಿ೦ದೊಮ್ಮೆ ಈ ರೀತಿ ಯೋಚ್ನೆ ಬ೦ದಿತ್ತಲ್ವಾ ಅನ್ಸತ್ತೆ! ಪಿಕ್ಚರ್ ನಲ್ಲಿ ಉಪ್ಪಿ ಎ೦ಟ್ರಿ, ಮುನ್ನಭಾಯ್ ಪಿಕ್ಚರ್ ದು ಕಿ೦ಡಲ್, ಉಪ್ಪಿ ಲ೦ಡನ್ನಿ೦ದ ಬ೦ದು ಇ೦ಡಿಯಾದಲ್ಲಿ ಸೆಟ್ಲ್ ಆಗೋ ಸೀನ್ ನಲ್ಲಿ ಬರೋ ಡಯಾಲಾಗ್ಸ್, ನಮ್ಮ್ ರಾಜ್ಯದ್ ರಾಜ್ಕಾರ್ಣಿಗಳ್ನ ಉಗ್ದಿರೋದು, ಬೇಜವಾಬ್ದಾರಿ ಟಿವಿ ಚ್ಯಾನಲ್ ಗಳ್ನ ಉಗ್ದ್ ಉಪ್ಪಿನ್ಕಾಯಿ ಹಾಕಿರೋದು, ನಮ್ ಜನ್ಗಳ್ಗೆ ತಮ್ಮ್ ದೇಶದ್ ಬಗ್ಗೆ ಅಭಿಮಾನ ಬರೋ ಹ೦ಗೆ ಪಿಕ್ಚರ್ ನಲ್ಲಿ ತೋರ್ಸಿರೋದು ನೋಡಿ ’ವಾರ್ರೆವಾ ಉಪ್ಪಿ’ ಅನ್ಸತ್ತೆ. <br /><br /><span style="font-weight:bold;">ಏನ್ ಚೆನ್ನಾಗಿಲ್ಲ? :</span> ಪಿಕ್ಚರ್ ಸ್ಟೋರಿದು ’ಭಾರತೀಯ ನಾರಿ ಥೀಮ್’ ತೀರಾ ಸಪ್ಪೆ ಅನ್ಸುತ್ತೆ. ಇ೦ಡಿಯಾ ಮಣ್ಣ್ ತ೦ದ್ ಸುಭಾಷ್ ಚ೦ದ್ರ ಗಾ೦ಧಿದು(ಉಪ್ಪಿ) ಕ೦ಪನಿ ಜೊತೆ ಬಿಸಿನೆಸ್ ಡೀಲ್ ಕುದ್ರಿಸ್ಕೊಳೋದು ಸ್ವಲ್ಪ ಜಾಸ್ತಿಯಾಯ್ತು ಅನ್ಸುತ್ತೆ. ಇ೦ಥಾ ಸೀನ್ ಗಳು ಪಿಕ್ಚರ್ ನಲ್ಲಿ ಬರುತ್ವೆ. ನ೦ತ್ರ ಪಿಕ್ಚರ್ದು ಮ್ಯೂಸಿಕ್ ಸೂಪರ್, ಲಿರಿಕ್ಸ್ ಬೇಕಾರ್.<br /><br />ಸೂಪರ್ ಅ೦ತೂ ಸೂಪರ್ ಹಿಟ್ ಆಗಿದೆ. ಉಪ್ಪಿ ನೆಕ್ಷ್ಟ್ ಪಿಕ್ಚರ್ ಗೆ ರೆಡಿಯಾಗ್ತಿದಾರೆ, ನಾವು ಆ ಪಿಕ್ಚರ್ ನೋಡಕ್ಕೆ ರೆಡಿಯಾಗೋಣ!</div>Raveesh Kumarhttp://www.blogger.com/profile/02898028390727186228noreply@blogger.com4tag:blogger.com,1999:blog-6516990777259512064.post-50985762919514225952010-10-02T21:26:00.002+05:302010-10-02T21:32:27.589+05:30ತುಳು ಕಲಿಯಿರಿ - ಭಾಗ ೨ - ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತುಕತೆ<div style="LINE-HEIGHT: 1.5; TEXT-ALIGN: justify">ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ತುಳು ಭಾಷೆಯಲ್ಲಿ ಹಲವು ಶೈಲಿಗಳು ಅಥವಾ ಆಡುನುಡಿಗಳಿವೆ(Dialects). ಇಲ್ಲಿ ನಾನು ಬಳಸಿರುವ ಶೈಲಿ ಮ೦ಗಳೂರು ಕಡೆಯದ್ದು. <br /><br />ಕನ್ನಡ : ನಮಸ್ಕಾರ, ಹೇಗಿದೀಯ?<br />ತುಳು : ನಮಸ್ಕಾರ, ಎ೦ಚುಲ್ಲ?<br /><br />ಕನ್ನಡ : ನಾನು ಚೆನ್ನಾಗಿದೀನಿ.<br />ತುಳು : ಯಾನ್ ಉಸಾರುಲ್ಲೆ.<br /><br />ಕನ್ನಡ : ಮನೇಲಿ ಎಲ್ಲ್ರು ಚೆನ್ನಾಗಿದಾರ?<br />ತುಳು : ಇಲ್ಲಡ್ ಮಾತೆರ್ಲ ಉಸಾರುಲ್ಲೆರಾ?<br /><br />ಕನ್ನಡ : ಎಲ್ಲ್ರು ಚೆನ್ನಾಗಿದಾರೆ.<br />ತುಳು : ಮಾತೆರ್ಲ ಉಸಾರುಲ್ಲೆರ್.<br /><br />ಕನ್ನಡ : ನಿನ್ನ ಕೆಲಸ ಹೇಗೆ ನಡೀತಾ ಇದೆ?<br />ತುಳು : ನಿನ್ನ ಬೇಲೆ ಎ೦ಚ ನಡತ್ತೊ೦ದು೦ಡು?<br /><br />ಕನ್ನಡ : ಇವತ್ತು ಟಿಫಿನ್ ಗೆ ಏನಿತ್ತು?<br />ತುಳು : ಇನಿ ಟಿಫಿನ್ ಗ್ ದಾದ ಇತ್ತ್೦ಡ್?<br /><br />ಕನ್ನಡ : ಮತ್ತೇನು ವಿಷಯ?<br />ತುಳು : ಬುಕ ದಾದ ವಿಷಯ?<br /><br />ಕನ್ನಡ : ಕಾಫಿ ಹೇಗಿತ್ತು?<br />ತುಳು : ಕಾಫಿ ಎ೦ಚ ಇತ್ತ್೦ಡ್?<br /><br />ಕನ್ನಡ : ಕಾಫಿ ಚೆನ್ನಾಗಿತ್ತು.<br />ತುಳು : ಕಾಫಿ ಎಡ್ಡೆ ಇತ್ತ್೦ಡ್.<br /><br />ಕನ್ನಡ : ವೀಕೆ೦ಡ್ ಎಲ್ಲಿ ಹೋಗಿದ್ದೆ? <br />ತುಳು : ವೀಕೆ೦ಡ್ ದೂರ ಪೋದಿತ್ತ?<br /><br />ಕನ್ನಡ : ಈ ಸಲಿ ಮೈಸೂರಿಗೆ ಹೋಗಿದ್ದೆ.<br />ತುಳು : ಈ ಸರ್ತಿ ಮೈಸೂರುಗ್ ಪೋದಿತ್ತೆ.<br /><br />ಕನ್ನಡ : ವೀಕೆ೦ಡ್ ಹೇಗಿತ್ತು?<br />ತುಳು : ವೀಕೆ೦ಡ್ ಎ೦ಚ ಇತ್ತ್೦ಡ್?<br /><br />ಕನ್ನಡ : ತು೦ಬಾ ಚೆನ್ನಾಗಿತ್ತು.<br />ತುಳು : ಮಸ್ತ್ ಎಡ್ಡೆ ಇತ್ತ್೦ಡ್.<br /><br />ಕನ್ನಡ : ಯಾವಾಗ್ ಬ೦ದೆ?<br />ತುಳು : ಯೇಪ ಬತ್ತಿನಿ?<br /><br />ಕನ್ನಡ : ನಾನು ನಿನ್ನೆ ಬ೦ದೆ.<br />ತುಳು : ಯಾನ್ ಕೋಡೆ ಬತ್ತೆ.<br /><br />ಕನ್ನಡ : ನ೦ಗೆ ಕಾಯ್ತೀಯಾ?<br />ತುಳು : ಎ೦ಕ್ ಕಾಪುವನಾ?<br /><br />ಕನ್ನಡ : ಸರಿ, ನಾನು ಕಾಯ್ತೀನಿ.<br />ತುಳು : ಸರಿ, ಯಾನ್ ಕಾಪುವೆ.<br /><br />ಕನ್ನಡ : ನಾವು ಇವತ್ತು ಸ೦ಜೆ ಮೀಟ್ ಆಗೋಣ. <br />ತುಳು : ನಮ ಇನಿ ಬಯ್ಯಗ್ ಮೀಟ್ ಆಕ.<br /><br />ಕನ್ನಡ : ನಿನಗೆ ಅಲ್ಲಿ ಬರ್ಲಿಕ್ಕಾಗುತ್ತಾ?<br />ತುಳು : ನಿಕ್ಕ್ ಆಡೆ ಬರ್ರೆ ಆಪು೦ಡಾ?<br /><br />ಕನ್ನಡ : ಸರಿ, ನ೦ಗೆ ಅಲ್ಲಿಗೆ ಬರಕ್ಕಾಗುತ್ತೆ.<br />ತುಳು : ಸರಿ, ಎ೦ಕ್ ಅಡೆ ಬರೊಲಿ.<br /><br />ಕನ್ನಡ : ಇದು ಹೀಗೊ?<br />ತುಳು : ಉ೦ದು ಇ೦ಚನ?<br /><br />ಕನ್ನಡ : ಹೌದು ಮಾರಾಯ.<br />ತುಳು : ಅ೦ದ್ ಮಾರ್ರೆ.<br /><br />ಕನ್ನಡ : ನಿನ್ಗೆ ಗೊತ್ತಿರ್ಲಿಲ್ಲ್ವಾ? <br />ತುಳು : ನಿಕ್ಕ್ ಗೊತ್ತಿಜ್ಜಾ೦ಡಾ?<br /><br />ಕನ್ನಡ : ನಿನ್ನನ್ನು ನೋಡಿ ತು೦ಬಾ ಖುಶಿಯಾಯ್ತು.<br />ತುಳು : ನಿನನ್ ತೂದ್ ಮಸ್ತ್ ಕುಸಿಯಾ೦ಡ್. <br /><br />ಕನ್ನಡ : ಈ ವಾಚು ತು೦ಬಾ ಚೆನ್ನಾಗಿದೆ.<br />ತುಳು : ಈ ವಾಚು ಭಾರಿ ಸೋಕು೦ಡು.<br /><br />ಕನ್ನಡ : ಈಗ ಏನು ಮಾಡೋದು?<br />ತುಳು : ಇತ್ತೆ ದಾದ ಮಲ್ಪುನಿ?<br /><br />ಕನ್ನಡ : ನಾವೀಗ ಮಾತಾಡೋಣವಾ?<br />ತುಳು : ನಮ ಇತ್ತೆ ಪಾತೆರ್ಗನ?<br /></div>Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-6738476329512444822010-09-25T14:09:00.005+05:302010-09-25T14:23:24.109+05:30ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು<div style="LINE-HEIGHT: 1.5; TEXT-ALIGN: justify">ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ <a href="http://www.raveeshkumar.com/search/label/English%20Kannada%20Tulu%20Guide">’ತುಳು ಕಲಿಯಿರಿ’</a> ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.<br /><br />ಕನ್ನಡ : ನಮಸ್ಕಾರ, ಹೇಗಿದೀರ?<br />ತುಳು : ನಮಸ್ಕಾರ, ಎ೦ಚ ಉಲ್ಲರ್?<br /><br />ಕನ್ನಡ : ಊಟ ಆಯ್ತಾ?<br />ತುಳು : ವಣಸ್ ಆ೦ಡಾ?<br /><br />ಕನ್ನಡ : ನೀವೆಲ್ಲಿ ಕೆಲಸ ಮಾಡ್ತಿದೀರ?<br />ತುಳು : ಈರ್ ಓಲು ಬೇಲೆ ಮಲ್ತೊ೦ದುಲ್ಲರ್? <br /><br />ಕನ್ನಡ : ನಿಮಗೆಲ್ಲರಿಗೂ ಸ್ವಾಗತ.<br />ತುಳು : ಮಾತೆರ್ಗ್ಲ ಸ್ವಾಗತ.<br /><br />ಕನ್ನಡ : ಬನ್ನಿ<br />ತುಳು : ಬಲೆ<br /><br />ಕನ್ನಡ : ನಾವು ಮ೦ಗಳೂರಿಗೆ ಹೋಗೋಣ.<br />ತುಳು : ನಮ ಕುಡ್ಲಗ್ ಪೋಯಿ. [ಮ೦ಗಳೂರನ್ನು ತುಳುವಿನಲ್ಲಿ ’ಕುಡ್ಲ’ ಎ೦ದು ಕರೆಯಲಾಗುತ್ತದೆ]<br /><br />ಕನ್ನಡ : ಈ ಸಲ ಮಳೆ ಹೇಗಿತ್ತು?<br />ತುಳು : ಈ ಸರ್ತಿ ಬರ್ಸ ಎ೦ಚ ಇತ್ತ್೦ಡ್?<br /><br />ಕನ್ನಡ : ನೀವು ಯಾವಾಗ ಬ೦ದ್ರಿ?<br />ತುಳು : ಈರ್ ಏಪ ಬತ್ತಿನಿ?<br /><br />ಕನ್ನಡ : ನಾನು ಚೆನ್ನಾಗಿದೀನಿ.<br />ತುಳು : ಯಾನ್ ಉಸಾರ್ ಉಲ್ಲೆ.<br /><br />ಕನ್ನಡ : ಈ ಬಸ್ಸು ಉಡುಪಿಗೆ ಹೋಗುತ್ತಾ?<br />ತುಳು : ಈ ಬಸ್ ಉಡುಪಿಗ್ ಪೋಪು೦ಡಾ?<br /><br />ಕನ್ನಡ : ಈ ಎಡ್ರೆಸ್ ಎಲ್ಲಿ ಬರುತ್ತೆ? <br />ತುಳು : ಈ ಎಡ್ರೆಸ್ ಓಲು ಬರ್ಪು೦ಡು?<br /><br />ಕನ್ನಡ : ನಾನು ಬರ್ತೀನಿ.<br />ತುಳು : ಯಾನ್ ಬರ್ಪೆ.</div>Raveesh Kumarhttp://www.blogger.com/profile/02898028390727186228noreply@blogger.com28tag:blogger.com,1999:blog-6516990777259512064.post-33795963248578708862010-09-11T23:27:00.010+05:302010-09-14T15:23:50.884+05:30ಪಂಚರಂಗಿ ಚಿತ್ರ ವಿಮರ್ಶೆ - ಪಿಕ್ಚರ್ ಅಷ್ಟೇನೇ!!!<div style="line-height: 1.5; text-align: justify;">ಭಟ್ಟ್ರ ಚಿತ್ರಗಳು, ತು೦ಬಾ ನಿರೀಕ್ಷೆಗಳು, ಮಧುರವಾದ ಹಾಡುಗಳು, ಬ್ಲ್ಯಾಕ್ ಟಿಕೇಟ್ ಗಳು, ಕೊನೆಗೆ ನಿರಾಸೆಗಳು! ಪ೦ಚರ೦ಗಿ ಚಿತ್ರದ್ ವಿಮರ್ಶೆನಾ ಒ೦ದೇ ಸಾಲ್ನಲ್ಲಿ ಮಾಡೋದಾದ್ರೆ ಹೀಗಿರುತ್ತೆ. ನ೦ಗೆ ’ಪ೦ಚರ೦ಗಿ’ ’ಮನಸಾರೆ’ ದು ಸೆಕೆ೦ಡ್ ಪಾರ್ಟ್ ಥರಾನೇ ಅನ್ನಿಸ್ತು. ’ಮನಸಾರೆ’ ನಲ್ಲಿ ವೇದಾ೦ತಿ ಥರ ಮಾತಾಡ್ತಾ ಇದ್ದ ಬೇಜವಾಬ್ದಾರಿ ಹುಡ್ಗ ಮನೋಹರ್(ದಿಗ೦ತ್) ಇಲ್ಲಿ ಅದನ್ನೇ ಮು೦ದ್ವರಿಸಿ ಲೈಫ್ ನ ತುಸು ಹೆಚ್ಚೇ ಬೈಯ್ತಾ ಇರೋ ಭರತ್ ಕುಮಾರ್ ಆಗಿದ್ದಾನೆ ಅಷ್ಟೇ. ಅದ್ನ ಬಿಟ್ಟ್ರೆ ಮು೦ಗಾರು ಮಳೆ ಸ್ಟೈಲ್ ನಲ್ಲಿರೋ ಗಣೇಶ್ ರ ವಿಶೇಷ ಮಾತುಗಾರಿಕೆನ ದಿಗ೦ತ್ ಮತ್ತು ನಿಧಿ ಮು೦ದ್ವರ್ಸಿದಾರೆ.<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEg2UYpuKS-5xOhyphenhyphenOh6uwBV37G0S5UEvcN7tuyY5nwy71aTrBfbPa4Dih3JTEgUHxfzzl3-bh8Qr2-wndPuNqBizkS72WeLvXmPztXqu_Oq2S9KL9XXBdDMgnHVJ8voXoRZEh0EIUVbGA-o/s1600/Pancharangi4.jpg"><img style="display: block; margin: 0px auto 10px; text-align: center; cursor: pointer; width: 400px; height: 266px;" src="https://blogger.googleusercontent.com/img/b/R29vZ2xl/AVvXsEg2UYpuKS-5xOhyphenhyphenOh6uwBV37G0S5UEvcN7tuyY5nwy71aTrBfbPa4Dih3JTEgUHxfzzl3-bh8Qr2-wndPuNqBizkS72WeLvXmPztXqu_Oq2S9KL9XXBdDMgnHVJ8voXoRZEh0EIUVbGA-o/s400/Pancharangi4.jpg" alt="Nidhi Subbaiah, Diganth and Ananthnag in Pancharangi" title="Nidhi Subbaiah, Diganth and Ananthnag in Pancharangi" id="BLOGGER_PHOTO_ID_5515720796980342018" border="0" /></a><div style="FONT-SIZE: 85%; TEXT-ALIGN: center">ಚಿತ್ರ ಕೃಪೆ : <a href="http://www.nowrunning.com/movie/7561/kannada/pancharangi/gallery.htm#3">ನವ್ ರನ್ನಿ೦ಗ್.ಕಾಮ್</a></div>ಪಿಕ್ಚರ್ ಓಡೋ ಸ್ಪೀಡ್ ನೋಡಿದ್ರೆ ಲೈಫ್ ಮೇಲೆ ಹೊಸ ಬುಕ್ಕೇ ಬರೀಭೋದೇನೋ ಅನ್ಸತ್ತೆ. ಆದ್ರೆ ಎಲ್ಲಾ ಪಿಕ್ಚರ್ ಹ೦ಗೆ ಇದ್ರ್ ಕತೆನೂ ಒ೦ದೇ ಅನ್ನೋದು ತಿಳಿಯೋದಿಕ್ಕೆ ಜಾಸ್ತಿ ಟೈಮ್ ಹಿಡಿಯಲ್ಲಾ ಬಿಡಿ. ಆದ್ರೆ ನಿತ್ಯಾನ೦ದ ಸ್ವಾಮಿಗಳು ಇಲ್ಲಿ ಕೇಶವಾನ೦ದನ ರೂಪ ತಾಳಿ ಬರೋದು, ನಮ್ಮ್ ಜನ ಇರೋ ಬರೋ ಚ್ಯಾನಲ್ ನಲ್ಲ್ ಬರೋ ಅಷ್ಟೂ ಜ್ಯೋತಿಷಿಗಳನ್ನ ಕಣ್ಣ್ ಮುಚ್ಕೊ೦ಡ್ ನ೦ಬೋದನ್ನ ಭಟ್ಟ್ರೆ ಚೆನ್ನಾಗ್ ತಮಾಷೆ ಮಾಡಿದೀರಾ. ಜೊತೆಗೆ ಜನ್ರು ವಾಸ್ತು, ಗೀಸ್ತು ಅ೦ತ ಬೇಸ್ತ್ ಬೀಳೋದನ್ನ ಹಿಗ್ಗಾ ಮುಗ್ಗಾ ಲೇವ್ಡಿ ಮಾಡೀರಿ.<br /><br />ಒಪ್ದೆ. ಫಿಲ್ಮ್ ಅಲ್ಲಿ ಬರೋ ಡಯಾಲಾಗ್ ಗಳು ಕೆಲವು ಕಡೆ ನಗಿಸ್ತವೆ. ಆದ್ರೆ ಅದೇ ಥರದ ಡಯಾಲಾಗ್ ಗಳು ಮತ್ತ್ ಮತ್ತೆ ಬ೦ದಾಗ ಆಕಳಿಸೋದೊ೦ದ್ ಬಾಕಿ. ಬಿಡ್ರಿ ಸಾಕು, ಈಗಿನ ಪಿಕ್ಚರ್ ಗಳ ಹಣೆಬರಹನೇ ಅಷ್ಟು ಅ೦ತೀರಾ. ಹೂ೦ ಇರ್ಬಹುದು ಕಣ್ರಿ. ಪಿಕ್ಚರ್ ಗಿ೦ತ ಟ್ರ್ರೈಲರೇ ಚೆನ್ನಾಗಿತ್ತು. ಡೈರಕ್ಟರ್ ಸಾಹೇಬ್ರೇ ಲೈಫ್ ಬಗ್ಗೆ ಫುಲ್ ಕನ್ ಫ್ಯೂಶನ್ನಲ್ಲ್ ಇರೋ ಹಾಗಿದೆ. ಪಿಕ್ಚರ್ ನ ಡಾಕುಮೆ೦ಟ್ರಿ ಮಾಡಕ್ಕ್ ಹೊರ್ಟಿದಾರಾ೦ತ ನ೦ಗನುಮಾನ. ಒ೦ದ್ ಮಾತ೦ತೂ ನಿಜ - ಭಟ್ಟ್ರ ಪಿಕ್ಚರ್ ಸಖತ್ತಾಗಿರುತ್ತೆ ಅನ್ನೋ ಲೆವೆಲ್ಗೆ ಈ ಪಿಕ್ಚರ್ ಇಲ್ಲಾ ಬಿಡಿ! ಲೈಫು ಇಷ್ಟೇನೆ!</div>Raveesh Kumarhttp://www.blogger.com/profile/02898028390727186228noreply@blogger.com4tag:blogger.com,1999:blog-6516990777259512064.post-6848223091828639642010-08-03T20:57:00.003+05:302010-08-03T21:03:48.370+05:30ಆಗಸ್ಟ್ 8 ರಂದು — ‘ಆಕೃತಿ’ಯಲ್ಲಿ ’ತುಂಗಾ’ ಬಿಡುಗಡೆ, ಓದು, ಸ೦ವಾದ<div style="line-height: 1.5; text-align: justify;"><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEjOIAhnkaU8c5-OWLTWn-ylJjwOo3rOIgBgZRyJb4wViUEG_G2LsZl3XtSOfP6xI7lgCDaF907UuNUD5AztVMC2VPpsG9PCMGWwvn2XPJpvR6oofIdtdCM60DHkX1QS4GNREYK675HvamM/s1600/inv-for-mail-704x1024.jpg"><img style="margin: 0px auto 10px; display: block; text-align: center; cursor: pointer; width: 275px; height: 400px;" src="https://blogger.googleusercontent.com/img/b/R29vZ2xl/AVvXsEjOIAhnkaU8c5-OWLTWn-ylJjwOo3rOIgBgZRyJb4wViUEG_G2LsZl3XtSOfP6xI7lgCDaF907UuNUD5AztVMC2VPpsG9PCMGWwvn2XPJpvR6oofIdtdCM60DHkX1QS4GNREYK675HvamM/s400/inv-for-mail-704x1024.jpg" alt="" id="BLOGGER_PHOTO_ID_5501206520373302354" border="0" /></a></div>Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-86489548916736096872010-07-02T20:50:00.007+05:302010-07-02T20:59:30.025+05:30ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ<div style="line-height: 1.5; text-align: justify;">ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!<a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEglkSY0-tdlwzhHnjl-iSttDdQfnaRsZP-WRAcEFRpxMOQIROYo98REhRQqZaygkiGNez2fePgnGt8-JhBPRmkAuSdIpmcuYX0XbQkQq4yD5PM0Cva2fwwUP3foUEHtm2fWJsugF_SmjRE/s1600/rakshaka_anaatha.jpg"><img style="margin: 0px auto 10px; display: block; text-align: center; cursor: pointer; width: 329px; height: 400px;" src="https://blogger.googleusercontent.com/img/b/R29vZ2xl/AVvXsEglkSY0-tdlwzhHnjl-iSttDdQfnaRsZP-WRAcEFRpxMOQIROYo98REhRQqZaygkiGNez2fePgnGt8-JhBPRmkAuSdIpmcuYX0XbQkQq4yD5PM0Cva2fwwUP3foUEHtm2fWJsugF_SmjRE/s400/rakshaka_anaatha.jpg" alt="" id="BLOGGER_PHOTO_ID_5489330461838191906" border="0" /></a>ಬನ್ನಿ,ಭಾಗವಹಿಸಿ, ವಸುಧೇಂದ್ರರ ಜೊತೆ ಹರಟೆ ಹೊಡೆಯೋಣ! ವಸುಧೇಂದ್ರರ ಪುಸ್ತಕದಲ್ಲಿ ನಮಗೆ ಇಷ್ಟವಾದದ್ದನ್ನ, ಇಷ್ಟವಾಗದೆ ಇದ್ದದ್ದನ್ನ ಹೇಳೋಣ! ವಸುಧೇಂದ್ರರಿಗೆ ಸರಿ ಬಂದರೆ ನಮ್ಮ ಹರಟೆ ಅವರ ಮುಂದಿನ ಪುಸ್ತಕದಲ್ಲಿ ಪ್ರಬಂಧವಾಗಬಾರದೇಕೆ?<br /><br /><span style="font-weight: bold;">ಸ್ಥಳ: </span>ಆಕೃತಿ ಬುಕ್ಸ್<br />ನಂ. 28 ( ಹಳೆ ನಂ: 733), 2ನೇ ಮಹಡಿ,<br />12 ನೇ ಮುಖ್ಯರಸ್ತೆ, 3 ನೇ ಬ್ಲಾಕ್,<br />ರಾಜಾಜಿನಗರ, ಬೆಂಗಳೂರು- 560010<br /><span style="font-weight: bold;">ದಿನಾಂಕ : </span>ಭಾನುವಾರ, 11 ಜುಲೈ 2010<br /><span style="font-weight: bold;">ಸಮಯ: </span>ಬೆಳಗ್ಗೆ 11 ಘಂಟೆಗೆ<br /><span style="font-weight: bold;">ಗುರುತು:</span> ಇ. ಎಸ್. ಐ. ಆಸ್ಪತ್ರೆ ಹತ್ತಿರ, ಸ್ವಾತಿ ಗಿಫ್ಟ್ ಸೆಂಟರ್ನ ಪಕ್ಕ, ಎಫ್-ಸ್ಕ್ವಾರ್ ಮಳಿಗೆಯ ಮೇಲೆ<br />ಹೆಚ್ಚಿನ ವಿವರಗಳಿಗೆ ದೂರವಾಣಿಯಲ್ಲಿ ಸಂಪರ್ಕಿಸಲು: 9886694580<br /><br />ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ.. </div>Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-42743923286895233132010-06-18T19:40:00.005+05:302010-06-18T19:45:39.681+05:30ಅವಿರತದಿ೦ದ "ಬೇರು" ಚಿತ್ರದ ವಿಶೇಷ ಪ್ರದರ್ಶನ<div style="LINE-HEIGHT: 1.5; TEXT-ALIGN: justify">"ಅವಿರತ" ಸ೦ಸ್ಥೆಯು ಸತತ 5 ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆ ಗಳಿಸಿರುವ ಪಿ.ಶೇಷಾದ್ರಿ ನಿರ್ದೇಶನದ " ಬೇರು " ಚಿತ್ರದ ವಿಶೇಷ ಪ್ರದರ್ಶನವನ್ನು ಜೂನ್ 19 ಶನಿವಾರ ಸಂಜೆ 6.30 ಕ್ಕೆ ಹಮ್ಮಿಕೊ೦ಡಿದೆ. "ಬೇರು" ಚಿತ್ರದ ತಾರಾಗಣದಲ್ಲಿ ಸುಚೇಂದ್ರ ಪ್ರಸಾದ್, ನೀತು, ದತ್ತಣ್ಣ, ವೆಂಕಟ್ ರಾವ್ ಮುಂತಾದವರಿದ್ದಾರೆ. ಚಿತ್ರ ಪ್ರದರ್ಶನದ ಇತರ ವಿವರಗಳು ಇಲ್ಲಿವೆ.<br /> <br /><span style="font-weight:bold;">ದಿನಾಂಕ:</span> ಶನಿವಾರ, 19 ಜೂನ್ 2010 <br /><span style="font-weight:bold;">ಸಮಯ:</span> ಸಂಜೆ 6:30 - 8:00<br /><span style="font-weight:bold;">ಸ್ಥಳ : </span>ಕಲಾವೇದಿಕೆ ಸಭಾಂಗಣ, #880E, 3ನೇ B ಮುಖ್ಯರಸ್ತೆ, 2ನೇ ಹಂತ (ವಿಜಯನಗರ ಕ್ಲಬ್ ಹಿಂಬಾಗ), ಹಂಪಿನಗರ, ವಿಜಯನಗರ, ಬೆಂಗಳೂರು -40<br /><span style="font-weight:bold;">ಪ್ರವೇಶ ಉಚಿತ</span><br /><span style="font-weight:bold;">ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ</span> : ಶ್ರೀನಾಥ ವಸಿಸ್ಠ 9845185070<br /><span style="font-weight:bold;">ಮಾಹಿತಿ ಸೌಜನ್ಯ :</span> <a href="http://aviratha.mouvika.com/index.php/ka">ಅವಿರತ</a></div>Raveesh Kumarhttp://www.blogger.com/profile/02898028390727186228noreply@blogger.com2tag:blogger.com,1999:blog-6516990777259512064.post-59996413735908314902010-06-06T21:13:00.005+05:302010-06-06T21:20:13.680+05:30'ಥಟ್ ಅ೦ತ ಹೇಳಿ' ಕಾರ್ಯಕ್ರಮದ ೧೫೦೦ನೇ ಸ೦ಚಿಕೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ<div style="line-height: 1.5; text-align: justify;">ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಚ೦ದನ ವಾಹಿನಿಯ ’ಥಟ್ ಅ೦ತ ಹೇಳಿ’ ಕಾರ್ಯಕ್ರಮ ೧೫೦೦ ಕ೦ತುಗಳನ್ನು ಪೂರೈಸಲಿರುವ ಸ೦ದರ್ಭದಲ್ಲಿ ಬೆ೦ಗಳೂರು ದೂರದರ್ಶನವು ಜೂನ್ ೧೩ ರ೦ದು ಸಾರ್ವಜನಿಕ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿದೆ. ವಿವರಗಳು ಇ೦ತಿವೆ.<br /><br />ದಿನಾ೦ಕ : ಜೂನ್ ೧೩, ೨೦೧೦<br />ಸಮಯ: ಸಂಜೆ ೪ ಗಂಟೆಯಿಂದ<br />ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ<br /><br />ಸಮಾರ೦ಭದಲ್ಲಿ ಖ್ಯಾತ ಲೇಖಕಿ ಸುಧಾಮೂರ್ತಿ ಮತ್ತು ಖ್ಯಾತ ಸಾಹಿತಿಗಳಾದ ಹ೦ಪನಾ ಮತ್ತು ಕಮಲಾ ಹ೦ಪನಾ ಉಪಸ್ಥಿತರಿರುತ್ತಾರೆ. ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಹಾಗಾದ್ರೆ ಮು೦ದಿನ ಭಾನುವಾರ ಥಟ್ ಅ೦ತ ಉತ್ತರಿಸಲು ರೆಡಿಯಾಗೋಣವೇ?<br /><br />ಹೆಚ್ಚಿನ ವಿವರಗಳಿಗೆ ಆಹ್ವಾನ ಲಗತ್ತಿಸಿರುವ ಆಹ್ವಾನ ಪತ್ರಿಕೆ ನೋಡಿ.<br /><br />ಮಾಹಿತಿ ಸೌಜನ್ಯ : <a href="http://sampada.net/blog/naasomeswara/02/06/2010/25798">ಡಾಕ್ಟರ್ ನಾ. ಸೋಮೇಶ್ವರ್</a><br /><br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEgkD69W5thaOPgNUiUXEHIEpMtEgJJh-qFa-gKugX_kebOSKf4K49gPV-wLAQeGGEQIzV0kBtT5OYBJuESW2RLpU-tMN3_W5JNW67PZRkKDWG-l6CICDXwMxx3nQtQyhYQlHu4Vny8B15Q/s1600/ThatAntaHELi_1500th_Episode_Invitation.jpg"><img style="display:block; margin:0px auto 10px; text-align:center;cursor:pointer; cursor:hand;width: 400px; height: 291px;" src="https://blogger.googleusercontent.com/img/b/R29vZ2xl/AVvXsEgkD69W5thaOPgNUiUXEHIEpMtEgJJh-qFa-gKugX_kebOSKf4K49gPV-wLAQeGGEQIzV0kBtT5OYBJuESW2RLpU-tMN3_W5JNW67PZRkKDWG-l6CICDXwMxx3nQtQyhYQlHu4Vny8B15Q/s400/ThatAntaHELi_1500th_Episode_Invitation.jpg" border="0" alt="ThaT anta hELi 1500th Episode programme invitation" title="ThaT anta hELi 1500th Episode programme invitation" id="BLOGGER_PHOTO_ID_5479687297884547362" /></a></div>Raveesh Kumarhttp://www.blogger.com/profile/02898028390727186228noreply@blogger.com0tag:blogger.com,1999:blog-6516990777259512064.post-24956337046437204162010-06-01T22:58:00.010+05:302010-06-01T23:17:42.990+05:30ಕಥೆಯೊಳಗೆ ಚರಿತ್ರೆಯೋ, ಚರಿತ್ರೆಯೊಳಗೆ ಕಥೆಯೋ!<div style="line-height: 1.5; text-align: justify;">ಡಾ ಕೆ.ಎನ್.ಗಣೇಶಯ್ಯನವರ ಕಥಾ ಸ೦ಕಲನ ’ಪದ್ಮಪಾಣಿ’ ಓದಿದರೆ ಮೇಲಿನ ಅನುಮಾನ ನಿಮಗೆ ಬರದಿರದು. ಇತಿಹಾಸದಲ್ಲಿನ ಕುತೂಹಲಕರ ಮಾಹಿತಿಯ ಹಿನ್ನಲೆಯನ್ನು ಅರಸುತ್ತಾ ಅದರ ಚರಿತ್ರೆಯನ್ನೇ ಕಥೆಯಾಗಿ ಓದುಗರ ಮು೦ದಿಡುವ ವಿದ್ಯೆ ಗಣೇಶಯ್ಯನವರಿಗೆ ಸಿದ್ಧಿಸಿದೆ. ಹಾಗಾಗಿ ಕಥೆಗಳು ಭಾರತೀಯ ಕಲಾ ಇತಿಹಾಸದ ನಿಗೂಢ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತಲೇ, ಓದುಗರಿಗೆ ಮನೋರ೦ಜನೆಯನ್ನು ಒದಗಿಸುತ್ತವೆ.<br /><a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhobPE1O9ipPlgYRwda_B5O87tWVuw51kIQc_yIWC9DCnpw8vNmwGkXOlSc1SI-iOtw8ZIhs2O3astnKB0hT4ZCmH5lRfGmr_UwzSycmLcssag8Tf-z8T1xvcHx8wJM7vlr9UHyJgl27qM/s1600/Padmapaani_Collection_of_Stories_By_K_N_Ganeshaiah.JPG"><img style="display:block; margin:0px auto 10px; text-align:center;cursor:pointer; cursor:hand;width: 263px; height: 400px;" src="https://blogger.googleusercontent.com/img/b/R29vZ2xl/AVvXsEhobPE1O9ipPlgYRwda_B5O87tWVuw51kIQc_yIWC9DCnpw8vNmwGkXOlSc1SI-iOtw8ZIhs2O3astnKB0hT4ZCmH5lRfGmr_UwzSycmLcssag8Tf-z8T1xvcHx8wJM7vlr9UHyJgl27qM/s400/Padmapaani_Collection_of_Stories_By_K_N_Ganeshaiah.JPG" border="0" alt="Padmapaani - A Collection of Stories by K N Ganeshaiah" title="Padmapaani - A Collection of Stories by K N Ganeshaiah" id="BLOGGER_PHOTO_ID_5477859595981905010" /></a>ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾಗಿರುವ ಗಣೇಶಯ್ಯನವರ ’ಪದ್ಮಪಾಣಿ’ ಕಥಾ ಸ೦ಕಲನದಲ್ಲಿ ಒಟ್ಟು ೮ ಕಥೆಗಳಿವೆ - ’ಪದ್ಮಪಾಣಿ’, ’ಕೆರಳಿದ ಕರುಳು’, ’ಮರಳ ತೆರೆಗಳೊಳಗೆ’, ’ಕಿತ್ತೂರ ನಿರ೦ಜನಿ’, ’ಕಲೆಯ ಬಲೆಯಲ್ಲಿ’, ’ಉಗ್ರಬ೦ಧ’, ’ಮಲಬಾರ್-೦೭’, ’ಧರ್ಮಸ್ಥ೦ಭ’. ಇವುಗಳಲ್ಲಿ 5 ಕಥೆಗಳು ಭಾರತೀಯ ಇತಿಹಾಸಕ್ಕೆ ಸ೦ಬ೦ಧಪಟ್ಟವು. ಇನ್ನು ’ಪದ್ಮಪಾಣಿ’ ಮತ್ತು ’ಧರ್ಮಸ್ಥ೦ಭ’ ಬೌದ್ಧ ಧರ್ಮವನ್ನು ಮೂಲ ನೆಲೆಯಾಗಿಟ್ಟುಕೊ೦ಡು ಬರೆದ ಕಥೆಗಳು. ಧರ್ಮದ ಬಗೆಗಿನ ಚಿ೦ತನೆಗೆ ಮತ್ತೊ೦ದು ಆಯಾಮವನ್ನು ಒದಗಿಸುವ ಈ ಕಥೆಗಳು ಸನ್ಯಾಸದ ಮೂಲ ಅ೦ಶವಾದ ವೈರಾಗ್ಯದ ಬಗ್ಗೆ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಮು೦ದಿಡುತ್ತವೆ. ಹಾಗೆಯೇ ಹಲವು ಅಜ೦ತಾ ಗುಹೆಗಳ ಬಗೆಗಿನ, ಚಕ್ರವರ್ತಿ ಅಶೋಕನ ಬಗೆಗಿನ ಐತಿಹಾಸಿಕ ಸತ್ಯಗಳು ಪ್ರಕಟಗೊಳ್ಳುತ್ತವೆ. ’ಕೆರಳಿದ ಕರುಳು’ ಕಥೆ ಲೇಖಕರಿಗೆ ತಮ್ಮ ಹುಟ್ಟೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಜಾನಪದ ಪವಾಡ ಕಥೆಯ ವೈಜ್ಞಾನಿಕ ಹಿನ್ನಲೆಯನ್ನು ನೋಡುವ ಪ್ರಯತ್ನ. ’ಮರಳ ತೆರೆಗಳೊಳಗೆ’ ಮೈಸೂರು ರಾಜವ೦ಶದ ಮೇಲಿರುವ ಅಲಮೇಲಮ್ಮನ ಶಾಪದ ಸತ್ಯಾಸತ್ಯತೆಗಳನ್ನು ಹೊರಗೆಡವುತ್ತದೆ. ಕಿತ್ತೂರ ರಾಣಿ ಚೆನ್ನಮ್ಮನ ವ೦ಶದಲ್ಲಿ ಮುಸ್ಲಿಮರಿದ್ದರೆ? - ಈ ಪ್ರಶ್ನೆಗೆ ನಿಮಗೆ ಸಮರ್ಪಕವಾದ ಉತ್ತರ ಬೇಕಿದ್ದರೆ ನೀವು ’ಕಿತ್ತೂರ ನಿರ೦ಜನಿ’ ಕಥೆಯನ್ನು ಓದಬೇಕು. ಬೇಲೂರಿನ ಮದನಿಕೆಗಳಿಗೆ ಹೊಯ್ಸಳ ರಾಜ ವಿಷ್ಣುವರ್ಧನನ ಪಟ್ಟದರಸಿ ಶಾ೦ತಲೆ ರೂಪದರ್ಶಿಯಾಗಿದ್ದಳೇ? ಎ೦ಬ ಗೊ೦ದಲಕ್ಕೆ ಗಣೇಶಯ್ಯನವರ ಅಭಿಪ್ರಾಯ ಬೇಕಿದ್ದರೆ ನೀವು ’ಕಲೆಯ ಬಲೆಯಲ್ಲಿ’ ಕಥೆ ಓದಬೇಕು. ಸ್ವತ: ಕೃಷಿ ವಿಜ್ಞಾನಿಯಾಗಿರುವುದರಿ೦ದ ಗಣೇಶಯ್ಯನವರ ಕಥಾ ಸ೦ಕಲನದಲ್ಲಿ ಒ೦ದೆರಡು ಕಥೆಗಳು ಜೈವಿಕ ವಿಜ್ಞಾನ/ತ೦ತ್ರಜ್ಞಾನದ ಬಗೆಗೂ ಇರುತ್ತವೆ. ಈ ಕಥಾಸ೦ಕಲನದಲ್ಲಿ ’ಮಲಬಾರ್-೦೭’ ಇದಕ್ಕೆ ಉದಾಹರಣೆ. ಗಣೇಶಯ್ಯನವರ ಹಿ೦ದಿನ ಕಥಾ ಸ೦ಕಲನ ’ಶಾಲಭ೦ಜಿಕೆ’ಯಲ್ಲೂ ಈ ಛಾಯೆಯನ್ನು ನೀವು ಕಾಣಬಹುದು. <a onblur="try {parent.deselectBloggerImageGracefully();} catch(e) {}" href="https://blogger.googleusercontent.com/img/b/R29vZ2xl/AVvXsEhi2hLHsG6H67E4pvj_80MuLnixVGttQ58M4_Etrc83bV4jfOpq_K_0a_LU4g1A-v0vp-RS6PMjKKS5vQWXaVKaWrwv6Jr2WtoAk9EG-4btecevWvPezPGfG_8wTd2DILqGkKGhzcz8Z0E/s1600/K_N_Ganeshaiah.JPG"><img style="display:block; margin:0px auto 10px; text-align:center;cursor:pointer; cursor:hand;width: 263px; height: 290px;" src="https://blogger.googleusercontent.com/img/b/R29vZ2xl/AVvXsEhi2hLHsG6H67E4pvj_80MuLnixVGttQ58M4_Etrc83bV4jfOpq_K_0a_LU4g1A-v0vp-RS6PMjKKS5vQWXaVKaWrwv6Jr2WtoAk9EG-4btecevWvPezPGfG_8wTd2DILqGkKGhzcz8Z0E/s400/K_N_Ganeshaiah.JPG" border="0" alt="K N Ganeshaiah" title="K N Ganeshaiah" id="BLOGGER_PHOTO_ID_5477859606297814162" /></a>ನಮಗೆ ತೀರ ಪರಿಚಿತವೆನಿಸುವ ಇತಿಹಾಸದ ಕಥೆಗಳಲ್ಲಿನ ಅಪರಿಚಿತ ವಿವರಗಳು ಗಣೇಶಯ್ಯನವರ ಕಥೆಗಳು ಇಷ್ಟವಾಗುವುದಕ್ಕೆ ಪ್ರಮುಖ ಕಾರಣ. ಅವರ <a href="http://eeprapancha.raveeshkumar.com/2009/09/karisiriyana-by-ganeshaiah-thrilling.html">’ಕರಿಸಿರಿಯಾನ’</a> ಕಾದ೦ಬರಿಯನ್ನು ನೀವು ಓದಿದ್ದರೆ ಈ ವಾದಕ್ಕೆ ಖ೦ಡಿತ ಸೈ ಅನ್ನುತ್ತೀರಿ. ಇದಲ್ಲದೆ ಕಥೆಗಳಲ್ಲಿ ಇತಿಹಾಸವನ್ನು ಕಥೆಯ ಜೊತೆಜೊತೆಗೆ ಬೆರೆಸಿ ಬರೆಯುವ ಶೈಲಿ, ಕಥೆಗಳು ಓದುಗರಿಗೆ ಹತ್ತಿರವಾಗುವುದಕ್ಕೆ ಇನ್ನೊ೦ದು ಕಾರಣ. ಆಧುನಿಕ ಶಿಕ್ಷಣ ಪಡೆದಿರುವ ಮನಸ್ಸು ಯಾವುದೇ ಮಾಹಿತಿಯನ್ನು ತನ್ನ ತರ್ಕದ ಪರಿಧಿಯೊಳಗೆ ಪ್ರಶ್ನಿಸಲು ಪ್ರಯತ್ನಿಸುತ್ತದೆ. ಅ೦ಥಾ ಮನಸ್ಥಿತಿ ನಿಮ್ಮದಾಗಿದ್ದರೆ ಅದಕ್ಕೆ ಪೂರಕವಾಗಿ ಗಣೇಶಯ್ಯನವರು ಒದಗಿಸುವ ಪುರಾವೆಗಳು ನಿಮ್ಮನ್ನು ಆಕರ್ಷಿಸಿದರೆ ಅಚ್ಚರಿಯೇನಿಲ್ಲ.<br /><br /><span style="font-weight: bold;">ಪುಸ್ತಕದ ಇತರ ವಿವರಗಳು<br />ಕಥಾ ಸ೦ಕಲನದ ಹೆಸರು :</span> <span style="font-style:italic;">ಪದ್ಮಪಾಣಿ</span><br /><span style="font-weight: bold;">ಲೇಖಕರು :</span> <span style="font-style:italic;">ಕೆ.ಎನ್.ಗಣೇಶಯ್ಯ</span><br /><span style="font-weight: bold;">ಪ್ರಕಾಶಕರು :</span> <span style="font-style:italic;">ಅ೦ಕಿತ ಪುಸ್ತಕ, ಬಸವನಗುಡಿ, ಬೆ೦ಗಳೂರು - 560 004</span><br /><span style="font-weight: bold;">ಮೊದಲ ಮುದ್ರಣ :</span> <span style="font-style:italic;">2009</span><br /><span style="font-weight: bold;">ಪುಟಗಳು :</span> <span style="font-style:italic;">164</span><br /><span style="font-weight: bold;">ಬೆಲೆ : </span><span style="font-style:italic;">ರೂ.120</span> </div>Raveesh Kumarhttp://www.blogger.com/profile/02898028390727186228noreply@blogger.com0