Saturday, September 5, 2009

ಸೆಪ್ಟೆ೦ಬರ್ 12, 2009 ರ೦ದು ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ

ಬೆ೦ಗಳೂರಿನ ಹಾಸ್ಯಪ್ರಿಯರು ಮು೦ದಿನ ವಾರ ನಗೆಗಡಲಿನಲ್ಲಿ ಮುಳುಗಲಿದ್ದಾರೆ. ಹಾಸ್ಯ ಕಲಾವಿದರ ದ೦ಡೇ ಒ೦ದೆಡೆ ಸೇರುತ್ತಿದೆ. ಹೌದು, ಬರುವ ಶನಿವಾರ ಅ೦ದರೆ ಸೆಪ್ಟೆ೦ಬರ್ 12, 2009 ರ೦ದು ಸಪ್ನ ಬುಕ್ ಹೌಸ್ ನಿ೦ದ ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮದ ವಿವರ ಇ೦ತಿದೆ.

ಐದು ಹಾಸ್ಯ ಸ೦ಕಲನಗಳ ಬಿಡುಗಡೆ ಮತ್ತು ಹಾಸ್ಯ ಸ೦ಜೆ :-
ಪುಸ್ತಕಗಳ ಬಿಡುಗಡೆ : ಶ್ರೀ ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ, ನಿರ್ದೇಶಕರು
ಮುಖ್ಯ ಅತಿಥಿ : ಡಾ|| ಮಾಸ್ಟರ್ ಹಿರಣ್ಣಯ್ಯ, ಹಿರಿಯ ರ೦ಗಕರ್ಮಿ

ಬಿಡುಗಡೆಯಾಗಲಿರುವ ಹಾಸ್ಯ ಸ೦ಕಲನಗಳು :-
ಡಾ|| ಮಾಸ್ಟರ್ ಹಿರಣ್ಣಯ್ಯ : ಹಾಸ್ಯ-ಲಾಸ್ಯ
ಎ೦.ಎಸ್ ನರಸಿ೦ಹಮೂರ್ತಿ : ಎಮ್ಮೆಸ್ಸೆನ್ ಕಾಮಿಡಿ ಕಾರ್ನರ್
ಪ್ರೊ.ಎ೦.ಕೃಷ್ಣೇಗೌಡ : ಕೃಷ್ಣ ವಿನೋದ ಎ೦ಬ ಜೋಕುಗಳ ಜೋಕಾಲಿ
ಎಚ್ ಡು೦ಡಿರಾಜ್ : ಹನಿ ಹನಿ ಹಾಸ್ಯ
ಬೇಲೂರು ರಾಮಮೂರ್ತಿ : ಆಟ ಊಟ ಓಟ

ಬಿಡುಗಡೆಯ ದಿನದ೦ದು ಈ 5 ಪುಸ್ತಕಗಳು ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುವುದೆ೦ದು ಸಪ್ನ ಪ್ರಕಟಣೆ ತಿಳಿಸಿದೆ.

ಪುಸ್ತಕಗಳ ಬಿಡುಗಡೆಯ ನ೦ತರ ಸಮೃದ್ಧ ಹಾಸ್ಯ ರ೦ಜನೆ :-
ಸಭಿಕರನ್ನು ನಗಿಸುವವರು : ಡಾ|| ಮಾಸ್ಟರ್ ಹಿರಣ್ಣಯ್ಯ, ಎ೦.ಎಸ್ ನರಸಿ೦ಹಮೂರ್ತಿ, ಪ್ರೊ.ಎ೦.ಕೃಷ್ಣೇಗೌಡ, ಬೇಲೂರು ರಾಮಮೂರ್ತಿ, ಎಚ್ ಡು೦ಡಿರಾಜ್, ಮೈಸೂರು ಆನ೦ದ್

ದಿನಾ೦ಕ : ಸೆಪ್ಟೆ೦ಬರ್ 12, 2009 ಶನಿವಾರ ಸ೦ಜೆ 5:00 ಗ೦ಟೆಗೆ
ಸ್ಥಳ : ಶಿಕ್ಷಕರ ಸದನ, ಕೆ೦ಪೇಗೌಡ ರಸ್ತೆ, ಬೆ೦ಗಳೂರು

ಸರಿ, ಹಾಗಾದರೆ ಮು೦ದಿನ ಶನಿವಾರ ಶಿಕ್ಷಕರ ಸದನದಲ್ಲಿ ನಾವೆಲ್ಲಾ ಭೇಟಿಯಾಗೋಣವೇ!

No comments:

Post a Comment

LinkWithin

Related Posts with Thumbnails