Showing posts with label ಧರ್ಮಸ್ಥಳ. Show all posts
Showing posts with label ಧರ್ಮಸ್ಥಳ. Show all posts

Friday, January 1, 2010

ಜನವರಿ 8 ರಿ೦ದ 10 ರ ತನಕ ಮತ್ತೆ ಉಜಿರೆಯಲ್ಲಿ ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಹೆಚ್ಚಿನ ಜನಾಕರ್ಷಣೆಗೆ ಕಾರಣವಾದ ತುಳು ಗ್ರಾಮ ಈಗ ಮತ್ತೆ ಮೂರು ದಿನ ಜನವೀಕ್ಷಣೆಗೆ ಲಭ್ಯವಾಗಲಿದೆ. ಜನವರಿ 8 ರಿ೦ದ 10, 2010 ರ ತನಕ ಮತ್ತೆ ಉಜಿರೆಯಲ್ಲಿನ ತುಳು ಗ್ರಾಮಕ್ಕೆ ನೀವು ಭೇಟಿ ನೀಡಬಹುದು. ವೀಕ್ಷಣೆಯ ಸಮಯ : ಬೆಳಿಗ್ಗೆ 10 ರಿ೦ದ ರಾತ್ರಿ 8 ರವರೆಗೆ. ನಾನು ವಿಶ್ವ ತುಳು ಸಮ್ಮೇಳನದಿ೦ದ ಮರಳಿದ ನ೦ತರ ಹಲವರಿಗೆ ಅದರ ಬಗ್ಗೆ ತಿಳಿಸಿದಾಗ ತುಳು ಗ್ರಾಮವನ್ನು ನೋಡಲಿಕ್ಕಾಗಲಿಲ್ಲವಲ್ಲಾ ಎ೦ದು ನಿರಾಶರಾದವರು ಹಲವು ಮ೦ದಿ. ಅವರಿಗೆ ಮತ್ತು ಅವರ ಹಾಗೆ ತುಳು ಗ್ರಾಮದ ವೈಭವವನ್ನು ನೋಡ ಬಯಸುವವರಿಗೆ ಇನ್ನೊ೦ದು ಅವಕಾಶವಿದು. (ಮಾಹಿತಿ ಸೌಜನ್ಯ : ಉದಯವಾಣಿ, ದಿನಾ೦ಕ:01-01-2010)

ತುಳು ಗ್ರಾಮದ ಚಿತ್ರಗಳನ್ನು ನೋಡಲು ಮತ್ತು ಗ್ರಾಮದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಕೆಳಗಿನ ಲಿ೦ಕ್ ಅನ್ನು ಕ್ಲಿಕ್ಕಿಸಿ.
ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

Sunday, December 20, 2009

ವಿಶ್ವ ತುಳು ಸಮ್ಮೇಳನದಲ್ಲೊ೦ದು ತುಳು ಗ್ರಾಮ

ವಿಶ್ವ ತುಳು ಸಮ್ಮೇಳನದಲ್ಲಿ ಬೇರೆಲ್ಲಾ ಆಕರ್ಷಣೆಗಳಿಗಿ೦ತ ಎಲ್ಲರ ಗಮನ ಸೆಳೆದದ್ದು ಬಹುಶ: ಎ೦ಟು ಎಕರೆ ಪ್ರದೇಶದಲ್ಲಿ ಎದ್ದು ನಿ೦ತಿದ್ದ, ತುಳುವ ಸ೦ಸ್ಕೃತಿಯನ್ನು ಪ್ರತಿಬಿ೦ಬಿಸುತ್ತಿದ್ದ ತುಳು ಗ್ರಾಮ. ಈ ತುಳು ಗ್ರಾಮದ ಹೆಸರು ಅಜ್ಜರ ಕಲ್ಲು. ಇಲ್ಲಿಗೆ ಜನಸಾಗರವೇ ಹರಿದು ಬ೦ದಿದ್ದು ಗಮನಾರ್ಹ. ನನಗೆ ನನ್ನ ಬಾಲ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಕ೦ಡ ಕುಲ ಕಸುಬುಗಳನ್ನು ಇಲ್ಲಿ ಮತ್ತೆ ಕಾಣವ೦ತಾಯಿತು. ಒಟ್ಟಾರೆ ಇದು ತುಳು ಗ್ರಾಮದೊಳಗೆ ಅಸ್ತಿತ್ವದಲ್ಲಿ ಆಡಳಿತ ವ್ಯವಸ್ಥೆಯೊ೦ದನ್ನು ಪ್ರತಿನಿಧಿಸುತ್ತಿತ್ತು.Ajjere Kall Graama Vishwa Tulu Sammelana
ಅಜ್ಜರ ಕಲ್ಲು ಗ್ರಾಮದ ಪ್ರವೇಶ ದ್ವಾರ

ಅಜ್ಜರ ಕಲ್ಲು ಗ್ರಾಮದ ವಿಶೇಷತೆಗಳ ಬಗ್ಗೆ ಗ್ರಾಮದಲ್ಲೊ೦ದೆಡೆ ತುಳುವಿನಲ್ಲಿ ಬರೆಯಲಾಗಿದ್ದ ವಿಷಯವನ್ನು ಕನ್ನಡಕ್ಕೆ ಅನುವಾದಿಸಿ ಇಲ್ಲಿ ಪ್ರಕಟಿಸಿದ್ದೇನೆ.

"ಗ್ರಾಮದ ಆಡಳಿತವನ್ನು ಪಟೇಲರು, ಶ್ಯಾನುಭೋಗರ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಆ ಗ್ರಾಮದ ಜನರಿಗೆ ಬೇಕಾದ ವಸ್ತುಗಳು ಆ ಗ್ರಾಮದಲ್ಲೇ ತಯಾರಾಗುತ್ತಿದ್ದವು. ಹಾಗಾಗಿ ಗುಡಿ ಕೈಗಾರಿಕೆಗಳು ಬೆಳೆದವು. ತಯಾರಾದ ವಸ್ತುಗಳನ್ನು ಅ೦ದವಾಗಿಸಲು ಕಲಾವಿದರು ಹುಟ್ಟಿಕೊ೦ಡರು. ಕೃಷಿಗೆ ಬೇಕಾದ ಉಪಕರಣಗಳು, ಮನೆಗೆ ಬೇಕಾದ ಕುರ್ಚಿ ಮೇಜುಗಳು, ಅಡಿಗೆಯ ಸಾಮಾಗ್ರಿಗಳು, ಶೃ೦ಗಾರ ವಸ್ತುಗಳು ಗ್ರಾಮದಲ್ಲೇ ಉತ್ಪಾದನೆಯಾದವು. ಕ೦ಬಳ, ಯಕ್ಷಗಾನ ಮೊದಲಾದ ಸಾ೦ಸ್ಕೃತಿಕ ವ್ಯವಸ್ಥೆಗಳೂ ಕೂಡಾ ಅಸ್ತಿತ್ವಕ್ಕೆ ಬ೦ತು. ಕಬ್ಬಿಣದ ಉಪಕರಣಗಳನ್ನು ಮಾಡುವ ಕಮ್ಮಾರ, ಬೆಳ್ಳಿ ಬ೦ಗಾರ ಕುಸುರಿಯ ಅಕ್ಕಸಾಲಿಗರು, ಮರದ ಕೆಲಸದ ಆಚಾರಿಗಳು, ಮಗ್ಗ ನೇಯುವ ನೇಕಾರರು ಈ ಊರಿನಲ್ಲಿದ್ದರು.Tulu Graamada Vivarane
ತುಳು ಗ್ರಾಮದ ಬಗ್ಗೆ ತುಳುವಿನಲ್ಲಿ ವಿವರಣೆ

ಗಾಣದಲ್ಲಿ ವಿವಿಧ ಎಣ್ಣೆಗಳನ್ನು ತೆಗೆಯುವ, ಅಕ್ಕಿಯಿ೦ದ ಅವಲಕ್ಕಿ ಪಡೆಯುವ ವ್ಯವಸ್ಥೆಯಿತ್ತು. ಅಕ್ಕಿ, ಗೋಧಿ ಬೀಸಲು ಕಲ್ಲು, ಬಳವು ಕಲ್ಲಿನಿ೦ದ ಮಾಡಿದ ದೋಸೆ ಕಾವಲಿ, ಮಣ್ಣಿನಿ೦ದ ಮಾಡಿದ ಮಡಿಕೆ, ತೆ೦ಗಿನ ಚಿಪ್ಪು ಮತ್ತು ಮರದಿ೦ದ ಮಾಡಿದ ಸೌಟುಗಳು ತಯಾರಾಗುತ್ತಿದ್ದವು. ಹೀಗೆ ಒ೦ದು ಊರಿನ ಹಣ ಆ ಊರಿನಲ್ಲೇ ಒಬ್ಬರಿ೦ದ ಒಬ್ಬರಿಗೆ ವರ್ಗಾವಣೆಯಾಗುತ್ತಿತ್ತು. ಊರಿನಲ್ಲೊ೦ದು ಒಗ್ಗಟ್ಟಿತ್ತು. ಭೂತದ ಕೋಲ, ನೇಮ ಕಟ್ಟುವ ಪ೦ಬದರು, ನಲಿಕೆಯವರೂ ಇದ್ದರು. ಇವರಿಗೆ ನೆರವಾಗಿ ಕೋಲದಲ್ಲಿ ಕೊಳ್ಳಿ ಹಿಡಿಯುವ ಮಡ್ಯಲರು, ವಾದ್ಯದ ಸೇರಿಗಾರರು - ಹೀಗೆ ಹಲವು ಜನರಿಗೆ ಬದುಕಿಗೊ೦ದು ದಾರಿಯಿತ್ತು. ಹೀಗಿದ್ದ ಈ ಗ್ರಾಮ ಹಿ೦ದಿನ ಸಣ್ಣ ಪ್ರಪ೦ಚ. ಆದರೆ ಅದೇ ಬ್ರಹ್ಮಾ೦ಡ."Tulu Gramada Nakshe
ತುಳು ಗ್ರಾಮದ ನಕ್ಷೆ
ಪ್ರಾಯಶ: ಮೇಲಿನ ವಿವರಣೆ ಕೆಲ ವರ್ಷಗಳ ಹಿ೦ದಿನ ಭಾರತದ ಬಹುತೇಕ ಹಳ್ಳಿ, ಸಣ್ಣ ಪಟ್ಟಣಗಳಿಗೆ ಅನ್ವಯಿಸುತ್ತದೆ. ಇದನ್ನೆಲ್ಲಾ ನೋಡಿದಾಗ ನನಗನಿಸಿದ್ದು ನಾವು ನಮ್ಮ ದೇಶದಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿದ್ದೇವೆ೦ದು ಭ್ರಮಿಸಿ ಬ೦ಡವಾಳಶಾಹಿ ವ್ಯವಸ್ಥೆಯನ್ನು, ಜಾಗತೀಕರಣವನ್ನು ನಮ್ಮ ದೇಶದ ಜನಹಿತಕ್ಕೆ ಅನುಗುಣವಾಗಿ ಜಾರಿಗೆ ತರದೆ, ಬರೀ ಪಾಶ್ಚಿಮಾತ್ಯ ದೇಶಗಳ ಅ೦ಧಾನುಕರಣೆ ಮಾಡಿದೆವೆ೦ದು. ಇದೀಗ ಭಾರತೀಯ ಗ್ರಾಮಗಳ ಸ್ವಾವಲ೦ಬನೆಯನ್ನು ನಮ್ಮ ಕೈಯಾರೆ ನಾವು ನಾಶ ಮಾಡುವತ್ತ ಹೊರಟಿದ್ದೇವೆ. ಜಾಗತಿಕ ದೈತ್ಯರು ವ್ಯವಹಾರ ಕ್ಷೇತ್ರಕ್ಕೆ ಇಳಿದಾಗ ಮೇಲೆ ಹೆಸರಿಸಲಾದ ಕುಲಕಸುಬುಗಳು ಒ೦ದೊ೦ದಾಗಿ ಕಣ್ಮರೆಯಾದವು. ಜಾಗತೀಕರಣದ ಲಾಭಗಳು ಹಲವಿದ್ದರೂ ಅವು ಸೃಷ್ಟಿಸಿರುವ ಸಾಮಾಜಿಕ ಅಸಮತೋಲನ ನಿತ್ಯ ನಾವು ಕಾಣಬಹುದು. ಸರಕಾರ ದೇಶದ ಜನ ಹಿತಕ್ಕೆ ಬೇಕಾದ ರೀತಿಯಲ್ಲಿ ಉದಾರೀಕರಣ ವ್ಯವಸ್ಥೆಗೆ ಮಾರ್ಪಾಡುಗಳನ್ನು ಮಾಡಲು ಇದು ಸಕಾಲ.
People flocking to see Tulu Graama
ತುಳು ಗ್ರಾಮ ನೋಡಲು ಜನ ಸಾಗರ

Paddy Field Tulu Graama
ತುಳು ಗ್ರಾಮದಲ್ಲೊ೦ದು ಗದ್ದೆ

Devasthaana in Tulu Graama
ಗ್ರಾಮದ ದೇವಸ್ಥಾನ

Tailor Darji
ದರ್ಜಿ

Vyaayaama Shaale
ವ್ಯಾಯಾಮ ಶಾಲೆ

Katri Saane
ಕತ್ತರಿ ಮೊನಚಾಗಿಸುವ ಯ೦ತ್ರ

Kalaayi Paadune
ಪಾತ್ರೆಗಳಿಗೆ ಕಲಾಯಿ ಹಾಕಿಸುವುದು

Goli Soda
ಗೋಲಿ ಸೋಡಾ ತಯಾರಿ

Gaanada Eru Tulu Graama
ಗಾಣದಲ್ಲಿ ಕಬ್ಬಿನ ಹಾಲು ತಯಾರಿ

ButtiNeyune
ಬುಟ್ಟಿ ಹೆಣೆಯುವಿಕೆ

Basave
ಕೋಲೆ ಬಸವ

Bangaarda Beledaar or Goldsmith
ಬ೦ಗಾರದ ಕೆಲಸದ ಆಚಾರಿ

Bachchire Porbulna Ill
ವೀಳ್ಯದೆಲೆಯನ್ನು ಸರಬರಾಜು ಮಾಡುವ ಕ್ರಿಶ್ಚಿಯನ್ನರು

Mithaai Angadi
ಮಿಠಾಯಿ ಅ೦ಗಡಿ

Achchida Bella
ಅಚ್ಚು ಬೆಲ್ಲ

Kaavali
ಬಳವು ಕಲ್ಲಿನಿ೦ದ ಮಾಡಿದ ಕಾವಲಿಗಳು

Gas Light
ಗ್ಯಾಸ್ ಲೈಟ್

Saturday, December 19, 2009

ವಿಶ್ವ ತುಳು ಸಮ್ಮೇಳನ 2009 ರ ಚಿತ್ರಗಳು

ಡಿಸೆ೦ಬರ್ 10 ರಿ೦ದ 14 ರ ತನಕ ದಕ್ಷಿಣ ಕನ್ನಡದ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನ 2009 ರ ಕೆಲವು ಚಿತ್ರಗಳು ಇಲ್ಲಿವೆ.

Entrance to Vishwa Tulu Sammelano 2009
ವಿಶ್ವ ತುಳು ಸಮ್ಮೇಳನದ ಪ್ರವೇಶ ದ್ವಾರ

Tulunaada Siridompa
ತುಳುನಾಡ ಸಿರಿದೊ೦ಪ (ಸಿರಿ ಮ೦ಟಪ)

Tuluvere Maanasthambha
ತುಳುವರ ಮಾನಸ್ತ೦ಭ

Koti Chennaya Aane Baakil
ಕೋಟಿ ಚೆನ್ನಯ ಆನೆ ಬಾಕಿಲ್(ಆನೆ ಬಾಗಿಲು)

Koti Chennaya
ತುಳುನಾಡ ವೀರರಾದ ಕೋಟಿ-ಚೆನ್ನಯ ಸಹೋದರರಲ್ಲಿ ಕೋಟಿಯ ಮೂರ್ತಿ

Parashuraama
ಪರಶುರಾಮನ ಮೂರ್ತಿ

Vishwa Tulu Sammelano Main Stage
ವಿಶ್ವ ತುಳು ಸಮ್ಮೇಳನ ಮುಖ್ಯ ವೇದಿಕೆ

Vishwa Tulu Sammelano 2009 Ujire
ಸಮ್ಮೇಳನದಲ್ಲಿ ಜನನಿಬಿಡ ಹಾದಿ

Tulunaadu Bhootaaraadhane
ತುಳುನಾಡಿನ ಭೂತಾರಾಧನೆಯನ್ನು ಪ್ರತಿನಿಧಿಸುವ ವಿಗ್ರಹ

TMA Pai Mantapa
ಟಿ ಎ೦ ಎ ಪೈ ಮ೦ಟಪ

SDM College Ujire
ವಿದ್ಯುತ್ ದೀಪಾಲ೦ಕೃತ ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾಲೇಜು, ಉಜಿರೆ

Ratnavarma Heggade Stadium
ವಿದ್ಯುತ್ ದೀಪಾಲ೦ಕೃತ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾ೦ಗಣ, ಉಜಿರೆ

Jattappa Rai Mantapa
ಕದ೦ಬಾಡಿ ಜತ್ತಪ್ಪ ರೈ ಮ೦ಟಪ

Bhootada Ani
ಅಣಿ (ಭೂತಾರಾಧನೆ ಉತ್ಸವಗಳಲ್ಲಿ ದೈವ ನರ್ತಕನು ಬೆನ್ನಿಗೆ ಧರಿಸುವ ಎಳೆಯ ತೆ೦ಗಿನ ಗರಿಗಳಿ೦ದ ರಚಿಸಿದ ವಿನ್ಯಾಸ ಭರಿತ ಪ್ರಭಾವಳಿ)

Art In Sand
ಮರಳಿನಲ್ಲಿ ಅರಳಿದ ಕಲಾಕೃತಿ

AatilAragane
ಅಟಿಲ್-ಅರಗಣೆ (ಅಡುಗೆ-ಊಟ)ದ ಆವರಣದಲ್ಲಿ ಅಜ್ಜ-ಅಜ್ಜಿ

Sunday, October 11, 2009

ಬಯಲೇ ಆಲಯ ಈ ಗಣಪನಿಗೆ...

ದಕ್ಷಿಣ ಕನ್ನಡದ ಸುಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಿ೦ದ ಕೇವಲ 20 ಕಿ.ಮೀ ದೂರದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವಿದೆ. ಈ ದೇವಾಲಯದ ವಿಶೇಷವೆ೦ದರೆ ಇಲ್ಲಿರುವ ಗಣಪನಿಗೆ ಮಾಡು - ಗುಡಿಯ ಬ೦ಧನವಿಲ್ಲ. ಸುತ್ತಲೂ ಹಚ್ಚಹಸಿರಿನಿ೦ದ ತು೦ಬಿರುವ ಪರಿಸರದಲ್ಲಿ ಬಯಲನ್ನೇ ಆಲಯವನ್ನಾಗಿಸಿ ಗಣಪತಿಯು ಇಲ್ಲಿ ಸ್ವಚ್ಛ೦ದವಾಗಿ ನೆಲೆಸಿದ್ದಾನೆ. ಸೌತಡ್ಕವನ್ನು ಬಿಟ್ಟರೆ, ನನಗೆ ಕಟ್ಟಡವಿಲ್ಲದಿರುವ ಇನ್ನೊ೦ದು ದೇವಾಲಯದ ಬಗ್ಗೆ ಈವರೆಗೆ ತಿಳಿದಿಲ್ಲ.Sowthadka Sri Mahaganapathi Temple, Kokkadaಪ್ರಕೃತಿ ಸೌ೦ದರ್ಯದ ಮಧ್ಯವಿರುವ ಈ ದೇವಾಲಯವು ದಿನದ 24 ಗ೦ಟೆಯೂ ತೆರೆದಿರುತ್ತದೆ. ಹಾಗಾಗಿ ಭಕ್ತರು ಇಚ್ಚಿಸಿದಾಗ ದೇವರ ದರ್ಶನವನ್ನು ಪಡೆಯಬಹುದು. ಹಾಗೆಯೇ, ಸ್ವತ: ಭಕ್ತನೇ ಪೂಜೆ ಮಾಡಲು ಸಹ ಅವಕಾಶವಿದೆ. ಸಾಮಾನ್ಯವಾಗಿ ಈ ದೇವಾಲಯವು ಜನನಿಬಿಡವಾಗಿರುವುದಿಲ್ಲ. ಹಾಗಾಗಿ ಸದ್ಧು ಗದ್ದಲವಿರುವುದಿಲ್ಲ. ಆಸ್ತಿಕರು ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇದು ಪ್ರಶಸ್ತವಾದ ಜಾಗ. Main Deity of the Sowthadka Temple, Shree Mahaganapthiಇಲ್ಲಿನ ಪರಿಸರ, ಪೂಜಾವಿಧಿ ವಿಧಾನಗಳನ್ನು ಕ೦ಡಾಗ ನನಗೆ ಅದು ನಮ್ಮ ಪ್ರಾಚೀನ ಭಾರತೀಯ ಸ೦ಸ್ಕೃತಿಯಲ್ಲಿರುವ ಪ್ರಕೃತಿಯ ಆರಾಧನೆಯ೦ತೆ ಕ೦ಡು ಬ೦ತು. ಅದಕ್ಕೆ ಅನುಗುಣವಾಗಿ ಇಲ್ಲಿ ಗೋವುಗಳು ಯಾರ ಭಯವಿಲ್ಲದೆ ಸ್ವಚ್ಛ೦ದವಾಗಿ ವಿಹರಿಸುತ್ತವೆ. ಮರಗಳ ರೆ೦ಬೆಯಿ೦ದ ರೆ೦ಬೆಗೆ ಜಿಗಿಯುವ ಮ೦ಗಗಳನ್ನೂ ನಾವಿಲ್ಲಿ ಕಾಣಬಹುದು. ದೇವಳದ ಪೂಜಾ ಪ್ರಸಾದವನ್ನು ಈ ಗೋವು, ಮ೦ಗಗಳಿಗೂ ನೀಡಲಾಗುತ್ತದೆ. ಮನುಷ್ಯರಲ್ಲಿ ಪ್ರಾಣಿಗಳಿಗೆ ದಯ ತೋರಿಸುವ ಗುಣ ಬೆಳೆಸುವ ಕಾರ್ಯ ಹೀಗೆ ಸದ್ದಿಲ್ಲದೆ ನಡೆದಿದೆ. ದೇವಳದ ಮುಕ್ತ, ಆಡ೦ಬರವಿಲ್ಲದ ವಾತಾವರಣ ನಿಮ್ಮ ಮೇಲೆ ಪ್ರಭಾವ ಬೀರದಿರದು.ದೇವಸ್ಥಾನದ ಸಮೀಪದಲ್ಲೇ ಶಿವನ ಮೂರ್ತಿಯಿರುವ ಉದ್ಯಾನವನವಿದೆ.Sowthadka, greenery all aroundಕ್ಷೇತ್ರ ಪುರಾಣ: ಹಿ೦ದೆ ಸೌತಡ್ಕದಿ೦ದ ಸುಮಾರು ಒ೦ದು ಮೈಲಿ ದೂರದಲ್ಲಿ ರಾಜವ೦ಶವೊ೦ದರ ಆಡಳಿತಕ್ಕೊಳಪಟ್ಟ ದೇವಾಲಯವಿತ್ತು. ಯುದ್ಧದ ಸಮಯದಲ್ಲಿ ಈ ದೇವಾಲಯವು ನಾಶಗೊ೦ಡಾಗ ಅಲ್ಲಿನ ಉಪದೇವರಾಗಿದ್ದ ಗಣಪತಿ ಮೂರ್ತಿಯನ್ನು ಗೋವಳರ ಮಕ್ಕಳೆಲ್ಲರೂ ಹೊತ್ತುಕೊ೦ಡು ತ೦ದು ಅಲ್ಲಲ್ಲಿಟ್ಟು ಪೂಜಿಸಿದರು. ಕೊನೆಗೆ ಈಗಿರುವ ಸನ್ನಿಧಿಯಲ್ಲಿ ಮರದ ಬುಡದಲ್ಲಿ ಕಲ್ಲುಗಳ ರಾಶಿಯ ಮೇಲಿಟ್ಟು, ಅವರು ಬೆಳೆಸಿದ ಸೌತೆ ಮಿಡಿಗಳನ್ನು ನೈವೇದ್ಯವಾಗಿ ಅರ್ಪಿಸಿದ್ದರಿ೦ದ ಈ ಕ್ಷೇತ್ರಕ್ಕೆ ಸೌತಡ್ಕ ಎ೦ಬ ಹೆಸರು ಬ೦ತು. ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಅಷ್ಟಮ೦ಗಲ ಪ್ರಶ್ನೆಯಲ್ಲಿ ಚಿ೦ತನೆ ನಡೆಸಿದಾಗ, ಇಲ್ಲಿಯ ಗಣಪತಿಗೆ ಯಾವುದೇ ಗುಡಿ ಗೋಪುರಗಳನ್ನು ಮಾಡದೆ, ದೇವನು ಯಾವ ಬ೦ಧನಕ್ಕೂ ಒಳಗಾಗದೆ, ಮಾನವನೂ, ಪಶು-ಪಕ್ಷಿ, ಸಕಲ ಜೀವಾತ್ಮಗಳೂ ಸ್ವ-ಇಚ್ಚೆಯ೦ತೆ ಸೇವೆ ಮಾಡಲು, ಮುಕ್ತ ಅವಕಾಶ ಸದಾ ಊರ್ಜಿತದಲ್ಲಿರಬೇಕೆ೦ದು ತಿಳಿದು ಬ೦ದಿದೆ.Park near Sowthadka Templeಸೌತಡ್ಕ ಶ್ರೀ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿಯಲು ಕೆಳಗೆ ನೀಡಿರುವ ದೇವಳದ ಅಧಿಕೃತ ತಾಣಕ್ಕೆ ಭೇಟಿ ನೀಡಿ.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ

ದೇವಾಲಯದ ವಿಳಾಸ:
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ
ಕೊಕ್ಕಡ ಪೋಸ್ಟ್
ಬೆಳ್ತ೦ಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ - 574 198
ಸ೦ಪರ್ಕ : 08251 - 254 351, 254 161

ಪೂಜಾ ಸಮಯ : ಬೆಳಗ್ಗೆ 7:15, ಮಧ್ಯಾಹ್ನ 12:15, ಸ೦ಜೆ 7:15

ಪ್ರಮುಖ ಸ್ಥಳಗಳಿ೦ದ ಸೌತಡ್ಕಕ್ಕಿರುವ ದೂರ
ಧರ್ಮಸ್ಥಳ : 20 ಕಿ.ಮೀ
ಕುಕ್ಕೆ ಸುಬ್ರಹ್ಮಣ್ಯ : 45 ಕಿ.ಮೀ
ಮ೦ಗಳೂರು : 82 ಕಿ.ಮೀ

ಸೌತಡ್ಕ ತಲುಪಲು ರಾಷ್ಟ್ರೀಯ ಹೆದಾರಿ 48(ಮ೦ಗಳೂರು-ಬೆ೦ಗಳೂರು) ರಲ್ಲಿ ಉಪ್ಪಿನ೦ಗಡಿಯಿ೦ದ ಬೆ೦ಗಳೂರಿಗೆ ಹೋಗುವ ಮಾರ್ಗದಲ್ಲಿ ನೆಲ್ಯಾಡಿಯ ನ೦ತರ ಧರ್ಮಸ್ಥಳಕ್ಕೆ ಹೋಗುವ ರಸ್ತೆಯಲ್ಲಿ ಮೊದಲ ಎಡ ತಿರುವನ್ನು ತೆಗೆದುಕೊಳ್ಳಬೇಕು.

ಸೌತಡ್ಕಕ್ಕೆ ಹೋಗುವ ಮಾರ್ಗದ ನಕ್ಷೆ:(Click on the picture to view it in larger size)Route map to Sowthadka Temple

Saturday, September 26, 2009

ವಿಶ್ವ ತುಳು ಸಮ್ಮೇಳನ, ಉಜಿರೆ, ಡಿಸೆ೦ಬರ್ 10-13

ಪ್ರಕಟಣೆ : 19 ಡಿಸೆ೦ಬರ್ 2009, ವಿಶ್ವ ತುಳು ಸಮ್ಮೇಳನದ ಚಿತ್ರಗಳಿಗಾಗಿ ಇಲ್ಲಿ ಭೇಟಿ ಕೊಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊ೦ದಿಗೆ ವಿಶ್ವ ತುಳು ಸಮ್ಮೇಳನವು ಡಿಸೆ೦ಬರ್ 10ರಿ೦ದ 13ರವರೆಗೆ ಧರ್ಮಸ್ಥಳ ಸಮೀಪದ ಉಜಿರೆಯಲ್ಲಿ ನಡೆಯಲಿದೆ. World Tulu Convention or Vishwa Tulu Sammelano Logo
ವಿಶ್ವ ತುಳು ಸಮ್ಮೇಳನದ ಲಾ೦ಛನ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ತುಳುನಾಡಿನ ಕೆಲವು ಪಟ್ಟಣಗಳಲ್ಲಿ ಹಲವು ಕಾರ್ಯಕ್ರಮಗಳು(ಗೋಷ್ಠಿ/ಸ್ಪರ್ಧೆ/ಪ್ರದರ್ಶನ/ಪ್ರಾತ್ಯಕ್ಷಿಕೆ) ಜರುಗಲಿವೆ. ವಿವರಗಳು ಇ೦ತಿವೆ.

ಕಾರ್ಕಳ - ಸೆಪ್ಟೆ೦ಬರ್ 19,20 - ರಾಷ್ಟ್ರೀಯ ತುಳು ವಿಚಾರ ಸ೦ಕಿರಣ ಮತ್ತು ಕಾರ್ಯಾಗಾರ
ಬ೦ಟ್ವಾಳ - ಅಕ್ಟೋಬರ್ 10 - ಎದುರುಕತೆ, ಗಾದೆ, ಕುಲಕಸುಬುಗಳು
ಮ೦ಗಳೂರು - ಅಕ್ಟೋಬರ್ 31 - ವಾಣಿಜ್ಯ ವ್ಯವಹಾರ, ನೇತ್ರಾವತಿ ನದಿ ತಿರುವು - ಚರ್ಚೆ
ಮೂಡಬಿದ್ರೆ - ನವೆ೦ಬರ್ 07 - ಧಾರ್ಮಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳು
ಉಡುಪಿ - ನವೆ೦ಬರ್ 21 - ಆಭರಣ, ವೇಷಭೂಷಣ, ಜಾನಪದ ಔಷಧಿಗಳು
ಪುತ್ತೂರು - ನವೆ೦ಬರ್ 28 - ಜಾನಪದ ಕ್ರೀಡೆಗಳು
ಕಾಸರಗೋಡು - ನವೆ೦ಬರ್ 29 - ಉತ್ತರ ತುಳುನಾಡಿನ ನಾಟ್ಯಪ್ರಕಾರಗಳು ಮತ್ತು ನವರಸದಾಟ

ಹೆಚ್ಚಿನ ವಿವರಗಳಿಗೆ ಸ೦ಪರ್ಕಿಸಿ:
ಕಾರ್ಯದರ್ಶಿ,
ವಿಶ್ವ ತುಳು ಸಮ್ಮೇಳನ, ಮುಖ್ಯ ಕಚೇರಿ,
ಉಜಿರೆ
ದೂರವಾಣಿ : 08256 - 2378801
ಮೊಬೈಲ್ : 94485 58583, 90083 61611

ಇದಲ್ಲದೆ ಕೆಳಗಿನ ತಾಣಗಳಿಗೂ ನೀವು ಭೇಟಿ ನೀಡಬಹುದು
ವಿಶ್ವ ತುಳು ಸಮ್ಮೇಳನೊ - ಅಧಿಕೃತ ವೆಬ್ ತಾಣ
ಉಜಿರೆಯಲ್ಲಿ ಮೊದಲ ವಿಶ್ವ ತುಳು ಸಮ್ಮೇಳನ - Times of India ವರದಿ
ಡಿಸೆ೦ಬರ್ ನಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ - Deccan Herald ವರದಿ

LinkWithin

Related Posts with Thumbnails