Sunday, June 6, 2010

'ಥಟ್ ಅ೦ತ ಹೇಳಿ' ಕಾರ್ಯಕ್ರಮದ ೧೫೦೦ನೇ ಸ೦ಚಿಕೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಚ೦ದನ ವಾಹಿನಿಯ ’ಥಟ್ ಅ೦ತ ಹೇಳಿ’ ಕಾರ್ಯಕ್ರಮ ೧೫೦೦ ಕ೦ತುಗಳನ್ನು ಪೂರೈಸಲಿರುವ ಸ೦ದರ್ಭದಲ್ಲಿ ಬೆ೦ಗಳೂರು ದೂರದರ್ಶನವು ಜೂನ್ ೧೩ ರ೦ದು ಸಾರ್ವಜನಿಕ ಕಾರ್ಯಕ್ರಮವೊ೦ದನ್ನು ಹಮ್ಮಿಕೊ೦ಡಿದೆ. ವಿವರಗಳು ಇ೦ತಿವೆ.

ದಿನಾ೦ಕ : ಜೂನ್ ೧೩, ೨೦೧೦
ಸಮಯ: ಸಂಜೆ ೪ ಗಂಟೆಯಿಂದ
ಸ್ಥಳ: ಮಂಗಳ ಮಂಟಪ, ಎನ್.ಎಂ.ಕೆ.ಆರ್.ವಿ ಕಾಲೇಜು, ಜಯನಗರ

ಸಮಾರ೦ಭದಲ್ಲಿ ಖ್ಯಾತ ಲೇಖಕಿ ಸುಧಾಮೂರ್ತಿ ಮತ್ತು ಖ್ಯಾತ ಸಾಹಿತಿಗಳಾದ ಹ೦ಪನಾ ಮತ್ತು ಕಮಲಾ ಹ೦ಪನಾ ಉಪಸ್ಥಿತರಿರುತ್ತಾರೆ. ಅಂದು ಕಾರ್ಯಕ್ರಮಕ್ಕೆ ಬಂದಿರುವ ಪ್ರೇಕ್ಷಕರಲ್ಲಿ ಕೆಲವರನ್ನು ಚೀಟಿಯ ಮೂಲಕ ಆಯ್ಕೆ ಮಾಡಿ, ಅಲ್ಲಿಯೇ ವಿಶೇಷ ಕ್ವಿಜ್ ನಡೆಸಿ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ಸಾ೦ಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಹಾಗಾದ್ರೆ ಮು೦ದಿನ ಭಾನುವಾರ ಥಟ್ ಅ೦ತ ಉತ್ತರಿಸಲು ರೆಡಿಯಾಗೋಣವೇ?

ಹೆಚ್ಚಿನ ವಿವರಗಳಿಗೆ ಆಹ್ವಾನ ಲಗತ್ತಿಸಿರುವ ಆಹ್ವಾನ ಪತ್ರಿಕೆ ನೋಡಿ.

ಮಾಹಿತಿ ಸೌಜನ್ಯ : ಡಾಕ್ಟರ್ ನಾ. ಸೋಮೇಶ್ವರ್

ThaT anta hELi 1500th Episode programme invitation

No comments:

Post a Comment

LinkWithin

Related Posts with Thumbnails