Friday, December 31, 2010

ಕನಸೆ೦ಬೋ ಕುದುರೆಯನೇರಿ...

ಕಥಾಹ೦ದರ : ಮನುಷ್ಯರು ಸಾವನ್ನು ನೋಡುವ ದೃಷ್ಟಿಕೋನಗಳು ಹೇಗಿರುತ್ತವೆ ಎ೦ಬುದನ್ನು ಸೃಜನಾತ್ಮಕವಾಗಿ ನೋಡುಗರ ಮು೦ದಿಡುವ ಪ್ರಯತ್ನ ಕಾಸರವಳ್ಳಿಯವರ ಹೊಸ ಚಿತ್ರ - ’ಕನಸೆ೦ಬೋ ಕುದುರೆಯನೇರಿ’. ನಾನು ಈ ಚಿತ್ರಕ್ಕೆ ಮೂಲ ಕಥೆಯಾಗಿರುವ ಅಮರೇಶ್ ನುಗಡೋಣಿಯವರ ಸವಾರಿ ಕಥೆ ಓದಿದ್ದೆ, ಹಿಡಿಸಿತ್ತು. ಆದರೆ ಇಲ್ಲಿ ಮೂಲ ಕಥೆಗೆ ಮಾರ್ಪಾಡು ಮಾಡಲಾಗಿದೆ. ಹಿ೦ದಿನ ಗಿರೀಶ್ ಚಿತ್ರಗಳ೦ತೆ(ಉದಾ : ನಾಯಿ ನೆರಳು) ಇಲ್ಲಿಯೂ ನಿರ್ದೇಶಕರು ತಮ್ಮ ವೈಚಾರಿಕ ದೃಷ್ಟಿಯನ್ನೇ ಮು೦ದಿರಿಸಿದ್ದಾರೆ.

ಚಿತ್ರದ ಪ್ರಮುಖಾ೦ಶ : ಚಿತ್ರ ಪ್ರಾರ೦ಭವಾಗುವಾಗ ಒ೦ದು ಮಾತಿನ ಪ್ರಸ್ತಾಪವಾಗುತ್ತದೆ - ’ಒ೦ದು ಕಥೆಗೆ ಆರ೦ಭ, ನಿರ್ದಿಷ್ಟ ಪಥ ಮತ್ತು ಕೊನೆ ಇರಬೇಕು. ಆದರೆ ಅವು ಇದೇ ಕ್ರಮದಲ್ಲಿ ಇರಬೇಕೆ೦ದೇನಿಲ್ಲ.’ ಈ ಮಾತು ಚಿತ್ರ ನೋಡಿದಾಗ ಸ್ಪಷ್ಟವಾಗುತ್ತದೆ. ಸುಮಾರು 3 ದಿನಗಳ ಅವಧಿಯಲ್ಲಿ ನಡೆಯುವ ಕಥೆಯ ದೃಶ್ಯಗಳನ್ನು ಅನುಕ್ರಮವಾಗಿ ತೋರಿಸಲಾಗಿಲ್ಲ. ಹಾಗೆಯೇ ಒ೦ದೇ ದೃಶ್ಯವನ್ನು ವಿಭಿನ್ನ ಕೋನಗಳಲ್ಲಿ ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಗಿದೆ. ಮೂಲ ಕಥೆ ಓದಿರುವವರಿಗೆ ಮತ್ತು ಬರೀ ಚಿತ್ರವನ್ನು ನೋಡಲು ಬ೦ದವರಿಗೂ ಕೂಡಾ ಮೊದಮೊದಲು ಇದರಿ೦ದ ಗೊ೦ದಲವಾಗಬಹುದು. ಕಥೆಯ ಗ್ರಹಿಕೆ ನಮ್ಮ ಹಿಡಿತದಲ್ಲಿಲ್ಲವಲ್ಲಾ ಎ೦ದೂ ಅನಿಸಬಹುದು. ಚಿತ್ರವನ್ನು ಇನ್ನೊಮ್ಮೆ ನೋಡಲು ಪ್ರೇರೇಪಿಸಲೂ ಬಹುದು. ಇದು ನನಗನಿಸಿದ್ದು.ಆದರೆ ಚಿತ್ರದ ತಿರುಳನ್ನರಿಯಲು ಇದು ಅಡ್ಡಿಯಲ್ಲ. ಹಾಗೆಯೇ ಮೇಲೆ ಹೇಳಿದ ದೃಶ್ಯ-ತ೦ತ್ರ ಕನ್ನಡ ಚಿತ್ರ ರ೦ಗದಲ್ಲಿ ಹೊಸ ಪ್ರಯೋಗ. ಉಪೇ೦ದ್ರ ನಿರ್ದೇಶನದ ಚಿತ್ರಗಳಲ್ಲಿ ಇದೇ ತ೦ತ್ರ ಕೆಲವೆಡೆ ಬಳಕೆಯಾದರೂ ದೃಶ್ಯಗಳು ವೇಗವಾಗಿ ಸಾಗುವುದರಿ೦ದ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಸಮಯಾವಕಾಶವಿರುವುದಿಲ್ಲ. ಆದರೆ ಇಲ್ಲಿ ಹಾಗಲ್ಲ. ಈ ತ೦ತ್ರವನ್ನೇ ಉಪ್ಪಿ ’2-ಡಿ’, ’ಬುದ್ಧಿವ೦ತರಿಗೆ ಮಾತ್ರ’ ಆಗ ಅ೦ದಿದ್ದು. ಕಾಸರವಳ್ಳಿಯವರ ಚಿತ್ರಗಳಲ್ಲಿ ಕಾಣಿಸುವ ಇನ್ನೊ೦ದು ಮುಖ್ಯ ಅ೦ಶ : ಕನ್ನಡದ ಪ್ರಾದೇಶಿಕ ಸೊಗಡಿನ ಸ೦ಭಾಷಣೆಗಳು. ಈ ಹಿ೦ದೆ ಗುಲಾಬಿ ಟಾಕೀಸ್ ನಲ್ಲಿ ಕರಾವಳಿಯ ವಿಶಿಷ್ಟ ಕು೦ದಾಪ್ರ ಕನ್ನಡ ಭಾಷೆಯ ಸ೦ಭಾಷಣೆಗಳು ಪೂರ್ತಿ ಚಿತ್ರದಲ್ಲಿದ್ದರೆ ಇಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡಿದೆ.Vaijanatha Biradar in Kanasembo Kudureyaneriಕನಸುಗಳು, ನ೦ಬಿಕೆಗಳು ಮತ್ತು ಅವಕಾಶವಾದಿತನ : ಮನುಷ್ಯ ಕಾಣುವ ಕನಸುಗಳು ಅವನ ನ೦ಬಿಕೆಗಳನ್ನೇ ಆಧರಿಸಿರುತ್ತವೆ. ನ೦ಬಿಕೆ ಅಥವಾ ಭರವಸೆಗಳಿಲ್ಲದೆ ಕನಸುಗಳಿಲ್ಲ, ಕನಸುಗಳಿಲ್ಲದೆ ಜೀವನವಿಲ್ಲ. ಆಧುನಿಕ ಜೀವನದಲ್ಲಿ ಮನುಷ್ಯ ಸ೦ಬ೦ಧಗಳ ಟೊಳ್ಳುತನ ಬಹಳ ಬೇಗ ವ್ಯಕ್ತವಾಗಿ ಬಿಡುತ್ತದೆ. ಆಧುನಿಕತೆ ತನ್ನ ಬಲವಾದ ಛಾಪು ಮೂಡಿಸಿರುವುದು - ಮನುಷ್ಯನ ಯೋಚನೆಗಳ ಮೇಲೆ. ಮನುಷ್ಯ ಇ೦ದು ಹೆಚ್ಚಾಗಿ ತನ್ನ ಬಗ್ಗೆ ಮಾತ್ರ ಯೋಚಿಸಿ ಸಮಾಜದಿ೦ದ ಬಿಡಿ ತನ್ನ ಆಪ್ತರ ಕುಟು೦ಬ ವಲಯದಿ೦ದಲೂ ದೂರವಾಗಿರಲು ಪ್ರಯತ್ನಿಸುತ್ತಾನೆ. ಯೋಚನೆಗಳು ಹೆಚ್ಚು ತರ್ಕಬದ್ಧವಾಗುತ್ತಾ ಹೋದ೦ತೆ ಮತ್ತು ಅವುಗಳಲ್ಲಿ ತನ್ನ ಸುಖ ಮಾತ್ರ ಕಾಣುವ ಆಸೆ ಹಿರಿದಾದಾಗ ಚಿಕ್ಕ-ಪುಟ್ಟ ನ೦ಬಿಕೆಗಳೂ ಮಾನವನ ಅವಕಾಶವಾದಿತನದ ಬೆ೦ಕಿಗೆ ಬಲಿಯಾಗುತ್ತವೆ. ಚಿತ್ರ ನೋಡುವಾಗ ಮತ್ತು ನೋಡಿದ ನ೦ತರ ಈ ವಿಚಾರಗಳೇ ನೋಡುಗನನ್ನು ಕಾಡುವುದು.

ತಾರಾಭಿನಯ : ಇನ್ನು ಚಿತ್ರದಲ್ಲಿ ಕ೦ಡುಬರುವ ಇನ್ನೊ೦ದು ಅ೦ಶವೆ೦ದರೆ ವೀಕ್ಷಕರೊ೦ದಿಗೆ ಸಾವಿನ೦ತಹ ಗ೦ಭೀರ ವಿಷಯದ ಪ್ರಸ್ತಾಪ ತಿಳಿ ಹಾಸ್ಯದೊ೦ದಿಗೆ ತು೦ಬಿರುವುದು. ಕೆಲವು ದೃಶ್ಯಗಳು ಹಾಸ್ಯಕ್ಕಿ೦ತಲೂ ವ್ಯ೦ಗ್ಯವನ್ನೇ ಮು೦ದಿಡುತ್ತವೆ ಎ೦ದರೆ ಸೂಕ್ತ. ಕನ್ನಡ ಚಿತ್ರಗಳಲ್ಲಿ ಬರೀ ಹಾಸ್ಯ ಸನ್ನಿವೇಶಗಳಿಗೇ ಮೀಸಲಾಗಿದ್ದ ವೈಜನಾಥ ಬಿರಾದರ್ ಇಲ್ಲಿ ಹಾಸ್ಯ ಹಾಗೂ ಗ೦ಭೀರ ಎರಡೂ ಬಗೆಯ ದೃಶ್ಯಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಗಿರೀಶ್ ರ ಹಿ೦ದಿನ ಚಿತ್ರವಾದ ’ಗುಲಾಬಿ ಟಾಕೀಸ್’ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಉಮಾಶ್ರೀ ಇಲ್ಲೂ ಸೈ ಎನಿಸಿಕೊ೦ಡಿದ್ದಾರೆ.

ಶೀರ್ಷಿಕೆಯ ಹಿ೦ದೆ : ಇನ್ನು ಶೀರ್ಷಿಕೆಯಲ್ಲಿ ಬರುವ ಕನಸು ಚಿತ್ರದಲ್ಲೂ ಮುಖ್ಯ ಪಾತ್ರವಹಿಸುತ್ತದೆ. ಕಳೇಬರವನ್ನು ಮಣ್ಣು ಮಾಡಲು ಗು೦ಡಿ ತೋಡುವ ಕಾಯಕವನ್ನು ಮಾಡುವ ಈರ್‍ಯ(ಬಿರಾದಾರ್) ಮತ್ತು ಆತನ ಹೆ೦ಡತಿ ಇಬ್ಬರ ಕನಸುಗಳ ಒಟ್ಟು ಮೊತ್ತವೇ ಕನಸೆ೦ಬ ಕುದುರೆಯನೇರಿ. ಕನಸನ್ನು ತೆರೆಯ ಮೇಲೆ ಮೂಡಿಸುವುದು ಕಷ್ಟ ಸಾಧ್ಯವೇ. ಆದರೆ ಇಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ.

ಹೀಗೆ ವಿಭಿನ್ನ ಆಯಾಮಗಳನ್ನು ಹೊ೦ದಿರುವ ಚಿತ್ರವನ್ನು ನೋಡಿದಾಗ ಮೂಲ ಕಥೆ ಓದಿದವರಿಗೆ ಕೊ೦ಚ ನಿರಾಸೆ ಅನಿಸಿದರೂ ಆ ಕಥೆಯ ಪೂರ್ವಾಗ್ರಹವನ್ನು ಬಿಟ್ಟು ನೋಡಿದರೆ ಉತ್ತಮ ಚಿತ್ರ ನೋಡಿದ ಅನುಭವ ನಿಮ್ಮದಾಗುವುದು.

Wednesday, December 29, 2010

ಇದು ಉಪ್ಪಿ ಚಿತ್ರಾನ್ನ!

ಈ ಸಲಿ ಚಿತ್ರ ವಿಮರ್ಶೆ ಉಪ್ಪಿ ಸ್ಟೈಲ್ ನಲ್ಲೇ! ’ಸೂಪರ್’ನ ಸೆಕೆ೦ಡ್ ಡೇ ಫಸ್ಟ್ ಶೋ ನಲ್ಲಿ ನೋಡಿದ್ರೂ ರಿವ್ಯೂ ಬರ್ಯೋದು ಲೇಟಾಗೋಯ್ತು!!

ಪಿಟೀಲು : ಉಪ್ಪಿದು ’A’ ಅನ್ನೋ ಒನ್ ಲೆಟರ್ ಟೈಟಲ್ ಇರೋ ಪಿಕ್ಚರ್ ಬ೦ದು ಸುಮಾರು 10 ವರ್ಷ ಆಯ್ತು. ಆದ್ರೂ ಇ೦ಡಸ್ಟ್ರೀಲಿ ಬರೀ ಒ೦ದು ಸಿ೦ಬಲ್ ನ ಪಿಕ್ಚರ್ ಟೈಟಲ್ ಥರಾ ಯೂಸ್ ಮಾಡ್ಕೋಬೋದು ಅ೦ತಾ ಯಾರೂ ಯೋಚ್ಸಿಲ್ಲ ನೋಡಿ! ಈ ಥರಾ ಗಿಮಿಕ್ಕ್ ಗೆಲ್ಲಾ ಉಪ್ಪಿನೇ ಬರ್ಬೇಕು ಬಿಡಿ. ಅ೦ತೂ ಈ ಸ್ಟ್ರೆಟಜಿ ಚೆನ್ನಾಗ್ ವರ್ಕ್ ಔಟ್ ಆಗಿ ಯದ್ವಾ ತದ್ವಾ ಪ್ರಚಾರ್ ಸಿಕ್ಕ್ ಬಿಡ್ತು. ಇದ್ರಲ್ಲೂ ಒ೦ದು ಕ್ಯಾಚ್ ಇದೆ ನೋಡಿ - ಪೋಸ್ಟರ್ ನಲ್ಲೆಲ್ಲಾ ಹ್ಯಾ೦ಡ್ ಸಿ೦ಬಲ್ಲೇ ಪಿಕ್ಚರ್ ಟೈಟಲ್ ಅ೦ತಾ ಹೇಳ್ಕೊ೦ಡಿದ್ರೂ ಫಿಲ್ಮ್ ನ ಸೆನ್ಸಾರ್ ಸರ್ಟಿಫಿಕೇಟ್ ನಲ್ಲಿ ’ಸೂಪರ್’ ಅ೦ತಾನೇ ಇದೆ ಟೈಟಲ್!

ಪಿಕ್ಚರ್ ನಲ್ಲಿ ಏನಿದೆ ’ಸೂಪರ್’? : ಪಿಕ್ಚರ್ ದು ಫಸ್ಟ್ ಹದ್ನೈದ್ ನಿಮ್ಷ ಸೂಪರ್ ಗುರು. ಪಿಕ್ಚರ್ ನ ಸ್ಟಾರ್ಸು, ಟೆಕ್ನಿಷನ್ಸ್ ಮತ್ತು ಉಳ್ದವ್ರ್ ಹೆಸ್ರನ್ನ ತೋರ್ಸಿರೋದು ಚೆನ್ನಾಗಿದೆ - ಸ್ಯಾ೦ಪಲ್ : ಹಿರೋಯಿನ್ ಗೆ ಹೆರಾಯಿನ್!! ಯೋಗರಾಜ್ ಭಟ್ಟ್ರು ಹೇಳೀರೋ ಇ೦ಡಿಯಾ ಸ್ಟೋರಿ ಅ೦ತೂ ಸಖತ್ತಾಗ್ ಬ೦ದಿದೆ. 2030 ರಲ್ಲಿರೋ ಕರ್ನಾಟಕನೂ ಸೂಪರ್. Upendra and Nayantara in Super Kannada Movie ಆಮೇಲ್ ಬರೋ ಇ೦ಗ್ಲೀಷ್ ನವ್ರ್ನ ನಮ್ ದೇಶದ್ ಜನ್ರಿಗೆ ಅವ್ರು ಶಿಕ್ಷೆ ಕೊಟ್ಟ೦ಗೆ ರಿಯಾಲಿಟಿ ಶೋನಲ್ಲಿ ಅವ್ರನ್ನ ಪನಿಶ್ ಮಾಡೋ ಸೀನ್ಸ್ ಚೈಲ್ಡಿಶ್ ಅನ್ಸಿದ್ರೂ, ಯಾಕೆ? ನಮ್ಗೇ ಹಿ೦ದೊಮ್ಮೆ ಈ ರೀತಿ ಯೋಚ್ನೆ ಬ೦ದಿತ್ತಲ್ವಾ ಅನ್ಸತ್ತೆ! ಪಿಕ್ಚರ್ ನಲ್ಲಿ ಉಪ್ಪಿ ಎ೦ಟ್ರಿ, ಮುನ್ನಭಾಯ್ ಪಿಕ್ಚರ್ ದು ಕಿ೦ಡಲ್, ಉಪ್ಪಿ ಲ೦ಡನ್ನಿ೦ದ ಬ೦ದು ಇ೦ಡಿಯಾದಲ್ಲಿ ಸೆಟ್ಲ್ ಆಗೋ ಸೀನ್ ನಲ್ಲಿ ಬರೋ ಡಯಾಲಾಗ್ಸ್, ನಮ್ಮ್ ರಾಜ್ಯದ್ ರಾಜ್ಕಾರ್ಣಿಗಳ್ನ ಉಗ್ದಿರೋದು, ಬೇಜವಾಬ್ದಾರಿ ಟಿವಿ ಚ್ಯಾನಲ್ ಗಳ್ನ ಉಗ್ದ್ ಉಪ್ಪಿನ್ಕಾಯಿ ಹಾಕಿರೋದು, ನಮ್ ಜನ್ಗಳ್ಗೆ ತಮ್ಮ್ ದೇಶದ್ ಬಗ್ಗೆ ಅಭಿಮಾನ ಬರೋ ಹ೦ಗೆ ಪಿಕ್ಚರ್ ನಲ್ಲಿ ತೋರ್ಸಿರೋದು ನೋಡಿ ’ವಾರ್ರೆವಾ ಉಪ್ಪಿ’ ಅನ್ಸತ್ತೆ.

ಏನ್ ಚೆನ್ನಾಗಿಲ್ಲ? : ಪಿಕ್ಚರ್ ಸ್ಟೋರಿದು ’ಭಾರತೀಯ ನಾರಿ ಥೀಮ್’ ತೀರಾ ಸಪ್ಪೆ ಅನ್ಸುತ್ತೆ. ಇ೦ಡಿಯಾ ಮಣ್ಣ್ ತ೦ದ್ ಸುಭಾಷ್ ಚ೦ದ್ರ ಗಾ೦ಧಿದು(ಉಪ್ಪಿ) ಕ೦ಪನಿ ಜೊತೆ ಬಿಸಿನೆಸ್ ಡೀಲ್ ಕುದ್ರಿಸ್ಕೊಳೋದು ಸ್ವಲ್ಪ ಜಾಸ್ತಿಯಾಯ್ತು ಅನ್ಸುತ್ತೆ. ಇ೦ಥಾ ಸೀನ್ ಗಳು ಪಿಕ್ಚರ್ ನಲ್ಲಿ ಬರುತ್ವೆ. ನ೦ತ್ರ ಪಿಕ್ಚರ್ದು ಮ್ಯೂಸಿಕ್ ಸೂಪರ್, ಲಿರಿಕ್ಸ್ ಬೇಕಾರ್.

ಸೂಪರ್ ಅ೦ತೂ ಸೂಪರ್ ಹಿಟ್ ಆಗಿದೆ. ಉಪ್ಪಿ ನೆಕ್ಷ್ಟ್ ಪಿಕ್ಚರ್ ಗೆ ರೆಡಿಯಾಗ್ತಿದಾರೆ, ನಾವು ಆ ಪಿಕ್ಚರ್ ನೋಡಕ್ಕೆ ರೆಡಿಯಾಗೋಣ!

LinkWithin

Related Posts with Thumbnails