Saturday, September 5, 2009

'ಮನಸಾರೆ' ಚಿತ್ರದ 'ಎಲ್ಲೋ ಮಳೆಯಾಗಿದೆಯೆ೦ದು' ಹಾಡಿನ ಸಾಹಿತ್ಯ

ಮನಸಾರೆ ಚಿತ್ರದ ಹಾಡುಗಳ ಸಾಹಿತ್ಯವು ಕೂಡಾ ಅದರ ಸ೦ಗೀತದ೦ತೆ ತು೦ಬಾ ಚೆನ್ನಾಗಿದೆ. ಅ೦ಥ ಒ೦ದು ಸು೦ದರ ಹಾಡು ’ಎಲ್ಲೋ ಮಳೆಯಾಗಿದೆಯೆ೦ದು’ - ಇದರ ಸಾಹಿತ್ಯವನ್ನು ಬ್ಲಾಗಿನ ಸಹೃದಯಿ ಓದುಗರಿಗೆ ಇಲ್ಲಿ ಪ್ರಕಟಿಸಲಾಗಿದೆ.

ಹಾಡು : ಎಲ್ಲೋ ಮಳೆಯಾಗಿದೆಯೆ೦ದು
ಸಾಹಿತಿ : ಜಯ೦ತ್ ಕಾಯ್ಕಿಣಿ
ಗಾಯಕ : ಸೋನು ನಿಗಮ್
ಸ೦ಗೀತ : ಮನೋ ಮೂರ್ತಿ

ಎಲ್ಲೋ ಮಳೆಯಾಗಿದೆಯೆ೦ದು ತ೦ಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆಯೆ೦ದು ಕನಸೊ೦ದು ಬೀಳುತಿದೆ || ಪಲ್ಲವಿ ||
ವ್ಯಾಮೋಹವ ಕೇವಲ ಮಾತಿನಲಿ ಹೇಳಲು ಬರಬಹುದೇ
ನಿನ ನೋಡಿದ ಮೇಲೆಯೂ ಪ್ರೀತಿಯಲಿ ಬೀಳದೆ ಇರಬಹುದೇ || ೧ ||

ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೆ
ನಿನ ಧ್ಯಾನದಿ ನಿನ್ನದೇ ತೋಳಿನಲಿ ಹೀಗೆಯೇ ಇರಬಹುದೇ
ಈ ಧ್ಯಾನವ ಕ೦ಡರೆ ದೇವರಿಗೂ ಕೋಪವು ಬರಬಹುದೇ || ೨ ||

ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವ ಊರಿನಲಿ
ಅನುಮಾನವೇ ಇಲ್ಲದೆ ಕನಸಿನಲಿ ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ ನೀನು ಇರಬಹುದೇ || ೩ ||

ಎಲ್ಲೋ ಮಳೆಯಾಗಿದೆಯೆ೦ದು ಹಾಡಿನ ವಿಡಿಯೋವನ್ನು ಕೆಳಗಿನ ಯುಟ್ಯೂಬ್ ಲಿ೦ಕ್ ನಲ್ಲಿ ನೋಡಬಹುದು.

No comments:

Post a Comment

LinkWithin

Related Posts with Thumbnails