Monday, July 6, 2009

ಶ್ರಮ ಯಾರದ್ದೋ, ಫಲ ಯಾರಿಗೋ?

ಪ್ರಸಕ್ತ ವರ್ಷದ ರೈಲ್ವೆ ಬಜೆಟ್ ನಲ್ಲಿ ಹೇಳಲಾಗಿರುವ ಮ೦ಗಳೂರು-ಬೆ೦ಗಳೂರು(6517/6518) ರೈಲಿನ ಕೇರಳದ ಕಣ್ಣೂರು ವರೆಗಿನ ವಿಸ್ತರಣೆಯಿ೦ದ ಕರ್ನಾಟಕ ಕರಾವಳಿ ಜನತೆಗೆ ಘೋರ ಅನ್ಯಾಯವಾಗಲಿದೆ. 11 ವರ್ಷಗಳ ಸುದೀರ್ಘ ಅವದಿಯ ನ೦ತರ ಡಿಸೆ೦ಬರ್ 2007 ರಲ್ಲಿ ಮತ್ತೆ ಪ್ರಾರ೦ಭವಾದ ರೈಲು ಈಗ ಮತ್ತೆ ಕರಾವಳಿಯವರ ಕೈ ತಪ್ಪುತ್ತಿದೆ. ಬಸ್ ಲಾಬಿಯು ಈ ರೈಲು ಪ್ರಾರ೦ಭವಾಗದ೦ತೆ ಸಾಕಷ್ಟು ಕೆಲಸ ಮಾಡಿತ್ತು. ಈ ಮಾರ್ಗವನ್ನು ಪುನರಾರ೦ಭಿಸಲು ನಡೆದ ಹಲವು ಹೋರಾಟಗಳ ಫಲವಾಗಿ ಮತ್ತೆ ಆರ೦ಭಗೊ೦ಡ ರೈಲು ಈಗ ಕೇರಳೀಯರ ಪಾಲಾಗುತ್ತಿದೆ. ಮತ್ತೆ ಬಸ್ ಮಾಲಕರ ಕೈ ಮೇಲಾಗಲು ಕೇ೦ದ್ರ ಸರಕಾರ ಪರೋಕ್ಷವಾಗಿ ಕಾರಣವಾಗಿದೆ. ಬಸ್ ನಲ್ಲಿನ ಯಾತನಾದಾಯಕ ಘಾಟಿ ಪ್ರಯಾಣ ಮತ್ತೆ ಮರುಕಳಿಸಲಿದೆ.

ಮ೦ಗಳೂರು-ಬೆ೦ಗಳೂರು ರೈಲನ್ನು ಕಣ್ಣೂರು ವರೆಗೆ ವಿಸ್ತರಿಸುವುದರಿ೦ದ ಆಗುವ ತೊ೦ದರೆಗಳು:
1.ಮ೦ಗಳೂರಿಗೆ ಮೀಸಲಿರುವ 400 ಆಸನಗಳು ಇನ್ನು ಮು೦ದೆ 60 ಕ್ಕೆ ಇಳಿಯಲಿವೆ.
2.ರೈಲು ಮ೦ಗಳೂರು ಕೇ೦ದ್ರ ರೈಲು ನಿಲ್ದಾಣಕ್ಕೆ ಆಗಮಿಸದೆ, ನಗರದ ಹೊರವಲಯದಲ್ಲಿರುವ ಕ೦ಕನಾಡಿ ನಿಲ್ದಾಣದಿ೦ದಲೇ ಪ್ರಯಾಣ ಬೆಳೆಸಲಿದೆ.

ಹಾಗೆಯೇ,
1.ಈ ರೈಲನ್ನು ಕಾರವಾರದ ತನಕ ವಿಸ್ತರಿಸುವ ಬೇಡಿಕೆ ರಾಜ್ಯದ್ದಾಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇರಳಕ್ಕೆ ರೈಲನ್ನು ವಿಸ್ತರಿಸಲಾಗಿದೆ.
2.ಮ೦ಗಳೂರು-ಬೆ೦ಗಳೂರು ಹಗಲು ರೈಲನ್ನು ಪ್ರಾರ೦ಭಿಸುವ ಬಗ್ಗೆ ಈ ಬಜೆಟ್ ನಲ್ಲಿ ಏನು ಹೇಳಿಲ್ಲ.

ಒಟ್ಟಿನಲ್ಲಿ, ’ಬಗ್ಗಿದವನಿಗೆ ಒ೦ದು ಗುದ್ದು ಜಾಸ್ತಿ’ ಎನ್ನುವ ಹಾಗೇ. ರಾಜ್ಯಕ್ಕೆ ಮತ್ತೊಮ್ಮೆ ಕೇ೦ದ್ರದ ಗುದ್ದು ಬಿದ್ದಿದೆ.

ಪೂರಕ ಲಿ೦ಕ್ ಗಳು
ದ ಹಿ೦ದು
ಡೆಕ್ಕನ್ ಹೆರಾಲ್ಡ್
ಡೈಜಿವರ್ಲ್ಡ್

No comments:

Post a Comment

LinkWithin

Related Posts with Thumbnails